ಯುವಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋಲಿನಿಂದ ಬಡಿಯಲಿದ್ದಾರೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ನಖ್ವಿ, ‘ಕಾಂಗ್ರೆಸ್ ನಾಯಕರು ಯಾವಾಗಲೂ ತಮ್ಮೊಂದಿಗೆ ಕೊಡಲಿಯನ್ನು ಒಯ್ಯುತ್ತಾರೆ. ಕೊಡಲಿಯಿಂದ ತಮ್ಮ ಕಾಲಿಗೆ ತಾವೇ ಹೊಡೆಯುತ್ತಾರೆ. ನಾನು ಸೋನಿಯಾ ಗಾಂಧಿ ಅವರಿಗೆ ಒಂದು ಸಲಹೆ ನೀಡಲು ಇಚ್ಛಿಸುತ್ತೇನೆ. ನಿಮ್ಮ ಮಗ ‘ಪಪ್ಪೂಜಿ’ಯನ್ನು ರಾಜಕೀಯ ಶಾಲೆಗೆ ಸೇರಿಸಿ. ಅಲ್ಲಿ ಅವರು ರಾಜಕೀಯದ ಎಬಿಸಿಡಿ, ಸಭ್ಯತೆ ಕಲಿಯಲಿ’ ಎಂದರು.