<p><strong>ಕರೂರು:</strong> ಎಲ್ಲೆಂದರಲ್ಲಿ ಬಿದ್ದ ಚಪ್ಪಲಿಗಳು, ನಜ್ಜುಗುಜ್ಜಾದ ನೀರಿನ ಬಾಟಲಿಗಳು, ಪಕ್ಷದ ಹರಿದ ಧ್ವಜಗಳು, ಬಟ್ಟೆಯ ಚೂರುಗಳು, ಮುರಿದುಬಿದ್ದ ಕಂಬಗಳು, ಕಸದ ರಾಶಿ–ಇವು ಕರೂರು ಕಾಲ್ತುಳಿತ ದುರಂತದ ಮೂಕಸಾಕ್ಷಿಗಳಾಗಿ ಕಣ್ಣೀರಿನ ಕತೆಯನ್ನು ಹೇಳುತ್ತಿವೆ. ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ.</p>.<p>ಕಾಲ್ತುಳಿತದ ಮಾಹಿತಿ ಗೊತ್ತಿರದ ಹಲವರು ಈ ಹೆದ್ದಾರಿಯಲ್ಲಿ ಬೆಳಿಗ್ಗೆ ನಡೆದು ಹೋಗುವಾಗ ದುರಂತದ ಕುರುಹುಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಸಾರ್ವಜನಿಕರು ಘಟನಾ ಸ್ಥಳಕ್ಕೆ ತೆರಳದಂತೆ ಸೂಚಿಸಿದ್ದಾರೆ.</p>.<p>ಟಿವಿಕೆ ಪಕ್ಷದ ಧ್ವಜಗಳು ಎತ್ತರದ ಕಂಬಗಳ ಮೇಲೆ ಇನ್ನೂ ಹಾರಾಡುತ್ತಿವೆ. ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್ಗಳು, ಲೈಟ್ಗಳು, ಪೋಸ್ಟರ್ಗಳು ಮತ್ತು ಪಕ್ಷದ ಪ್ರಚಾರ ಸಾಮಗ್ರಿಗಳು ಎಲ್ಲೆಂದರಲ್ಲಿ ಬಿದ್ದಿವೆ.</p>.<p>ದುರಂತಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಟಿವಿಕೆ ಕಾರ್ಯಕರ್ತರಾಗಲೀ, ಪದಾಧಿಕಾರಿಗಳಾಗಲೀ ಪ್ರತಿಕ್ರಿಯೆ ನೀಡುತ್ತಿಲ್ಲ.</p>.<p>‘ನೂಕುನುಗ್ಗಲು ಉಂಟಾಗಿದ್ದರಿಂದ ಹಲವರು ರಸ್ತೆ ಪಕ್ಕದ ಚರಂಡಿಗೆ ಬಿದ್ದರು. ಕೆಲವರು ಅಲ್ಲಿಂದ ಎದ್ದು ಬರಲು ಯತ್ನಿಸಿದರು’ ಎಂದು ರ್ಯಾಲಿಯಲ್ಲಿ ಪಾಲ್ಗೊಂಡು ಕಾಲ್ತುಳಿತದಿಂದ ಪಾರಾಗಿ ಬಂದಿರುವ ಯುವಕರೊಬ್ಬರು ತಿಳಿಸಿದರು.</p>.<p>ಕಾರ್ಯಕ್ರಮವು ಆರಂಭದಲ್ಲಿ ‘ಸಂಭ್ರಮದಂತಿತ್ತು’, ನಂತರ ‘ದುರಂತ’ವಾಗಿ ಅಂತ್ಯಗೊಂಡಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p>‘ವಿಜಯ್ ಅವರ ಮೇಲಿನ ಅಭಿಮಾನದಿಂದ ಅವರ ಹೆಸರನ್ನು ಕೂಗುತ್ತಿದ್ದೆವು. ಈ ಮಧ್ಯೆ ಕಾಲ್ತುಳಿತ ಸಂಭವಿಸಿದ್ದು ತಿಳಿಯಲೇ ಇಲ್ಲ. ಹಲವರು ಕೆಳಗೆ ಬಿದ್ದರು. ಬಿದ್ದಿರುವವರ ಮೇಲೆಯೇ ಜನರು ಕಾಲುಗಳನ್ನು ಇಟ್ಟ ಕಾರಣ ನಾಹುತ ಸಂಭವಿಸಿತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರೂರು:</strong> ಎಲ್ಲೆಂದರಲ್ಲಿ ಬಿದ್ದ ಚಪ್ಪಲಿಗಳು, ನಜ್ಜುಗುಜ್ಜಾದ ನೀರಿನ ಬಾಟಲಿಗಳು, ಪಕ್ಷದ ಹರಿದ ಧ್ವಜಗಳು, ಬಟ್ಟೆಯ ಚೂರುಗಳು, ಮುರಿದುಬಿದ್ದ ಕಂಬಗಳು, ಕಸದ ರಾಶಿ–ಇವು ಕರೂರು ಕಾಲ್ತುಳಿತ ದುರಂತದ ಮೂಕಸಾಕ್ಷಿಗಳಾಗಿ ಕಣ್ಣೀರಿನ ಕತೆಯನ್ನು ಹೇಳುತ್ತಿವೆ. ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ.</p>.<p>ಕಾಲ್ತುಳಿತದ ಮಾಹಿತಿ ಗೊತ್ತಿರದ ಹಲವರು ಈ ಹೆದ್ದಾರಿಯಲ್ಲಿ ಬೆಳಿಗ್ಗೆ ನಡೆದು ಹೋಗುವಾಗ ದುರಂತದ ಕುರುಹುಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಸಾರ್ವಜನಿಕರು ಘಟನಾ ಸ್ಥಳಕ್ಕೆ ತೆರಳದಂತೆ ಸೂಚಿಸಿದ್ದಾರೆ.</p>.<p>ಟಿವಿಕೆ ಪಕ್ಷದ ಧ್ವಜಗಳು ಎತ್ತರದ ಕಂಬಗಳ ಮೇಲೆ ಇನ್ನೂ ಹಾರಾಡುತ್ತಿವೆ. ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್ಗಳು, ಲೈಟ್ಗಳು, ಪೋಸ್ಟರ್ಗಳು ಮತ್ತು ಪಕ್ಷದ ಪ್ರಚಾರ ಸಾಮಗ್ರಿಗಳು ಎಲ್ಲೆಂದರಲ್ಲಿ ಬಿದ್ದಿವೆ.</p>.<p>ದುರಂತಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಟಿವಿಕೆ ಕಾರ್ಯಕರ್ತರಾಗಲೀ, ಪದಾಧಿಕಾರಿಗಳಾಗಲೀ ಪ್ರತಿಕ್ರಿಯೆ ನೀಡುತ್ತಿಲ್ಲ.</p>.<p>‘ನೂಕುನುಗ್ಗಲು ಉಂಟಾಗಿದ್ದರಿಂದ ಹಲವರು ರಸ್ತೆ ಪಕ್ಕದ ಚರಂಡಿಗೆ ಬಿದ್ದರು. ಕೆಲವರು ಅಲ್ಲಿಂದ ಎದ್ದು ಬರಲು ಯತ್ನಿಸಿದರು’ ಎಂದು ರ್ಯಾಲಿಯಲ್ಲಿ ಪಾಲ್ಗೊಂಡು ಕಾಲ್ತುಳಿತದಿಂದ ಪಾರಾಗಿ ಬಂದಿರುವ ಯುವಕರೊಬ್ಬರು ತಿಳಿಸಿದರು.</p>.<p>ಕಾರ್ಯಕ್ರಮವು ಆರಂಭದಲ್ಲಿ ‘ಸಂಭ್ರಮದಂತಿತ್ತು’, ನಂತರ ‘ದುರಂತ’ವಾಗಿ ಅಂತ್ಯಗೊಂಡಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p>‘ವಿಜಯ್ ಅವರ ಮೇಲಿನ ಅಭಿಮಾನದಿಂದ ಅವರ ಹೆಸರನ್ನು ಕೂಗುತ್ತಿದ್ದೆವು. ಈ ಮಧ್ಯೆ ಕಾಲ್ತುಳಿತ ಸಂಭವಿಸಿದ್ದು ತಿಳಿಯಲೇ ಇಲ್ಲ. ಹಲವರು ಕೆಳಗೆ ಬಿದ್ದರು. ಬಿದ್ದಿರುವವರ ಮೇಲೆಯೇ ಜನರು ಕಾಲುಗಳನ್ನು ಇಟ್ಟ ಕಾರಣ ನಾಹುತ ಸಂಭವಿಸಿತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>