<p><strong>ಛತ್ರಪತಿ ಸಂಭಾಜಿ ನಗರ</strong>: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಲ್ಢಾಣಾ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ (ವಿರಮಿಸುತ್ತಿರುವ ವಿಷ್ಣು) ಪ್ರತಿಮೆ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>‘ಲಖುಜಿ ಜಾಧವರಾವ್ ಛತ್ರಿ ನೇತೃತ್ವದಲ್ಲಿ ಸಂರಕ್ಷಣಾ ಕೆಲಸದಲ್ಲಿ ತೊಡಗಿದ್ದ ವೇಳೆ ಮತ್ತಷ್ಟು ಅಗೆದು ದೇವಾಲಯದ ತಳಭಾಗ ತಲುಪಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಮೇಲ್ಭಾಗದಿಂದ 2.25 ಮೀಟರ್ ಅಡಿಭಾಗದಲ್ಲಿ ಈ ಶಿಲ್ಪ ಪತ್ತೆಯಾಯಿತು’ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಾಗಪುರ ವಲಯದ ಪುರಾತತ್ವ ಶಾಸ್ತ್ರಜ್ಞ ಅಧೀಕ್ಷಕ ಅರುಣ್ ಮಲ್ಲಿಕ್ ತಿಳಿಸಿದರು.</p><p>‘ಸಭಾಮಂಟಪ ಪತ್ತೆಹಚ್ಚಿದ ನಂತರ, ನಾವು ದೇವಾಲಯದ ಆಳವನ್ನು ಪರಿಶೀಲಿಸಲು ನಿರ್ಧರಿಸಿದ್ದೆವು. ಆ ವೇಳೆ ಲಕ್ಷ್ಮೀ ಮೂರ್ತಿ ಸಿಕ್ಕಿತು. ಇದಾದ ಬಳಿಕ ಶೇಷಶಾಯಿ ವಿಷ್ಣು ಮೂರ್ತಿ ಪತ್ತೆಯಾಯಿತು. ಈ ಮೂರ್ತಿಯು 1.70 ಉದ್ದ ಹಾಗೂ 1 ಮೀಟರ್ನಷ್ಟು ಎತ್ತರವಿದೆ. ಮೂರ್ತಿಯ ತಳಭಾಗ ಇನ್ನಷ್ಟೇ ತಿಳಿಯಬೇಕಿದ್ದು, 30 ಸೆಂ.ಮೀನಷ್ಟಿರಬಹುದು’ ಎಂದು ಮಲ್ಲಿಕ್ ತಿಳಿಸಿದರು.</p><p>‘ಕಪ್ಪುಶಿಲೆಯ ಮೂರ್ತಿ ಇದಾಗಿದ್ದು, ಇಂತಹವುಗಳು ದಕ್ಷಿಣ ಭಾರತದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿವೆ. ವಿಷ್ಣುವು ಶೇಷನಾಗನ ಮೇಲೆ ವಿರಮಿಸಿದ್ದು, ಲಕ್ಷ್ಮಿಯು ವಿಷ್ಣುವಿನ ಪಾದ ಒತ್ತುತ್ತಿದ್ದಾಳೆ. ಸಮುದ್ರಮಥನದ ಚಿತ್ರಣವನ್ನು ಕಾಣಬಹುದಾಗಿದ್ದು, ಅಶ್ವ, ಐರಾವತವನ್ನೂ ಕಾಣಬಹುದು’ ಎಂದು ವಿವರಿಸಿದರು.</p><p>ಪ್ರತಿಮಾಶಾಸ್ತ್ರ ತಜ್ಞ ಸೈಲಿ ಪಲಾಂಡೆ ದಾತಾರ್ ಪ್ರಕಾರ, ‘ಸ್ಥಳೀಯವಾಗಿ ಸಿಗುವ ಜ್ವಾಲಾಮುಖಿ ಬಂಡೆಯ ಬದಲಾಗಿ ಕಪ್ಪುಶಿಲೆಯನ್ನೇ ಮೂರ್ತಿ ರಚನೆಗೆ ಬಳಸಲಾಗಿದೆ. ಹೆಚ್ಚು ಮೃದುವಾಗಿರುವುದಕ್ಕೆ ಅದೇ ಕಾರಣ’ ಎಂದರು.</p><p>‘ಈ ಹಿಂದೆ ಮರಾಠವಾಡ ಪ್ರದೇಶದಲ್ಲಿ ಜ್ವಾಲಾಮುಖಿ ಬಂಡೆಯಿಂದ ರಚಿಸಲಾದ ಇಂತಹ ಮೂರ್ತಿಗಳು ಸಿಕ್ಕಿದ್ದವು. ಇದುವರೆಗಿನ ಮೂರ್ತಿಗಳಿಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾಗಿದೆ. ಭವಿಷ್ಯದಲ್ಲಿ ಮಹಾರಾಷ್ಟ್ರದಲ್ಲಿ ‘ಆರ್ಟ್ ಮ್ಯೂಸಿಯಂ‘ ಆರಂಭಿಸಿದರೆ, ಈಗ ಸಿಕ್ಕ ಪ್ರತಿಮೆಯು ಮೇರುಮೂರ್ತಿಯಾಗಿ ಗುರುತಿಸಿಕೊಳ್ಳಲಿದೆ’ ಎಂದು ದಾತಾರ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛತ್ರಪತಿ ಸಂಭಾಜಿ ನಗರ</strong>: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಲ್ಢಾಣಾ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ (ವಿರಮಿಸುತ್ತಿರುವ ವಿಷ್ಣು) ಪ್ರತಿಮೆ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>‘ಲಖುಜಿ ಜಾಧವರಾವ್ ಛತ್ರಿ ನೇತೃತ್ವದಲ್ಲಿ ಸಂರಕ್ಷಣಾ ಕೆಲಸದಲ್ಲಿ ತೊಡಗಿದ್ದ ವೇಳೆ ಮತ್ತಷ್ಟು ಅಗೆದು ದೇವಾಲಯದ ತಳಭಾಗ ತಲುಪಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಮೇಲ್ಭಾಗದಿಂದ 2.25 ಮೀಟರ್ ಅಡಿಭಾಗದಲ್ಲಿ ಈ ಶಿಲ್ಪ ಪತ್ತೆಯಾಯಿತು’ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಾಗಪುರ ವಲಯದ ಪುರಾತತ್ವ ಶಾಸ್ತ್ರಜ್ಞ ಅಧೀಕ್ಷಕ ಅರುಣ್ ಮಲ್ಲಿಕ್ ತಿಳಿಸಿದರು.</p><p>‘ಸಭಾಮಂಟಪ ಪತ್ತೆಹಚ್ಚಿದ ನಂತರ, ನಾವು ದೇವಾಲಯದ ಆಳವನ್ನು ಪರಿಶೀಲಿಸಲು ನಿರ್ಧರಿಸಿದ್ದೆವು. ಆ ವೇಳೆ ಲಕ್ಷ್ಮೀ ಮೂರ್ತಿ ಸಿಕ್ಕಿತು. ಇದಾದ ಬಳಿಕ ಶೇಷಶಾಯಿ ವಿಷ್ಣು ಮೂರ್ತಿ ಪತ್ತೆಯಾಯಿತು. ಈ ಮೂರ್ತಿಯು 1.70 ಉದ್ದ ಹಾಗೂ 1 ಮೀಟರ್ನಷ್ಟು ಎತ್ತರವಿದೆ. ಮೂರ್ತಿಯ ತಳಭಾಗ ಇನ್ನಷ್ಟೇ ತಿಳಿಯಬೇಕಿದ್ದು, 30 ಸೆಂ.ಮೀನಷ್ಟಿರಬಹುದು’ ಎಂದು ಮಲ್ಲಿಕ್ ತಿಳಿಸಿದರು.</p><p>‘ಕಪ್ಪುಶಿಲೆಯ ಮೂರ್ತಿ ಇದಾಗಿದ್ದು, ಇಂತಹವುಗಳು ದಕ್ಷಿಣ ಭಾರತದ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿವೆ. ವಿಷ್ಣುವು ಶೇಷನಾಗನ ಮೇಲೆ ವಿರಮಿಸಿದ್ದು, ಲಕ್ಷ್ಮಿಯು ವಿಷ್ಣುವಿನ ಪಾದ ಒತ್ತುತ್ತಿದ್ದಾಳೆ. ಸಮುದ್ರಮಥನದ ಚಿತ್ರಣವನ್ನು ಕಾಣಬಹುದಾಗಿದ್ದು, ಅಶ್ವ, ಐರಾವತವನ್ನೂ ಕಾಣಬಹುದು’ ಎಂದು ವಿವರಿಸಿದರು.</p><p>ಪ್ರತಿಮಾಶಾಸ್ತ್ರ ತಜ್ಞ ಸೈಲಿ ಪಲಾಂಡೆ ದಾತಾರ್ ಪ್ರಕಾರ, ‘ಸ್ಥಳೀಯವಾಗಿ ಸಿಗುವ ಜ್ವಾಲಾಮುಖಿ ಬಂಡೆಯ ಬದಲಾಗಿ ಕಪ್ಪುಶಿಲೆಯನ್ನೇ ಮೂರ್ತಿ ರಚನೆಗೆ ಬಳಸಲಾಗಿದೆ. ಹೆಚ್ಚು ಮೃದುವಾಗಿರುವುದಕ್ಕೆ ಅದೇ ಕಾರಣ’ ಎಂದರು.</p><p>‘ಈ ಹಿಂದೆ ಮರಾಠವಾಡ ಪ್ರದೇಶದಲ್ಲಿ ಜ್ವಾಲಾಮುಖಿ ಬಂಡೆಯಿಂದ ರಚಿಸಲಾದ ಇಂತಹ ಮೂರ್ತಿಗಳು ಸಿಕ್ಕಿದ್ದವು. ಇದುವರೆಗಿನ ಮೂರ್ತಿಗಳಿಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾಗಿದೆ. ಭವಿಷ್ಯದಲ್ಲಿ ಮಹಾರಾಷ್ಟ್ರದಲ್ಲಿ ‘ಆರ್ಟ್ ಮ್ಯೂಸಿಯಂ‘ ಆರಂಭಿಸಿದರೆ, ಈಗ ಸಿಕ್ಕ ಪ್ರತಿಮೆಯು ಮೇರುಮೂರ್ತಿಯಾಗಿ ಗುರುತಿಸಿಕೊಳ್ಳಲಿದೆ’ ಎಂದು ದಾತಾರ್ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>