<p><strong>ನವದೆಹಲಿ:</strong> ಸೋರೊಸ್ ಮತ್ತು ಉದ್ಯಮಿ ಗೌತಮ್ ಅದಾನಿ ಹಗರಣದ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ಸಂಸದರ ನಡುವೆ ಗದ್ದಲ ಉಂಟಾದ ಪರಿಣಾಮ ರಾಜ್ಯಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. </p><p>ಇಂದು (ಮಂಗಳವಾರ) ಅಪರಾಹ್ನ 12 ಗಂಟೆಗೆ ಸದನ ಸೇರಿದಾಗ, ಕಾಂಗ್ರೆಸ್ ಮತ್ತು ಜಾರ್ಜ್ ಸೋರೊಸ್ ನಡುವಣ ನಂಟಿನ ಕುರಿತು ಪ್ರಸ್ತಾಪಿಸಿದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. </p><p>ಸದನದಲ್ಲಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸೋರೊಸ್ ಅನುದಾನಿತ ಸಂಸ್ಥೆಯ ಪಾತ್ರದ ಕುರಿತು ಪ್ರಶ್ನೆ ಎತ್ತಿದರು. </p><p>ಇದು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು. </p><p>ಈ ವಿಷಯವನ್ನು ನಡ್ಡಾ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸಂಸದರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಉತ್ತರ ನೀಡುವಂತೆ ಒತ್ತಾಯಿಸಿದವು. </p><p>ಇದಾರ ನಂತರ ₹23,000 ಕೋಟಿ ಲಂಚ ನೀಡಿರುವ ಅದಾನಿ ವಿಷಯವನ್ನು ಪ್ರಸ್ತಾಪಿಸಿದ ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ಉಪನಾಯಕ ಪ್ರಮೋದ್ ತಿವಾರಿ, ಚರ್ಚೆಗೆ ಪಟ್ಟು ಹಿಡಿದರು. </p><p>ಎರಡೂ ಕಡೆಯಿಂದ ಗದ್ದಲ ಉಂಟಾದ ಪರಿಣಾಮ ಸಭಾಪತಿ ಸದನವನ್ನು ಮುಂದೂಡಿದರು. </p>.‘ಸೋರೊಸ್’ ನೆರವು ಪಡೆಯುವ ಸಂಸ್ಥೆ ಜೊತೆ ಸೋನಿಯಾ ನಂಟು: ಬಿಜೆಪಿ ಆರೋಪ.‘ಸೋರೊಸ್’ ನೆರವು ಪಡೆಯುವ ಸಂಸ್ಥೆ ಜೊತೆ ಸೋನಿಯಾ ನಂಟು: ಬಿಜೆಪಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸೋರೊಸ್ ಮತ್ತು ಉದ್ಯಮಿ ಗೌತಮ್ ಅದಾನಿ ಹಗರಣದ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ಸಂಸದರ ನಡುವೆ ಗದ್ದಲ ಉಂಟಾದ ಪರಿಣಾಮ ರಾಜ್ಯಸಭೆ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. </p><p>ಇಂದು (ಮಂಗಳವಾರ) ಅಪರಾಹ್ನ 12 ಗಂಟೆಗೆ ಸದನ ಸೇರಿದಾಗ, ಕಾಂಗ್ರೆಸ್ ಮತ್ತು ಜಾರ್ಜ್ ಸೋರೊಸ್ ನಡುವಣ ನಂಟಿನ ಕುರಿತು ಪ್ರಸ್ತಾಪಿಸಿದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. </p><p>ಸದನದಲ್ಲಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ನಡ್ಡಾ, ದೇಶವನ್ನು ಅಸ್ಥಿರಗೊಳಿಸಲು ಸೋರೊಸ್ ಅನುದಾನಿತ ಸಂಸ್ಥೆಯ ಪಾತ್ರದ ಕುರಿತು ಪ್ರಶ್ನೆ ಎತ್ತಿದರು. </p><p>ಇದು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು. </p><p>ಈ ವಿಷಯವನ್ನು ನಡ್ಡಾ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸಂಸದರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಉತ್ತರ ನೀಡುವಂತೆ ಒತ್ತಾಯಿಸಿದವು. </p><p>ಇದಾರ ನಂತರ ₹23,000 ಕೋಟಿ ಲಂಚ ನೀಡಿರುವ ಅದಾನಿ ವಿಷಯವನ್ನು ಪ್ರಸ್ತಾಪಿಸಿದ ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ಉಪನಾಯಕ ಪ್ರಮೋದ್ ತಿವಾರಿ, ಚರ್ಚೆಗೆ ಪಟ್ಟು ಹಿಡಿದರು. </p><p>ಎರಡೂ ಕಡೆಯಿಂದ ಗದ್ದಲ ಉಂಟಾದ ಪರಿಣಾಮ ಸಭಾಪತಿ ಸದನವನ್ನು ಮುಂದೂಡಿದರು. </p>.‘ಸೋರೊಸ್’ ನೆರವು ಪಡೆಯುವ ಸಂಸ್ಥೆ ಜೊತೆ ಸೋನಿಯಾ ನಂಟು: ಬಿಜೆಪಿ ಆರೋಪ.‘ಸೋರೊಸ್’ ನೆರವು ಪಡೆಯುವ ಸಂಸ್ಥೆ ಜೊತೆ ಸೋನಿಯಾ ನಂಟು: ಬಿಜೆಪಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>