<p class="title"><strong>ನವದೆಹಲಿ</strong>: ಪ್ರಕರಣಗಳ ಸ್ವರೂಪ ಮತ್ತು ವಾಸ್ತವ ಸ್ಥಿತಿ ಆಧರಿಸಿ ಕೋವಿಡ್–19 ಸಂದರ್ಭದಲ್ಲಿ ಕೈದಿಗಳ ಬಿಡುಗಡೆ ಕುರಿತಂತೆ ಆದೇಶ ಹೊರಡಿಸಲು ರಾಜ್ಯಗಳಲ್ಲಿನ ಉನ್ನತಾಧಿಕಾರ ಸಮಿತಿಗಳ ಅಧಿಕಾರ ವ್ಯಾಪ್ತಿ ಕುರಿತು ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.</p>.<p class="title">ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸಲು ಆರಂಭವಾದಂತೆ ಜೈಲುಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಅಗತ್ಯವನ್ನು ಮನಗಂಡ ಸುಪ್ರೀಂ ಕೋರ್ಟ್ ಮಾರ್ಚ್ 23ರಂದು, ಈ ಕುರಿತು ಪರಿಶೀಲಿಸಲು ರಾಜ್ಯಗಳಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಸೂಚಿಸಿ ಆದೇಶ ಹೊರಡಿಸಿತ್ತು.</p>.<p class="title">ಪ್ರಕರಣದ ಸ್ವರೂಪ, ವಿಚಾರಣೆಯ ಅವಧಿಯನ್ನು ಆಧರಿಸಿ ಮಧ್ಯಂತರ ಜಾಮೀನು ಅಥವಾ ತುರ್ತು ಪರೋಲ್ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸಮಿತಿ ಪರಿಶೀಲಿಸಬಹುದು ಎಂದೂ ಸೂಚಿಸಿತ್ತು.</p>.<p>ಉನ್ನತಾಧಿಕಾರ ಸಮಿತಿಯ ಆದೇಶದ ನಂತರವು ಮಹಾರಾಷ್ಟ್ರದಲ್ಲಿ ಅನೇಕ ಕೈದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸೇವಾಸಂಸ್ಥೆ ಎನ್ಎಪಿಎಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಮೇಲಿನಂತೆ ತೀರ್ಮಾನವನ್ನು ಪ್ರಕಟಿಸಿತು.</p>.<p>ಸೇವಾ ಸಂಸ್ಥೆ ರಾಷ್ಟ್ರೀಯ ಸಂಚಾಲಕಿ ಮೇಧಾ ಪಾಟ್ಕರ್ ಅವರ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರುವ ಸುಮಾರು 17,642 ಕೈದಿಗಳನ್ನು ಮಧ್ಯಂತರ ಜಾಮೀನು ಆಧರಿಸಿ ಬಿಡುಗಡೆ ಮಾಡುವುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಪ್ರಕರಣಗಳ ಸ್ವರೂಪ ಮತ್ತು ವಾಸ್ತವ ಸ್ಥಿತಿ ಆಧರಿಸಿ ಕೋವಿಡ್–19 ಸಂದರ್ಭದಲ್ಲಿ ಕೈದಿಗಳ ಬಿಡುಗಡೆ ಕುರಿತಂತೆ ಆದೇಶ ಹೊರಡಿಸಲು ರಾಜ್ಯಗಳಲ್ಲಿನ ಉನ್ನತಾಧಿಕಾರ ಸಮಿತಿಗಳ ಅಧಿಕಾರ ವ್ಯಾಪ್ತಿ ಕುರಿತು ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.</p>.<p class="title">ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸಲು ಆರಂಭವಾದಂತೆ ಜೈಲುಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಅಗತ್ಯವನ್ನು ಮನಗಂಡ ಸುಪ್ರೀಂ ಕೋರ್ಟ್ ಮಾರ್ಚ್ 23ರಂದು, ಈ ಕುರಿತು ಪರಿಶೀಲಿಸಲು ರಾಜ್ಯಗಳಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಸೂಚಿಸಿ ಆದೇಶ ಹೊರಡಿಸಿತ್ತು.</p>.<p class="title">ಪ್ರಕರಣದ ಸ್ವರೂಪ, ವಿಚಾರಣೆಯ ಅವಧಿಯನ್ನು ಆಧರಿಸಿ ಮಧ್ಯಂತರ ಜಾಮೀನು ಅಥವಾ ತುರ್ತು ಪರೋಲ್ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸಮಿತಿ ಪರಿಶೀಲಿಸಬಹುದು ಎಂದೂ ಸೂಚಿಸಿತ್ತು.</p>.<p>ಉನ್ನತಾಧಿಕಾರ ಸಮಿತಿಯ ಆದೇಶದ ನಂತರವು ಮಹಾರಾಷ್ಟ್ರದಲ್ಲಿ ಅನೇಕ ಕೈದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸೇವಾಸಂಸ್ಥೆ ಎನ್ಎಪಿಎಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಮೇಲಿನಂತೆ ತೀರ್ಮಾನವನ್ನು ಪ್ರಕಟಿಸಿತು.</p>.<p>ಸೇವಾ ಸಂಸ್ಥೆ ರಾಷ್ಟ್ರೀಯ ಸಂಚಾಲಕಿ ಮೇಧಾ ಪಾಟ್ಕರ್ ಅವರ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರುವ ಸುಮಾರು 17,642 ಕೈದಿಗಳನ್ನು ಮಧ್ಯಂತರ ಜಾಮೀನು ಆಧರಿಸಿ ಬಿಡುಗಡೆ ಮಾಡುವುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>