<p class="title"><strong>ನವದೆಹಲಿ:</strong> ಭಾರತದಲ್ಲಿ ಜಾತ್ಯತೀತತೆಯ ತತ್ವ ಮತ್ತು ಅದರ ಪಾಲನೆ ‘ಅಪಾಯ’ದ ಸ್ಥಿತಿಯಲ್ಲಿದೆ. ಆಡಳಿತ ವ್ಯವಸ್ಥೆಯು ಸಂವಿಧಾನದಿಂದಲೇಈ ಪದವನ್ನು ತೆಗೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.</p>.<p class="title">ಆದರೆ, ದ್ವೇಷಮನಸ್ಥಿತಿ ಹೊಂದಿರುವ ಈ ಪಡೆಯು ಯಾವುದೇ ಕಾರಣಕ್ಕೂ ದೇಶದ ಜಾತ್ಯತೀತ ವ್ಯಕ್ತಿತ್ವಕ್ಕೆ ಚ್ಯುತಿ ತರಲಾಗದು ಎಂದು ತಮ್ಮ ನೂತನ ಕೃತಿ ‘ದ ಬ್ಯಾಟಲ್ ಆಫ್ ಬಿಲಾಂಗಿಂಗ್’ ಕುರಿತು ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದ್ದಾರೆ.</p>.<p class="title">ಸರ್ಕಾರ ಒಂದು ವೇಳೆ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಿದರೂ, ಅದು ತನ್ನ ಮೂಲ ಸ್ವರೂಪದಿಂದಾಗಿ ಜಾತ್ಯತೀತ ಸಂವಿಧಾನವಾಗಿಯೇ ಉಳಿಯಲಿದೆ ಎಂದು ಹೇಳಿದರು.</p>.<p>ಕಾಂಗ್ರೆಸ್ ಎಂದಿಗೂ ಬಿಜೆಪಿಯಂಥ ಚಿಂತನೆ ಅಳವಡಿಸಿಕೊಳ್ಳಬಯಸುವುದಿಲ್ಲ. ಸುದೀರ್ಘ ಇತಿಹಾಸದ ಕಾಂಗ್ರೆಸ್ನಲ್ಲಿ ಭಾರತದ ಜಾತ್ಯತೀತ ಚಿಂತನೆ ‘ಜೀವಂತವಾಗಿದೆ, ಉತ್ತಮ ಸ್ಥಿತಿಯಲ್ಲಿದೆ’ ಎಂದರು.</p>.<p>ಹಿಂದುತ್ವ ಕುರಿತು ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂಬ ಕುರಿತು ಗಮನಸೆಳೆದಾಗ, ಈ ಕುರಿತು ಮೃದು ಚಿಂತನೆ ಇದೆ ಎಂದು ನನಗೆ ಕಾಣಿಸುತ್ತಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಇರುವ ನಾವು, ಅಂಥ ಸ್ಥಿತಿಗೆ ಹೋಗಬಾರದು ಎಂಬುದರ ಬಗ್ಗೆ ಸ್ಪಷ್ಪತೆಯನ್ನು ಹೊಂದಿದ್ದೇವೆ ಎಂದು ಪ್ರತಿಪಾದಿಸಿದರು.</p>.<p>‘ಬಿಜೆಪಿ ಸ್ವರೂಪ ಅಳವಡಿಸಿಕೊಳ್ಳುವ ಯಾವುದೇ ಯತ್ನವು ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬುದನೇ ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದೇನೆ’ ಎಂದು ಹೇಳಿದರು.</p>.<p>ಹಿಂದೂವಾದ ಮತ್ತು ಹಿಂದುತ್ವ ಕುರಿತು ಕಾಂಗ್ರೆಸ್ ಭಿನ್ನತೆಯನ್ನು ಗುರುತಿಸಲಿದೆ. ಹಿಂದೂವಾದ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಪೂರ್ವ ನಿಲುವು ಹೊಂದಿಲ್ಲದೇ ಇರುವುದು. ಹಿಂದುತ್ವ ಎಂದರೆ ಪ್ರತ್ಯೇಕವಾಗಿಸುವ ರಾಜಕೀಯ ಸಿದ್ಧಾಂತ ಎಂದು ಅವರು ವ್ಯಾಖ್ಯಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಭಾರತದಲ್ಲಿ ಜಾತ್ಯತೀತತೆಯ ತತ್ವ ಮತ್ತು ಅದರ ಪಾಲನೆ ‘ಅಪಾಯ’ದ ಸ್ಥಿತಿಯಲ್ಲಿದೆ. ಆಡಳಿತ ವ್ಯವಸ್ಥೆಯು ಸಂವಿಧಾನದಿಂದಲೇಈ ಪದವನ್ನು ತೆಗೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.</p>.<p class="title">ಆದರೆ, ದ್ವೇಷಮನಸ್ಥಿತಿ ಹೊಂದಿರುವ ಈ ಪಡೆಯು ಯಾವುದೇ ಕಾರಣಕ್ಕೂ ದೇಶದ ಜಾತ್ಯತೀತ ವ್ಯಕ್ತಿತ್ವಕ್ಕೆ ಚ್ಯುತಿ ತರಲಾಗದು ಎಂದು ತಮ್ಮ ನೂತನ ಕೃತಿ ‘ದ ಬ್ಯಾಟಲ್ ಆಫ್ ಬಿಲಾಂಗಿಂಗ್’ ಕುರಿತು ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದ್ದಾರೆ.</p>.<p class="title">ಸರ್ಕಾರ ಒಂದು ವೇಳೆ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಿದರೂ, ಅದು ತನ್ನ ಮೂಲ ಸ್ವರೂಪದಿಂದಾಗಿ ಜಾತ್ಯತೀತ ಸಂವಿಧಾನವಾಗಿಯೇ ಉಳಿಯಲಿದೆ ಎಂದು ಹೇಳಿದರು.</p>.<p>ಕಾಂಗ್ರೆಸ್ ಎಂದಿಗೂ ಬಿಜೆಪಿಯಂಥ ಚಿಂತನೆ ಅಳವಡಿಸಿಕೊಳ್ಳಬಯಸುವುದಿಲ್ಲ. ಸುದೀರ್ಘ ಇತಿಹಾಸದ ಕಾಂಗ್ರೆಸ್ನಲ್ಲಿ ಭಾರತದ ಜಾತ್ಯತೀತ ಚಿಂತನೆ ‘ಜೀವಂತವಾಗಿದೆ, ಉತ್ತಮ ಸ್ಥಿತಿಯಲ್ಲಿದೆ’ ಎಂದರು.</p>.<p>ಹಿಂದುತ್ವ ಕುರಿತು ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂಬ ಕುರಿತು ಗಮನಸೆಳೆದಾಗ, ಈ ಕುರಿತು ಮೃದು ಚಿಂತನೆ ಇದೆ ಎಂದು ನನಗೆ ಕಾಣಿಸುತ್ತಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಇರುವ ನಾವು, ಅಂಥ ಸ್ಥಿತಿಗೆ ಹೋಗಬಾರದು ಎಂಬುದರ ಬಗ್ಗೆ ಸ್ಪಷ್ಪತೆಯನ್ನು ಹೊಂದಿದ್ದೇವೆ ಎಂದು ಪ್ರತಿಪಾದಿಸಿದರು.</p>.<p>‘ಬಿಜೆಪಿ ಸ್ವರೂಪ ಅಳವಡಿಸಿಕೊಳ್ಳುವ ಯಾವುದೇ ಯತ್ನವು ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬುದನೇ ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದೇನೆ’ ಎಂದು ಹೇಳಿದರು.</p>.<p>ಹಿಂದೂವಾದ ಮತ್ತು ಹಿಂದುತ್ವ ಕುರಿತು ಕಾಂಗ್ರೆಸ್ ಭಿನ್ನತೆಯನ್ನು ಗುರುತಿಸಲಿದೆ. ಹಿಂದೂವಾದ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಪೂರ್ವ ನಿಲುವು ಹೊಂದಿಲ್ಲದೇ ಇರುವುದು. ಹಿಂದುತ್ವ ಎಂದರೆ ಪ್ರತ್ಯೇಕವಾಗಿಸುವ ರಾಜಕೀಯ ಸಿದ್ಧಾಂತ ಎಂದು ಅವರು ವ್ಯಾಖ್ಯಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>