ಹಾಗಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿಯ ಸಂದೇಶವಾಗಿ, ಉಭಯ ರಾಷ್ಟ್ರಗಳ ಮಾತುಕತೆ ಮತ್ತು ಸಾಮರಸ್ಯಕ್ಕಾಗಿ ಲಾಹೋರ್ಗೆ ಬಸ್ ವ್ಯವಸ್ಥೆ ಕಲ್ಪಿಸಿದರು. ಇದಕ್ಕೆ ಏನು ಹೇಳುತ್ತೀರಿ? ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್ ಆಲಿ ಜಿನ್ನಾ ಅವರ ಸಮಾಧಿಗೆ ಎಲ್ಕೆ ಅಡ್ವಾಣಿ ಅವರು ಭೇಟಿ ನೀಡಿದ್ದಕ್ಕೆ ಏನು ಹೇಳುತ್ತೀರಿ? ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನವಿಲ್ಲದೆಯೇ ನವಾಜ್ ಶರೀಫ್ ಅವರ ಜನ್ಮದಿನದ ಕೂಟದಲ್ಲಿ ಭಾಗವಹಿಸಿದಕ್ಕೆ ಏನು ಹೇಳುತ್ತೀರಿ? ಕೋಶ್ಯಾರಿ ಪ್ರಕಾರ ಇದೆಲ್ಲದರಿಂದ ರಾಷ್ಟ್ರ ಬಲಹೀನವಾಗಿದೆ ಎಂದರ್ಥವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.