<p><strong>ನವದೆಹಲಿ:</strong>‘ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ (ಆರ್ಎಸ್ಎಸ್) ಭಯೋತ್ಪಾದನಾ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಸ್ಗೂ (ಐಎಸ್) ಯಾವುದೇ ವ್ಯತ್ಯಸಾವಿಲ್ಲ’ ಎಂದುತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಕೆ.ಎಸ್. ಅಳಗಿರಿ ಕುಟುಕಿದ್ದಾರೆ.</p>.<p>’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ’ ಎಂದು ಮಕ್ಕಳ್ ನೀತಿ ಮೈಯಂ(ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಅದನ್ನು ಒಪ್ಪುತ್ತೇನೆ. ಶೇ 100ರಷ್ಟು ಅಲ್ಲ, ಶೇ 1000ದಷ್ಟು ಅದು ಸತ್ಯ’ ಎಂದು ಹೇಳಿದರು.</p>.<p>‘ಇಸ್ಲಾಮ್ ಬಗ್ಗೆ ಇಸ್ಲಾಮಿಕ್ ಸ್ಟೇಟ್ಸ್ ಹೇಗೆ ಆಲೋಚಿಸುತ್ತದೆಯೊ ಅದೇ ರೀತಿ ಹಿಂದುತ್ವದ ಬಗ್ಗೆ ಆರ್ಎಸ್ಎಸ್ ಯೋಚಿಸುತ್ತದೆ. ಆರ್ಎಸ್ಎಸ್, ಜನಸಂಘ, ಹಿಂದೂ ಮಹಾಸಭಾ... ಇವೆಲ್ಲವೂ ನಂಬಿರುವುದು ಒಂದೇ. ಯಾರು ತಮ್ಮ ಸಿದ್ಧಾಂತಗಳನ್ನು ಒಪ್ಪುವುದಿಲ್ಲವೊ ಅವರನ್ನು ನಿರ್ನಾಮಗೊಳಿಸಬೇಕು ಎನ್ನುವುದು’ ಎಂದರು.</p>.<p>‘ಅರಬ್ ದೇಶಗಳಲ್ಲಿ ಐಎಸ್ ಹೇಗಿದೆಯೊ ಇದೂ ಹಾಗೆಯೇ. ತಮ್ಮ ಸಿದ್ಧಾಂತಗಳನ್ನು ಒಪ್ಪದ ಮುಸ್ಲೀಮರನ್ನೂ ಉಳಿಸಬಾರದು ಎಂದೇ ಐಎಸ್ ಸಹ ಆ ದೇಶಗಳಲ್ಲಿ ಹೇಳುತ್ತದೆ. ತೀವ್ರ ಎಡಪಂಥೀಯರು ಮತ್ತು ತೀವ್ರ ಬಲಪಂಥೀಯರು ಒಂದೇ ನಿಯಮವನ್ನು ಪಾಲಿಸುತ್ತಾರೆ. ಧಾರ್ಮಿಕ ಮೂಲಭೂತವಾದಿಗಳೂ ಇದನ್ನೇ ನಂಬಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>‘ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ (ಆರ್ಎಸ್ಎಸ್) ಭಯೋತ್ಪಾದನಾ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಸ್ಗೂ (ಐಎಸ್) ಯಾವುದೇ ವ್ಯತ್ಯಸಾವಿಲ್ಲ’ ಎಂದುತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಕೆ.ಎಸ್. ಅಳಗಿರಿ ಕುಟುಕಿದ್ದಾರೆ.</p>.<p>’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ’ ಎಂದು ಮಕ್ಕಳ್ ನೀತಿ ಮೈಯಂ(ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಅದನ್ನು ಒಪ್ಪುತ್ತೇನೆ. ಶೇ 100ರಷ್ಟು ಅಲ್ಲ, ಶೇ 1000ದಷ್ಟು ಅದು ಸತ್ಯ’ ಎಂದು ಹೇಳಿದರು.</p>.<p>‘ಇಸ್ಲಾಮ್ ಬಗ್ಗೆ ಇಸ್ಲಾಮಿಕ್ ಸ್ಟೇಟ್ಸ್ ಹೇಗೆ ಆಲೋಚಿಸುತ್ತದೆಯೊ ಅದೇ ರೀತಿ ಹಿಂದುತ್ವದ ಬಗ್ಗೆ ಆರ್ಎಸ್ಎಸ್ ಯೋಚಿಸುತ್ತದೆ. ಆರ್ಎಸ್ಎಸ್, ಜನಸಂಘ, ಹಿಂದೂ ಮಹಾಸಭಾ... ಇವೆಲ್ಲವೂ ನಂಬಿರುವುದು ಒಂದೇ. ಯಾರು ತಮ್ಮ ಸಿದ್ಧಾಂತಗಳನ್ನು ಒಪ್ಪುವುದಿಲ್ಲವೊ ಅವರನ್ನು ನಿರ್ನಾಮಗೊಳಿಸಬೇಕು ಎನ್ನುವುದು’ ಎಂದರು.</p>.<p>‘ಅರಬ್ ದೇಶಗಳಲ್ಲಿ ಐಎಸ್ ಹೇಗಿದೆಯೊ ಇದೂ ಹಾಗೆಯೇ. ತಮ್ಮ ಸಿದ್ಧಾಂತಗಳನ್ನು ಒಪ್ಪದ ಮುಸ್ಲೀಮರನ್ನೂ ಉಳಿಸಬಾರದು ಎಂದೇ ಐಎಸ್ ಸಹ ಆ ದೇಶಗಳಲ್ಲಿ ಹೇಳುತ್ತದೆ. ತೀವ್ರ ಎಡಪಂಥೀಯರು ಮತ್ತು ತೀವ್ರ ಬಲಪಂಥೀಯರು ಒಂದೇ ನಿಯಮವನ್ನು ಪಾಲಿಸುತ್ತಾರೆ. ಧಾರ್ಮಿಕ ಮೂಲಭೂತವಾದಿಗಳೂ ಇದನ್ನೇ ನಂಬಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>