ನವದೆಹಲಿ: ಹಿಂದಿ ಚಲನಚಿತ್ರ ‘ಆರ್ಟಿಕಲ್ 15’ ಬಿಡುಗಡೆಗೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಲಾಗಿದೆ.
ಲಾಭಮಾಡಿಕೊಳ್ಳುವ ಉದ್ದೇಶದಿಂದ ಈ ಚಿತ್ರದಲ್ಲಿ ‘ಜಾತಿ ನಿಂದನೆ’ ಮತ್ತು ಸಮಾಜದಲ್ಲಿ ಜಾತಿ ನಡುವಣ ದ್ವೇಷ ಸೃಷ್ಟಿಸಿದೆ ಎಂದು ಆರೋಪಿಸಲಾಗಿದೆ. ಆಯುಷ್ಮಾನ್ ಖುರಾನ ನಟನೆಯ ಈ ಚಿತ್ರ ಇದೇ 28 ರಂದು ಬಿಡುಗಡೆಯಾಗಿದೆ.
‘ಭಾರತೀಯ ಬ್ರಹ್ಮನ್ ಸಮಾಜ’ ಸಂಘಟನೆಯ ನೇಮಿನಾಥ್ ಚತುರ್ವೇದಿ ಅವರು ದೂರು ಸಲ್ಲಿಸಿದವರು.