<p><strong>ಲಖನೌ</strong>: 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರದ್ದು ಎನ್ನಲಾದ ಅಸ್ಥಿಪಂಜರ, ಅವರ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿದೆ.</p>.<p>ಹಾಥರಸ್ ಜಿಲ್ಲೆಯ ಗಿರ್ಲೋದಪುರ ಗ್ರಾಮದ ಬುದ್ಧಸಿಂಗ್ 1994ರಲ್ಲಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸಂಬಂಧಿಕರು, ಅವರ ಪತ್ತೆಗಾಗಿ ನಡೆಸಿದ್ದ ಪ್ರಯತ್ನಗಳು ಫಲ ನೀಡಿರಲಿಲ್ಲ.</p>.<p>ಬುದ್ಧಸಿಂಗ್ ಅವರು ಸನ್ಯಾಸ ಸ್ವೀಕರಿಸಿ, ಯಾವುದೋ ಒಂದು ಆಶ್ರಮದಲ್ಲಿ ಇದ್ದಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಈಗ ಬುದ್ಧಸಿಂಗ್ ಅವರದ್ದು ಎನ್ನಲಾಗುತ್ತಿರುವ ಅಸ್ಥಿಪಂಜರ ಪತ್ತೆಯಾಗಿರುವುದು ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದೆ.</p>.<p>ಬುದ್ಧಸಿಂಗ್ ಅವರನ್ನು ಅವರ ಮಕ್ಕಳೇ ಹತ್ಯೆ ಮಾಡಿ, ಮನೆ ಹಿತ್ತಲಲ್ಲಿ ಹೂತಿದ್ದರು ಎಂದು ಹೇಳಲಾಗುತ್ತಿದೆ.</p>.<p>ಸಿಂಗ್ ಅವರು ನಾಪತ್ತೆಯಾದಾಗ, ಕಿರಿಯ ಮಗ ಪಂಜಾಬಿ ಸಿಂಗ್ ಅವರಿಗೆ 9 ವರ್ಷ. ಇತ್ತೀಚೆಗೆ ಪೊಲೀಸರನ್ನು ಭೇಟಿ ಮಾಡಿದ್ದ ಪಂಜಾಬಿ ಸಿಂಗ್, ‘ನನ್ನ ಇಬ್ಬರು ಅಣ್ಣಂದಿರೇ ತಂದೆಯನ್ನು ಕೊಂದಿದ್ದು, ಮೃತದೇಹವನ್ನು ಮನೆ ಹಿತ್ತಲಿನಲ್ಲಿ ಹೂತಿದ್ದರು. ಈ ಬಗ್ಗೆ ಬಾಯಿ ಬಿಡದಂತೆ ನನಗೆ ಬೆದರಿಕೆ ಹಾಕಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ತಂದೆಯ ಹತ್ಯೆ ನಡೆದ ದಿನಾಂಕ ನನಗೆ ನೆನಪಿಲ್ಲ. ಅವರನ್ನು 1994ರಲ್ಲಿ ಹತ್ಯೆ ಮಾಡಲಾಗಿತ್ತು’ ಎಂದು ಪೊಲೀಸರಿಗೆ ತಿಳಿಸಿದ್ದ ಪಂಜಾಬಿ ಸಿಂಗ್, 'ಮನೆಯ ಹಿತ್ತಲಿನಲ್ಲಿ ಶವ ಹೂತಿದ್ದ ನೆನಪಿದೆ’ ಎಂಬ ಮಾಹಿತಿ ನೀಡಿದ್ದಾರೆ.</p>.<p>ಪೊಲೀಸರು, ಪಂಜಾಬಿ ಸಿಂಗ್ ಮನೆಯ ಹಿತ್ತಲಿನಲ್ಲಿ ಸುಮಾರು 15 ಅಡಿಗಳಷ್ಟು ಅಗೆದಾಗ, ಅಸ್ಥಿಪಂಜರ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.</p>.<p>‘ವಶಪಡಿಸಿಕೊಂಡಿರುವ ಅಸ್ಥಿಪಂಜರ ಬುದ್ಧ ಸಿಂಗ್ ಅವರದ್ದೇ ಎಂಬುದನ್ನು ದೃಢಪಡಿಸುವುದಕ್ಕಾಗಿ ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಈ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ’ ಎಂದು ಹಾಥರಸ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರದ್ದು ಎನ್ನಲಾದ ಅಸ್ಥಿಪಂಜರ, ಅವರ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿದೆ.</p>.<p>ಹಾಥರಸ್ ಜಿಲ್ಲೆಯ ಗಿರ್ಲೋದಪುರ ಗ್ರಾಮದ ಬುದ್ಧಸಿಂಗ್ 1994ರಲ್ಲಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸಂಬಂಧಿಕರು, ಅವರ ಪತ್ತೆಗಾಗಿ ನಡೆಸಿದ್ದ ಪ್ರಯತ್ನಗಳು ಫಲ ನೀಡಿರಲಿಲ್ಲ.</p>.<p>ಬುದ್ಧಸಿಂಗ್ ಅವರು ಸನ್ಯಾಸ ಸ್ವೀಕರಿಸಿ, ಯಾವುದೋ ಒಂದು ಆಶ್ರಮದಲ್ಲಿ ಇದ್ದಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಈಗ ಬುದ್ಧಸಿಂಗ್ ಅವರದ್ದು ಎನ್ನಲಾಗುತ್ತಿರುವ ಅಸ್ಥಿಪಂಜರ ಪತ್ತೆಯಾಗಿರುವುದು ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದೆ.</p>.<p>ಬುದ್ಧಸಿಂಗ್ ಅವರನ್ನು ಅವರ ಮಕ್ಕಳೇ ಹತ್ಯೆ ಮಾಡಿ, ಮನೆ ಹಿತ್ತಲಲ್ಲಿ ಹೂತಿದ್ದರು ಎಂದು ಹೇಳಲಾಗುತ್ತಿದೆ.</p>.<p>ಸಿಂಗ್ ಅವರು ನಾಪತ್ತೆಯಾದಾಗ, ಕಿರಿಯ ಮಗ ಪಂಜಾಬಿ ಸಿಂಗ್ ಅವರಿಗೆ 9 ವರ್ಷ. ಇತ್ತೀಚೆಗೆ ಪೊಲೀಸರನ್ನು ಭೇಟಿ ಮಾಡಿದ್ದ ಪಂಜಾಬಿ ಸಿಂಗ್, ‘ನನ್ನ ಇಬ್ಬರು ಅಣ್ಣಂದಿರೇ ತಂದೆಯನ್ನು ಕೊಂದಿದ್ದು, ಮೃತದೇಹವನ್ನು ಮನೆ ಹಿತ್ತಲಿನಲ್ಲಿ ಹೂತಿದ್ದರು. ಈ ಬಗ್ಗೆ ಬಾಯಿ ಬಿಡದಂತೆ ನನಗೆ ಬೆದರಿಕೆ ಹಾಕಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ತಂದೆಯ ಹತ್ಯೆ ನಡೆದ ದಿನಾಂಕ ನನಗೆ ನೆನಪಿಲ್ಲ. ಅವರನ್ನು 1994ರಲ್ಲಿ ಹತ್ಯೆ ಮಾಡಲಾಗಿತ್ತು’ ಎಂದು ಪೊಲೀಸರಿಗೆ ತಿಳಿಸಿದ್ದ ಪಂಜಾಬಿ ಸಿಂಗ್, 'ಮನೆಯ ಹಿತ್ತಲಿನಲ್ಲಿ ಶವ ಹೂತಿದ್ದ ನೆನಪಿದೆ’ ಎಂಬ ಮಾಹಿತಿ ನೀಡಿದ್ದಾರೆ.</p>.<p>ಪೊಲೀಸರು, ಪಂಜಾಬಿ ಸಿಂಗ್ ಮನೆಯ ಹಿತ್ತಲಿನಲ್ಲಿ ಸುಮಾರು 15 ಅಡಿಗಳಷ್ಟು ಅಗೆದಾಗ, ಅಸ್ಥಿಪಂಜರ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.</p>.<p>‘ವಶಪಡಿಸಿಕೊಂಡಿರುವ ಅಸ್ಥಿಪಂಜರ ಬುದ್ಧ ಸಿಂಗ್ ಅವರದ್ದೇ ಎಂಬುದನ್ನು ದೃಢಪಡಿಸುವುದಕ್ಕಾಗಿ ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಈ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ’ ಎಂದು ಹಾಥರಸ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>