ನವದೆಹಲಿ: ಮಹಾರಾಷ್ಟ್ರದ ‘ಮಹಾ ವಿಕಾಸ ಆಘಾಡಿ’ ಸರ್ಕಾರದ ಪತನ ಮತ್ತು ಗೋವಾ ಕಾಂಗ್ರೆಸ್ನಲ್ಲಿನ ಬಿಕ್ಕಟ್ಟಿನ ನಂತರ ಎಲ್ಲರ ಕಣ್ಣುಗಳು ಜಾರ್ಖಂಡ್ ಕಡೆಗೆ ನೆಟ್ಟಿವೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯ ಜನತಾ ದಳ (ಆರ್ಜೆಡಿ), ಕಾಂಗ್ರೆಸ್ ಮೈತ್ರಿಕೂಟದ ಜಾರ್ಖಂಡ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲದಿರುವುದು ಮತ್ತು ತನ್ನ ತೆಕ್ಕೆಗೆ ಮತ್ತಷ್ಟು ರಾಜ್ಯಗಳನ್ನು ಸೇರಿಸಿ
ಕೊಳ್ಳಲುಬಿಜೆಪಿಯು ತೆರೆದ ಬಾಹುಗಳಿಂದ ಕಾದು ಕುಳಿತಿರುವುದೇ ಎಲ್ಲರೂ ಜಾರ್ಖಂಡ್ನತ್ತ ಚಿತ್ತ ಹರಿಸಲು ಕಾರಣ.