ರೈತ ವಿರೋಧಿ ಮಸೂದೆಗಳ ಅಂಗೀಕಾರವನ್ನು ವಿರೋಧಿಸಿ ಶುಕ್ರವಾರ ಪಂಜಾಬ್ನಲ್ಲಿ ‘ಚಕ್ಕಾ ಜಾಮ್’ (ರಸ್ತೆ ದಿಗ್ಬಂಧನ) ನಡೆಸಲು ನಿರ್ಧರಿಸಲಾಗಿದೆ. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ರೈತರು ಸೇರಿದಂತೆ ಇತರರು ಅಂದು ಬೆಳಿಗ್ಗೆ 11 ಗಂಟೆಯಿಂದ ಮೂರು ಗಂಟೆಗಳ ಕಾಲ ರಸ್ತೆ ತಡೆದು ಶಾಂತಿಯುತವಾಗಿ ಪ್ರತಿಭಟಿಸಲಿದ್ದಾರೆ ಎಂದು ಎಸ್ಎಡಿ ನಾಯಕ ದಲ್ಜಿತ್ ಸಿಂಗ್ ಚೀಮ ತಿಳಿಸಿದರು.