ಉತ್ತಮ ಕಾರ್ಯಕ್ಕಾಗಿ ತಂದೆ, ತಾಯಿ, ಮನೆ ಸೇರಿದಂತೆ ಎಲ್ಲವನ್ನೂ ತೊರೆದು ಸಾಧುಗಳಾಗಿರುವ ನಾವು; ತಂಬಾಕು ಸೇವನೆಯನ್ನು ದೂರ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹಲವು ಸಾಧುಗಳ ಕೈಗಳಲ್ಲಿ ಅಡಗಿದ್ದ ಮಣ್ಣಿನಿಂದ ಮಾಡಿದ ತಂಬಾಕು ಸೇವನೆಗೆ ಬಳಸುವ ಚಿಲುಮೆ(ಪೈಪ್)ಗಳನ್ನು ರಾಮ್ದೇವ್ ತೆಗೆದುಕೊಂಡಿದ್ದು, ತಂಬಾಕು ಸೇವನೆ ನಿಲ್ಲಿಸಲು ಪ್ರಮಾಣ ಮಾಡುವಂತೆ ಮಾಡಿದ್ದಾರೆ. ಅವರಿಂದ ಪಡೆದಿರುವ ಚಿಲುಮೆಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಿರುವ ಮ್ಯೂಸಿಯಂನಲ್ಲಿ ಇಡುವುದಾಗಿ ತಿಳಿಸಿದ್ದಾರೆ.