<p><strong>ಮುಂಬೈ:</strong> ಮುಂಬೈ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿವ ವಿದ್ಯುತ್ ಗ್ರಿಡ್ ವೈಫಲ್ಯದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಸಾಧ್ಯತೆಯಿರಬಹುದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವುತ್ ಶಂಕಿಸಿದ್ದಾರೆ.</p>.<p>ಮುಂಬೈ, ಥಾಣೆ ಮತ್ತು ನವಿ ಮುಂಬೈಗಳಲ್ಲಿ ಸೋಮವಾರ ಉಂಟಾದ ವಿದ್ಯುತ್ ವೈಫಲ್ಯ ಸಣ್ಣ ವಿಚಾರವಲ್ಲ. ಇದು ಗಂಭೀರ ಸ್ವರೂಪದ್ದು ಎಂದು ಅಭಿಪ್ರಾಯಪಟ್ಟರು.</p>.<p>‘ನಮ್ಮ ತಂಡವು 400 ಕೆವಿ ಕಲ್ವಾ-ಪಾಡ್ಗ ಮಾರ್ಗದಲ್ಲಿ ಕೆಲಸ ಮಾಡುತ್ತಿತ್ತು. ಈ ಸಂದರ್ಭ ಸರ್ಕ್ಯುಟ್ 1ರಿಂದ 2ಕ್ಕೆ ಲೋಡ್ ವರ್ಗಾಯಿಸಲಾಯಿತು. ಆದರೆ ಇದೇ ಹೊತ್ತಿಗೆ ತಾಂತ್ರಿಕ ಸಮಸ್ಯೆಯಿಂದ ಖರಘಡದ ಘಟಕ ಸ್ಥಗಿತಗೊಂಡಿತು. ಮುಂಬೈನಲ್ಲಿ ಐಲ್ಯಾಂಡಿಂಗ್ ಸಂಭವಿಸಿ, ವಿದ್ಯುತ್ ಸರಬರಾಜು ವ್ಯತ್ಯಯವಾಯಿತು’ ಎಂದು ಘಟನಾವಳಿಗಳನ್ನು ವಿವರಿಸಿದರು.</p>.<p>ಉತ್ಪಾದನೆ ಮತ್ತು ಸರಬರಾಜು ಮಾರ್ಗದ ಸಾಮರ್ಥ್ಯದಲ್ಲಿ ಉಂಟಾಗುವ ವ್ಯತ್ಯಯದಿಂದ ಉದ್ಘವಿಸುವ ಪರಿಸ್ಥಿತಿಯನ್ನು ಎಲೆಕ್ಟ್ರಿಕ್ ಪರಿಭಾಷೆಯಲ್ಲಿ ಐಲ್ಯಾಂಡಿಂಗ್ ಎನ್ನುತ್ತಾರೆ. ವಿದ್ಯುತ್ ಗ್ರಿಡ್ನಲ್ಲಿ ಪವರ್ ಇಲ್ಲದಿದ್ದರೂ ಡಿಜಿ (ಡಿಸ್ಟ್ರಿಬ್ಯೂಟೆಡ್ ಜನರೇಟರ್) ಒಂದು ನಿರ್ದಿಷ್ಟ ಪ್ರದೇಶಕ್ಕೆ ವಿದ್ಯುತ್ ಪ್ರವಹಿಸುವನ್ನು ಮುಂದುವರಿಸುತ್ತದೆ.</p>.<p>‘ಮುಂಬೈನಲ್ಲಿ ಐಲ್ಯಾಂಡಿಂಗ್ ಪರಿಸ್ಥಿತಿ ಉದ್ಭವಿಸಿತು ಎಂಬ ಕಾರಣಕ್ಕೇ ನನಗೆ ದುಷ್ಕೃತ್ಯದ ಶಂಕೆ ಬರುತ್ತಿದೆ’ ಎಂದು ರಾವುತ್ ವಿವರಿಸಿದರು.</p>.<p>ವಿದ್ಯುತ್ ವೈಫಲ್ಯದ ಬಗ್ಗೆ ಚರ್ಚಿಸಲೆಂದು ಕೇಂದ್ರದಿಂದಲೂ ತಜ್ಞರ ತಂಡವೊಂದು ಬಂದಿದೆ. ಒಂದು ವಾರದೊಳಗೆ ಕೇಂದ್ರ ತಂಡವು ತನ್ನ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರವೂ ವಿಚಾರಣಾ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.</p>.<p>2011ರಲ್ಲಿ ಸಂಭವಿಸಿದ್ದ ಇಂಥದ್ದೇ ಪ್ರಕರಣದ ಬಗ್ಗೆ ಸಿದ್ಧಪಡಿಸಿದ ತನಿಖಾ ವರದಿಯನ್ನೂ ಕೇಂದ್ರ ತಂಡದೊಂದಿಗೆ ಚರ್ಚಿಸುತ್ತೇವೆ. ಸಿಸ್ಟಂ ಆಡಿಟ್ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ಗ್ರಿಡ್ ವೈಫಲ್ಯದಿಂದ ಮುಂಬೈ ಮತ್ತು ಉಪನಗರಗಳಲ್ಲಿ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರೈಲುಗಳು ಹಳಿಗಳ ಮೇಲೆಯೇ ನಿಂತುಬಿಟ್ಟಿದ್ದವು. ಜನರು ಮನೆಗಳನ್ನು ಸೇರಲು ಪರದಾಡುವಂತಾಯಿತು. ಮಾತ್ರವಲ್ಲ, ವರ್ಕ್ ಫ್ರಂ ಹೋಂ ಮೇಲೆಯೂ ಈ ವಿದ್ಯಮಾನ ಗಂಭೀರ ಪರಿಣಾಮ ಬೀರಿತ್ತು.</p>.<p>ತುರ್ತು ಸೇವೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಎರಡು ತಾಸು ಬೇಕಾಯಿತು. ಉಳಿದ ಪ್ರದೇಶಗಳಿಗೆ ಹಂತಹಂತವಾಗಿ ವಿದ್ಯುತ್ ವಿತರಣೆಯನ್ನು ಮತ್ತೆ ಆರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿವ ವಿದ್ಯುತ್ ಗ್ರಿಡ್ ವೈಫಲ್ಯದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಸಾಧ್ಯತೆಯಿರಬಹುದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವುತ್ ಶಂಕಿಸಿದ್ದಾರೆ.</p>.<p>ಮುಂಬೈ, ಥಾಣೆ ಮತ್ತು ನವಿ ಮುಂಬೈಗಳಲ್ಲಿ ಸೋಮವಾರ ಉಂಟಾದ ವಿದ್ಯುತ್ ವೈಫಲ್ಯ ಸಣ್ಣ ವಿಚಾರವಲ್ಲ. ಇದು ಗಂಭೀರ ಸ್ವರೂಪದ್ದು ಎಂದು ಅಭಿಪ್ರಾಯಪಟ್ಟರು.</p>.<p>‘ನಮ್ಮ ತಂಡವು 400 ಕೆವಿ ಕಲ್ವಾ-ಪಾಡ್ಗ ಮಾರ್ಗದಲ್ಲಿ ಕೆಲಸ ಮಾಡುತ್ತಿತ್ತು. ಈ ಸಂದರ್ಭ ಸರ್ಕ್ಯುಟ್ 1ರಿಂದ 2ಕ್ಕೆ ಲೋಡ್ ವರ್ಗಾಯಿಸಲಾಯಿತು. ಆದರೆ ಇದೇ ಹೊತ್ತಿಗೆ ತಾಂತ್ರಿಕ ಸಮಸ್ಯೆಯಿಂದ ಖರಘಡದ ಘಟಕ ಸ್ಥಗಿತಗೊಂಡಿತು. ಮುಂಬೈನಲ್ಲಿ ಐಲ್ಯಾಂಡಿಂಗ್ ಸಂಭವಿಸಿ, ವಿದ್ಯುತ್ ಸರಬರಾಜು ವ್ಯತ್ಯಯವಾಯಿತು’ ಎಂದು ಘಟನಾವಳಿಗಳನ್ನು ವಿವರಿಸಿದರು.</p>.<p>ಉತ್ಪಾದನೆ ಮತ್ತು ಸರಬರಾಜು ಮಾರ್ಗದ ಸಾಮರ್ಥ್ಯದಲ್ಲಿ ಉಂಟಾಗುವ ವ್ಯತ್ಯಯದಿಂದ ಉದ್ಘವಿಸುವ ಪರಿಸ್ಥಿತಿಯನ್ನು ಎಲೆಕ್ಟ್ರಿಕ್ ಪರಿಭಾಷೆಯಲ್ಲಿ ಐಲ್ಯಾಂಡಿಂಗ್ ಎನ್ನುತ್ತಾರೆ. ವಿದ್ಯುತ್ ಗ್ರಿಡ್ನಲ್ಲಿ ಪವರ್ ಇಲ್ಲದಿದ್ದರೂ ಡಿಜಿ (ಡಿಸ್ಟ್ರಿಬ್ಯೂಟೆಡ್ ಜನರೇಟರ್) ಒಂದು ನಿರ್ದಿಷ್ಟ ಪ್ರದೇಶಕ್ಕೆ ವಿದ್ಯುತ್ ಪ್ರವಹಿಸುವನ್ನು ಮುಂದುವರಿಸುತ್ತದೆ.</p>.<p>‘ಮುಂಬೈನಲ್ಲಿ ಐಲ್ಯಾಂಡಿಂಗ್ ಪರಿಸ್ಥಿತಿ ಉದ್ಭವಿಸಿತು ಎಂಬ ಕಾರಣಕ್ಕೇ ನನಗೆ ದುಷ್ಕೃತ್ಯದ ಶಂಕೆ ಬರುತ್ತಿದೆ’ ಎಂದು ರಾವುತ್ ವಿವರಿಸಿದರು.</p>.<p>ವಿದ್ಯುತ್ ವೈಫಲ್ಯದ ಬಗ್ಗೆ ಚರ್ಚಿಸಲೆಂದು ಕೇಂದ್ರದಿಂದಲೂ ತಜ್ಞರ ತಂಡವೊಂದು ಬಂದಿದೆ. ಒಂದು ವಾರದೊಳಗೆ ಕೇಂದ್ರ ತಂಡವು ತನ್ನ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರವೂ ವಿಚಾರಣಾ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.</p>.<p>2011ರಲ್ಲಿ ಸಂಭವಿಸಿದ್ದ ಇಂಥದ್ದೇ ಪ್ರಕರಣದ ಬಗ್ಗೆ ಸಿದ್ಧಪಡಿಸಿದ ತನಿಖಾ ವರದಿಯನ್ನೂ ಕೇಂದ್ರ ತಂಡದೊಂದಿಗೆ ಚರ್ಚಿಸುತ್ತೇವೆ. ಸಿಸ್ಟಂ ಆಡಿಟ್ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ಗ್ರಿಡ್ ವೈಫಲ್ಯದಿಂದ ಮುಂಬೈ ಮತ್ತು ಉಪನಗರಗಳಲ್ಲಿ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರೈಲುಗಳು ಹಳಿಗಳ ಮೇಲೆಯೇ ನಿಂತುಬಿಟ್ಟಿದ್ದವು. ಜನರು ಮನೆಗಳನ್ನು ಸೇರಲು ಪರದಾಡುವಂತಾಯಿತು. ಮಾತ್ರವಲ್ಲ, ವರ್ಕ್ ಫ್ರಂ ಹೋಂ ಮೇಲೆಯೂ ಈ ವಿದ್ಯಮಾನ ಗಂಭೀರ ಪರಿಣಾಮ ಬೀರಿತ್ತು.</p>.<p>ತುರ್ತು ಸೇವೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಎರಡು ತಾಸು ಬೇಕಾಯಿತು. ಉಳಿದ ಪ್ರದೇಶಗಳಿಗೆ ಹಂತಹಂತವಾಗಿ ವಿದ್ಯುತ್ ವಿತರಣೆಯನ್ನು ಮತ್ತೆ ಆರಂಭಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>