‘ಪತಂಜಲಿ ಆಯುರ್ವೇದ್ ಕಂಪನಿಯ, ತಪ್ಪುದಾರಿಗೆ ಎಳೆಯುವ ಹಾಗೂ ಸತ್ಯಕ್ಕೆ ದೂರವಾದ ಎಲ್ಲ ಜಾಹೀರಾತುಗಳು ತಕ್ಷಣಕ್ಕೆ ಸ್ಥಗಿತವಾಗಬೇಕು. ಈ ವಿಚಾರವಾಗಿ ಕಂಪನಿಯು ಕಾನೂನು ಉಲ್ಲಂಘಿಸುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸುತ್ತದೆ...’ ಎಂದು ನ್ಯಾಯಮೂರ್ತಿಗಳಾದ ಅಹ್ಸನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ನ್ಯಾಯಪೀಠವು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.