ಮಥುರಾದಲ್ಲಿ ಕೃಷ್ಣಜನ್ಮಸ್ಥಾನ ದೇವಾಲಯಕ್ಕೆ ಹೊಂದಿಕೊಂಡಂತೆ ಮಸೀದಿ ನಿರ್ಮಿಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡತೆ ಮಸೀದಿ ನಿರ್ಮಿಸಲಾಗಿದೆ. ರಾಮ ಮಂದಿರ ಹೋರಾಟದಂತೆಯೇ, ಮಥುರಾ ಮತ್ತು ಕಾಶಿ ಹೋರಾಟವನ್ನೂ ಆರಂಭಿಸಲಾಗುತ್ತದೆ ಎಂದು ವಿಎಚ್ಪಿ ಮತ್ತು ಆರ್ಎಸ್ಎಸ್ ಹೇಳುತ್ತಲೇ ಇದ್ದವು. ಆದರೆ ಈಗ ಈ ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿವೆ.