ನವದೆಹಲಿ: ಪಾತಕಿ–ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದಿಂದ, ಬಿಜೆಪಿಯೇತರ ಪಕ್ಷದ ಆಡಳಿತವಿರುವ ಯಾವುದಾದರೂ ರಾಜ್ಯಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವೊಂದು ಬುಧವಾರ ನಿರಾಕರಿಸಿದೆ. ಮುಖ್ತಾರ್ ಈಗ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿ ಇದ್ದಾನೆ.