<p><strong>ತಿರುವನಂತಪುರ</strong>: ಕೇರಳದ ತ್ರಿಶ್ಶೂರ್ ಜಿಲ್ಲೆಯ ಶ್ರೀ ಕೂಡಲ್ಮಾಣಿಕ್ಯಂ ದೇವಾಲಯದಲ್ಲಿ ನಡೆದಿದೆ ಎನ್ನಲಾಗಿದ್ದ ಜಾತಿ ತಾರತಮ್ಯ ವಿಚಾರವು ಸಿಬ್ಬಂದಿಯ ರಾಜೀನಾಮೆಯಲ್ಲಿ ಕೊನೆಗೊಳ್ಳದೆ ಇದೀಗ ನ್ಯಾಯಾಲಯದ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.</p>.<p>ದೇವಾಲಯದ ಕಳಕಮ್ (ಹೂವಿನ ಹಾರ ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ) ಹುದ್ದೆಗೆ ಹಿಂದೂ–ಎಳವ ಒಬಿಸಿ ಸಮುದಾಯದ ಅಭ್ಯರ್ಥಿಯನ್ನು ನೇಮಕ ಮಾಡುವ ದೇವಸ್ವಂ ಮಂಡಳಿಯ ನಿರ್ಧಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಮೇಲ್ಜಾತಿಯ ಹಿಂದೂ–ವಾರಿಯರ್ ಸಮುದಾಯ ಹೇಳಿದೆ. </p>.<p>ಇತ್ತೀಚೆಗಷ್ಟೇ ತಿರುವನಂತಪುರದ ನಿವಾಸಿ, ಎಳವ ಸಮುದಾಯದ ಬಾಲು ಬಿ.ಎ ಎಂಬುವವರನ್ನು ಕಳಕಮ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ, ಈ ಹುದ್ದೆಯು ಮೇಲ್ಜಾತಿಯ ವಾರಿಯರ್ ಸಮುದಾಯಕ್ಕೆ ಪಾರಂಪರಿಕವಾಗಿ ಮೀಸಲಿದೆ. ಹೀಗಾಗಿ ಅವರನ್ನೇ ನೇಮಕಗೊಳಿಸಬೇಕು ಎಂದು ದೇವಾಲಯದ ತಂತ್ರಿಗಳು (ಬ್ರಾಹ್ಮಣ ಸಮುದಾಯ) ಒತ್ತಡ ಹೇರಿದ್ದರು.</p>.<p>ತಂತ್ರಿಗಳ ಒತ್ತಡಕ್ಕೆ ಮಣಿದು ಬಾಲು ಅವರನ್ನು ದೇವಸ್ವಂ ಮಂಡಳಿಯು ಕಚೇರಿ ಕೆಲಸಕ್ಕೆ ನೇಮಿಸಿತ್ತು. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಬಾಲು ವೈಯಕ್ತಿಕ ಕಾರಣ ನೀಡಿ, ಹುದ್ದೆಗೆ ರಾಜೀನಾಮೆ ನೀಡಿದ್ದರು.</p>.<p>ಇದೀಗ ಎಳವ ಸಮುದಾಯದ ಮತ್ತೋರ್ವ ಅಭ್ಯರ್ಥಿ ಕೆ.ಎಸ್.ಅನುರಾಗ್ ಎಂಬುವವರನ್ನು ಹುದ್ದೆಗೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಸೇವೆಗೆ ಸೇರುವ ಮುನ್ನವೇ ‘ಸಮಸ್ತ ಕೇರಳ ವಾರಿಯರ್ ಸಮಾಜಂ’ನ ಪ್ರಧಾನ ಕಾರ್ಯದರ್ಶಿ ವಿ.ವಿ.ಮುರುಳೀಧರನ್ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. </p>.<p>‘ಕಳಕಮ್ ಹುದ್ದೆ ಮೇಲೆ ವಾರಿಯರ್ ಸಮುದಾಯಕ್ಕೆ ಪಾರಂಪರಿಕ ಹಕ್ಕಿದೆ. ಆದಾಗ್ಯೂ, ದೇವಸ್ವಂ ಮಂಡಳಿ ನಮ್ಮ ಗಮನಕ್ಕೂ ತರದೆ ಆ ಹುದ್ದೆಯ ನೇಮಕಕ್ಕೆ ಮುಂದಾಗಿದೆ. ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಈ ವಿಚಾರವನ್ನು ತಾರತಮ್ಯ ಎಂದು ಪರಿಗಣಿಸುವ ಅಗತ್ಯವಿಲ್ಲ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳದ ತ್ರಿಶ್ಶೂರ್ ಜಿಲ್ಲೆಯ ಶ್ರೀ ಕೂಡಲ್ಮಾಣಿಕ್ಯಂ ದೇವಾಲಯದಲ್ಲಿ ನಡೆದಿದೆ ಎನ್ನಲಾಗಿದ್ದ ಜಾತಿ ತಾರತಮ್ಯ ವಿಚಾರವು ಸಿಬ್ಬಂದಿಯ ರಾಜೀನಾಮೆಯಲ್ಲಿ ಕೊನೆಗೊಳ್ಳದೆ ಇದೀಗ ನ್ಯಾಯಾಲಯದ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.</p>.<p>ದೇವಾಲಯದ ಕಳಕಮ್ (ಹೂವಿನ ಹಾರ ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ) ಹುದ್ದೆಗೆ ಹಿಂದೂ–ಎಳವ ಒಬಿಸಿ ಸಮುದಾಯದ ಅಭ್ಯರ್ಥಿಯನ್ನು ನೇಮಕ ಮಾಡುವ ದೇವಸ್ವಂ ಮಂಡಳಿಯ ನಿರ್ಧಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಮೇಲ್ಜಾತಿಯ ಹಿಂದೂ–ವಾರಿಯರ್ ಸಮುದಾಯ ಹೇಳಿದೆ. </p>.<p>ಇತ್ತೀಚೆಗಷ್ಟೇ ತಿರುವನಂತಪುರದ ನಿವಾಸಿ, ಎಳವ ಸಮುದಾಯದ ಬಾಲು ಬಿ.ಎ ಎಂಬುವವರನ್ನು ಕಳಕಮ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ, ಈ ಹುದ್ದೆಯು ಮೇಲ್ಜಾತಿಯ ವಾರಿಯರ್ ಸಮುದಾಯಕ್ಕೆ ಪಾರಂಪರಿಕವಾಗಿ ಮೀಸಲಿದೆ. ಹೀಗಾಗಿ ಅವರನ್ನೇ ನೇಮಕಗೊಳಿಸಬೇಕು ಎಂದು ದೇವಾಲಯದ ತಂತ್ರಿಗಳು (ಬ್ರಾಹ್ಮಣ ಸಮುದಾಯ) ಒತ್ತಡ ಹೇರಿದ್ದರು.</p>.<p>ತಂತ್ರಿಗಳ ಒತ್ತಡಕ್ಕೆ ಮಣಿದು ಬಾಲು ಅವರನ್ನು ದೇವಸ್ವಂ ಮಂಡಳಿಯು ಕಚೇರಿ ಕೆಲಸಕ್ಕೆ ನೇಮಿಸಿತ್ತು. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಬಾಲು ವೈಯಕ್ತಿಕ ಕಾರಣ ನೀಡಿ, ಹುದ್ದೆಗೆ ರಾಜೀನಾಮೆ ನೀಡಿದ್ದರು.</p>.<p>ಇದೀಗ ಎಳವ ಸಮುದಾಯದ ಮತ್ತೋರ್ವ ಅಭ್ಯರ್ಥಿ ಕೆ.ಎಸ್.ಅನುರಾಗ್ ಎಂಬುವವರನ್ನು ಹುದ್ದೆಗೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಸೇವೆಗೆ ಸೇರುವ ಮುನ್ನವೇ ‘ಸಮಸ್ತ ಕೇರಳ ವಾರಿಯರ್ ಸಮಾಜಂ’ನ ಪ್ರಧಾನ ಕಾರ್ಯದರ್ಶಿ ವಿ.ವಿ.ಮುರುಳೀಧರನ್ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. </p>.<p>‘ಕಳಕಮ್ ಹುದ್ದೆ ಮೇಲೆ ವಾರಿಯರ್ ಸಮುದಾಯಕ್ಕೆ ಪಾರಂಪರಿಕ ಹಕ್ಕಿದೆ. ಆದಾಗ್ಯೂ, ದೇವಸ್ವಂ ಮಂಡಳಿ ನಮ್ಮ ಗಮನಕ್ಕೂ ತರದೆ ಆ ಹುದ್ದೆಯ ನೇಮಕಕ್ಕೆ ಮುಂದಾಗಿದೆ. ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಈ ವಿಚಾರವನ್ನು ತಾರತಮ್ಯ ಎಂದು ಪರಿಗಣಿಸುವ ಅಗತ್ಯವಿಲ್ಲ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>