<p><strong>ಅಯೋಧ್ಯೆ:</strong> ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೊಂಡು ಇಂದಿಗೆ (ಜ.22) ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಭಕ್ತರ ದಂಡೇ ಹರಿದುಬಂದಿದೆ.</p><p>ಶ್ರೀರಾಮನ ದರ್ಶನಕ್ಕೆ ಬಂದ ಹೈದರಾಬಾದ್ ಮೂಲದ ಭಕ್ತರೊಬ್ಬರು ಮಾತನಾಡಿ. ‘ನಾವು ಕಳೆದ ಮೂರು ತಿಂಗಳಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆವು. ಮೂರು ದಿನಗಳ ಹಿಂದೆ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಕೈಗೊಂಡೆವು. ಅಲ್ಲಿಂದ ಅಯೋಧ್ಯೆಗೆ ಬಂದಿದ್ದೇವೆ. ಈ ಕ್ಷಣಕ್ಕೆ 500 ವರ್ಷಗಳ ಹೋರಾಟ ಬೇಕಾಯಿತು. ಸರತಿ ಸಾಲಿನ ವ್ಯವಸ್ಥೆಯಾಗಲಿ, ಭದ್ರತಾ ವ್ಯವಸ್ಥೆಯಾಗಲಿ, ದೇವಸ್ಥಾನದ ಒಳಗಿನ ಸೌಕರ್ಯವಿರಲಿ. ಸಿದ್ಧತೆಗಳನ್ನು ಚೆನ್ನಾಗಿ ಮಾಡಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. </p><p>ರಾಜಸ್ಥಾನದ ಮಹಿಳೆಯೊಬ್ಬರು, ‘ರಾಮ್ ಲಲ್ಲಾನ ಜನ್ಮದಿನವನ್ನು ಆಚರಿಸಲು ನಾವು ಇಲ್ಲಿದ್ದೇವೆ. ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಸ್ಥಾಪಿಸಲು ಅನೇಕರು ಶ್ರಮಿಸಿದ್ದಾರೆ’ ಎಂದರು. </p><p>ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿರುವ ಕಾರಣ ಶ್ರೀರಾಮಂದಿರಕ್ಕೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.</p><p>ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಒಂದು ವರ್ಷದ ದಿನವೆಂದು ಹಿಂದೂ ಕ್ಯಾಲೆಂಡರ್ ಆಧರಿಸಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜ.11 ರಂದು ‘ಪ್ರತಿಷ್ಠಾ ದ್ವಾದಶಿ’ ಎಂದು ವಿಶೇಷ ಪೂಜೆ ಮೂಲಕ ಆಚರಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ:</strong> ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೊಂಡು ಇಂದಿಗೆ (ಜ.22) ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಭಕ್ತರ ದಂಡೇ ಹರಿದುಬಂದಿದೆ.</p><p>ಶ್ರೀರಾಮನ ದರ್ಶನಕ್ಕೆ ಬಂದ ಹೈದರಾಬಾದ್ ಮೂಲದ ಭಕ್ತರೊಬ್ಬರು ಮಾತನಾಡಿ. ‘ನಾವು ಕಳೆದ ಮೂರು ತಿಂಗಳಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆವು. ಮೂರು ದಿನಗಳ ಹಿಂದೆ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಕೈಗೊಂಡೆವು. ಅಲ್ಲಿಂದ ಅಯೋಧ್ಯೆಗೆ ಬಂದಿದ್ದೇವೆ. ಈ ಕ್ಷಣಕ್ಕೆ 500 ವರ್ಷಗಳ ಹೋರಾಟ ಬೇಕಾಯಿತು. ಸರತಿ ಸಾಲಿನ ವ್ಯವಸ್ಥೆಯಾಗಲಿ, ಭದ್ರತಾ ವ್ಯವಸ್ಥೆಯಾಗಲಿ, ದೇವಸ್ಥಾನದ ಒಳಗಿನ ಸೌಕರ್ಯವಿರಲಿ. ಸಿದ್ಧತೆಗಳನ್ನು ಚೆನ್ನಾಗಿ ಮಾಡಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. </p><p>ರಾಜಸ್ಥಾನದ ಮಹಿಳೆಯೊಬ್ಬರು, ‘ರಾಮ್ ಲಲ್ಲಾನ ಜನ್ಮದಿನವನ್ನು ಆಚರಿಸಲು ನಾವು ಇಲ್ಲಿದ್ದೇವೆ. ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಸ್ಥಾಪಿಸಲು ಅನೇಕರು ಶ್ರಮಿಸಿದ್ದಾರೆ’ ಎಂದರು. </p><p>ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿರುವ ಕಾರಣ ಶ್ರೀರಾಮಂದಿರಕ್ಕೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.</p><p>ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಒಂದು ವರ್ಷದ ದಿನವೆಂದು ಹಿಂದೂ ಕ್ಯಾಲೆಂಡರ್ ಆಧರಿಸಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜ.11 ರಂದು ‘ಪ್ರತಿಷ್ಠಾ ದ್ವಾದಶಿ’ ಎಂದು ವಿಶೇಷ ಪೂಜೆ ಮೂಲಕ ಆಚರಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>