<p><strong>ನವದೆಹಲಿ </strong>: ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ, ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ ಗೆದ್ದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ಗೆ ಸೋಲಾಗಿದೆ. ಸೋಲಿನ ಜತೆಗೆ ಕಾಂಗ್ರೆಸ್ ಪಕ್ಷವು ಟೀಕೆ ಮತ್ತು ಅತೃಪ್ತಿಯನ್ನೂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಉಪಸಭಾಪತಿ ಸ್ಥಾನಕ್ಕೆ ಬೇರೆ ಯಾವುದಾದರೂಪಕ್ಷದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂಬುದು ವಿರೋಧ ಪಕ್ಷಗಳ ಗುಂಪಿನಲ್ಲಿರುವ ಬಹುತೇಕ ಪಕ್ಷಗಳ ಅಭಿಪ್ರಾಯವಾಗಿದೆ.</p>.<p>ಎನ್ಡಿಎ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಈ ಸೋಲು ಹಿನ್ನಡೆ ಅಲ್ಲ ಎಂದು ಬಿಂಬಿಸಲು ಈ ಪಕ್ಷಗಳು ಯತ್ನಿಸಿವೆ. ಹಾಗಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನದ ಮಾತುಗಳು ಸಂಸತ್ತಿನ ಪಡಸಾಲೆಯಲ್ಲಿ ಕೇಳಿ ಬಂದಿವೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಜೆಡಿ ಮತ್ತು ಟಿಆರ್ಎಸ್ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ. ಈ ಪಕ್ಷಗಳ ಬೆಂಬಲ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ರಾಹುಲ್ ಅವರು ಎಎಪಿಯಂತಹ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂದು ವಿರೋಧ ಪಕ್ಷಗಳ ಗುಂಪಿನ ಹಲವು ಮುಖಂಡರು ಹೇಳಿದ್ದಾರೆ.</p>.<p>ಕಾಂಗ್ರೆಸ್ ಅಥವಾ ಬಿಜೆಪಿ ಎರಡರಲ್ಲಿ ಯಾವುದರ ಜತೆಯೂ ಗುರುತಿಸಿಕೊಳ್ಳಲು ಬಯಸದ ಪಕ್ಷಗಳ ಮತ ಪಡೆಯಲುಕಾಂಗ್ರೆಸ್ ಅಭ್ಯರ್ಥಿಯು ಕಣದಲ್ಲಿ ಇದ್ದುದರಿಂದ ಸಾಧ್ಯವಾಗಲಿಲ್ಲ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಬಿಜೆಪಿ ಮತ್ತು ಎನ್ಡಿಎ ವಿರುದ್ಧದ ಹೋರಾಟದಲ್ಲಿ ನಾವು ಈಗಲೂ ಒಗ್ಗಟ್ಟಾಗಿಯೇ ಇದ್ದೇವೆ. ಫಲಿತಾಂಶವು ಸರ್ಕಾರದ ಹತಾಶೆಯನ್ನು ತೋರಿಸುತ್ತಿದೆ. ಎನ್ಡಿಎ ಅಭ್ಯರ್ಥಿಗೆ ಮತ ಯಾಚಿಸಲು ಪ್ರಧಾನಿಯೇ ದೂರವಾಣಿ ಕರೆಗಳನ್ನು ಮಾಡಬೇಕಾಯಿತು. ಈ ಚುನಾವಣೆ ನಮ್ಮ ಮುಂದಿದ್ದ ಕೊನೆಯ ಅವಕಾಶವೇನೂ ಆಗಿರಲಿಲ್ಲ. ವಿಶ್ವಕಪ್ ಪಂದ್ಯ ಮುಂದೆ ಬರಲಿದೆ. ಆ ಆಟದಲ್ಲಿನ ಮತದಾರರೇ ಬೇರೆ’ ಎಂದು ಟಿಎಂಸಿ ಮುಖಂಡ ಡೆರೆಕ್ ಒಬ್ರಯಾನ್ ಹೇಳಿದ್ದಾರೆ.</p>.<p>ಎನ್ಡಿಎ ಅಭ್ಯರ್ಥಿ ವಿರುದ್ಧ ಒಮ್ಮತದಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ತೀರ್ಮಾನಿಸಿದ್ದವು. ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಕಾಂಗ್ರೆಸ್ಗೆ ಸೂಚಿಸಿದ್ದವು. ಆದರೆ, ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಆ ಪಕ್ಷವು ಕಣಕ್ಕಿಳಿಸಬಹುದು ಎಂಬ ನಿರೀಕ್ಷೆ ತಮ್ಮಲ್ಲಿತ್ತು ಎಂದು ಫಲಿತಾಂಶದ ಬಳಿಕ ಹಲವು ಮುಖಂಡರು ಹೇಳಿದ್ದಾರೆ.ಕಾಂಗ್ರೆಸ್ನ ಕಾರ್ಯತಂತ್ರದ ಬಗ್ಗೆಯೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಎಎಪಿ ಮುಖಂಡರಿಗೆ ರಾಹುಲ್ ಒಂದು ಕರೆ ಮಾಡಿದ್ದರೆ ಆ ಪಕ್ಷದ ಸಂಸದರು ಮತ ಹಾಕುತ್ತಿದ್ದರು. ಆದರೆ ಅದು ಆಗಲಿಲ್ಲ ಎಂದು ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎಎಪಿಯ ಮೂವರು ಸಂಸದರು ಮತದಾನದಲ್ಲಿಭಾಗವಹಿಸಲಿಲ್ಲ.<br />**<br />ಎನ್ಡಿಎ ಅಭ್ಯರ್ಥಿಗೆ ಬೆಂಬಲ ಕೋರಿ ನಿತೀಶ್ ಕುಮಾರ್ ಅವರು ಕೇಜ್ರಿವಾಲ್ಗೆ ಕರೆ ಮಾಡಿದ್ದರು. ಕೇಜ್ರಿವಾಲ್ ಬೆಂಬಲ ನಿರಾಕರಿಸಿದ್ದರು. ನಿತೀಶ್ ಕರೆ ಮಾಡಬಹುದಾದರೆ ರಾಹುಲ್ ಯಾಕೆ ಮಾಡಬಾರದು.<br /><strong>ಸಂಜಯ ಸಿಂಗ್, ಎಎಪಿ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ </strong>: ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ, ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ ಗೆದ್ದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ಗೆ ಸೋಲಾಗಿದೆ. ಸೋಲಿನ ಜತೆಗೆ ಕಾಂಗ್ರೆಸ್ ಪಕ್ಷವು ಟೀಕೆ ಮತ್ತು ಅತೃಪ್ತಿಯನ್ನೂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಉಪಸಭಾಪತಿ ಸ್ಥಾನಕ್ಕೆ ಬೇರೆ ಯಾವುದಾದರೂಪಕ್ಷದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂಬುದು ವಿರೋಧ ಪಕ್ಷಗಳ ಗುಂಪಿನಲ್ಲಿರುವ ಬಹುತೇಕ ಪಕ್ಷಗಳ ಅಭಿಪ್ರಾಯವಾಗಿದೆ.</p>.<p>ಎನ್ಡಿಎ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಈ ಸೋಲು ಹಿನ್ನಡೆ ಅಲ್ಲ ಎಂದು ಬಿಂಬಿಸಲು ಈ ಪಕ್ಷಗಳು ಯತ್ನಿಸಿವೆ. ಹಾಗಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನದ ಮಾತುಗಳು ಸಂಸತ್ತಿನ ಪಡಸಾಲೆಯಲ್ಲಿ ಕೇಳಿ ಬಂದಿವೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಜೆಡಿ ಮತ್ತು ಟಿಆರ್ಎಸ್ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ. ಈ ಪಕ್ಷಗಳ ಬೆಂಬಲ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ರಾಹುಲ್ ಅವರು ಎಎಪಿಯಂತಹ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂದು ವಿರೋಧ ಪಕ್ಷಗಳ ಗುಂಪಿನ ಹಲವು ಮುಖಂಡರು ಹೇಳಿದ್ದಾರೆ.</p>.<p>ಕಾಂಗ್ರೆಸ್ ಅಥವಾ ಬಿಜೆಪಿ ಎರಡರಲ್ಲಿ ಯಾವುದರ ಜತೆಯೂ ಗುರುತಿಸಿಕೊಳ್ಳಲು ಬಯಸದ ಪಕ್ಷಗಳ ಮತ ಪಡೆಯಲುಕಾಂಗ್ರೆಸ್ ಅಭ್ಯರ್ಥಿಯು ಕಣದಲ್ಲಿ ಇದ್ದುದರಿಂದ ಸಾಧ್ಯವಾಗಲಿಲ್ಲ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಬಿಜೆಪಿ ಮತ್ತು ಎನ್ಡಿಎ ವಿರುದ್ಧದ ಹೋರಾಟದಲ್ಲಿ ನಾವು ಈಗಲೂ ಒಗ್ಗಟ್ಟಾಗಿಯೇ ಇದ್ದೇವೆ. ಫಲಿತಾಂಶವು ಸರ್ಕಾರದ ಹತಾಶೆಯನ್ನು ತೋರಿಸುತ್ತಿದೆ. ಎನ್ಡಿಎ ಅಭ್ಯರ್ಥಿಗೆ ಮತ ಯಾಚಿಸಲು ಪ್ರಧಾನಿಯೇ ದೂರವಾಣಿ ಕರೆಗಳನ್ನು ಮಾಡಬೇಕಾಯಿತು. ಈ ಚುನಾವಣೆ ನಮ್ಮ ಮುಂದಿದ್ದ ಕೊನೆಯ ಅವಕಾಶವೇನೂ ಆಗಿರಲಿಲ್ಲ. ವಿಶ್ವಕಪ್ ಪಂದ್ಯ ಮುಂದೆ ಬರಲಿದೆ. ಆ ಆಟದಲ್ಲಿನ ಮತದಾರರೇ ಬೇರೆ’ ಎಂದು ಟಿಎಂಸಿ ಮುಖಂಡ ಡೆರೆಕ್ ಒಬ್ರಯಾನ್ ಹೇಳಿದ್ದಾರೆ.</p>.<p>ಎನ್ಡಿಎ ಅಭ್ಯರ್ಥಿ ವಿರುದ್ಧ ಒಮ್ಮತದಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ತೀರ್ಮಾನಿಸಿದ್ದವು. ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಕಾಂಗ್ರೆಸ್ಗೆ ಸೂಚಿಸಿದ್ದವು. ಆದರೆ, ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಆ ಪಕ್ಷವು ಕಣಕ್ಕಿಳಿಸಬಹುದು ಎಂಬ ನಿರೀಕ್ಷೆ ತಮ್ಮಲ್ಲಿತ್ತು ಎಂದು ಫಲಿತಾಂಶದ ಬಳಿಕ ಹಲವು ಮುಖಂಡರು ಹೇಳಿದ್ದಾರೆ.ಕಾಂಗ್ರೆಸ್ನ ಕಾರ್ಯತಂತ್ರದ ಬಗ್ಗೆಯೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಎಎಪಿ ಮುಖಂಡರಿಗೆ ರಾಹುಲ್ ಒಂದು ಕರೆ ಮಾಡಿದ್ದರೆ ಆ ಪಕ್ಷದ ಸಂಸದರು ಮತ ಹಾಕುತ್ತಿದ್ದರು. ಆದರೆ ಅದು ಆಗಲಿಲ್ಲ ಎಂದು ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎಎಪಿಯ ಮೂವರು ಸಂಸದರು ಮತದಾನದಲ್ಲಿಭಾಗವಹಿಸಲಿಲ್ಲ.<br />**<br />ಎನ್ಡಿಎ ಅಭ್ಯರ್ಥಿಗೆ ಬೆಂಬಲ ಕೋರಿ ನಿತೀಶ್ ಕುಮಾರ್ ಅವರು ಕೇಜ್ರಿವಾಲ್ಗೆ ಕರೆ ಮಾಡಿದ್ದರು. ಕೇಜ್ರಿವಾಲ್ ಬೆಂಬಲ ನಿರಾಕರಿಸಿದ್ದರು. ನಿತೀಶ್ ಕರೆ ಮಾಡಬಹುದಾದರೆ ರಾಹುಲ್ ಯಾಕೆ ಮಾಡಬಾರದು.<br /><strong>ಸಂಜಯ ಸಿಂಗ್, ಎಎಪಿ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>