<p><strong>ನವದೆಹಲಿ: </strong>ನೂತನ ಕೃಷಿ ಕಾಯ್ದೆಗಳು, ಕೋವಿಡ್–19 ಪಿಡುಗಿನ ನಿರ್ವಹಣೆ, ಆರ್ಥಿಕತೆ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ‘ದೇಶದ ಪ್ರಜಾತಂತ್ರ ವ್ಯವಸ್ಥೆ ಸಂಕಷ್ಟದ ಸಮಯ ಎದುರಿಸುತ್ತಿದೆ’ ಎಂದು ಟೀಕಿಸಿದ್ದಾರೆ.</p>.<p>ಭಾನುವಾರ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಪರಿಶಿಷ್ಟ ಜನರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ’ ಎಂದೂ ಆರೋಪಿಸಿದರು.</p>.<p>ಬಿಹಾರ ವಿಧಾನಸಭೆಗೆ ಚುನಾವಣೆ, ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಹೊತ್ತಿನಲ್ಲಿ ನಡೆದಿರುವ ಸಭೆಗೆ ಮಹತ್ವಬಂದಿದೆ. ಅಲ್ಲದೇ, ಸಂಘಟನೆಯಲ್ಲಿ ಕಳೆದ ತಿಂಗಳು ಭಾರಿ ಬದಲಾವಣೆ ತಂದ ನಂತರ ನಡೆದ ಮೊದಲ ಸಭೆಯೂ ಇದಾಗಿದೆ.</p>.<p>‘ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ. ಹಸಿರು ಕ್ರಾಂತಿಯಿಂದ ಈ ದೇಶಕ್ಕೆ ಆಗಿರುವ ಲಾಭವನ್ನು ಅಳಿಸಿ ಹಾಕುವ ಪಿತೂರಿಯ ಭಾಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ’ ಎಂದೂ ಆಪಾದಿಸಿದರು.</p>.<p>‘ಈ ನೂತನ ಕಾಯ್ದೆಗಳು ಭಾರತದ ಕೃಷಿ ಕ್ಷೇತ್ರ, ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ಬುನಾದಿಯನ್ನೇ ಬುಡಮೇಲು ಮಾಡಲಿವೆ. ಕೋಟ್ಯಂತರ ಜನ ಸಣ್ಣ–ಮಧ್ಯಮ ಹಿಡುವಳಿದಾರರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರ ಜೀವನೋಪಾಯವನ್ನೂ ಅಪಾಯಕ್ಕೆ ತಳ್ಳಿದೆ. ಆದರೆ, ಕೇಂದ್ರದ ಈ ಹುನ್ನಾರವನ್ನು ತಡೆಯುವ ಕರ್ತವ್ಯ ನಮ್ಮದು’ ಎಂದೂ ಹೇಳಿದರು.</p>.<p>‘ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.</p>.<p>‘ಕೊರೊನಾ ಸೋಂಕು ಪ್ರಸರಣವನ್ನು ತಡೆಗಟ್ಟುವ ಕಾರ್ಯ ಸಮರ್ಪಕವಾಗಿ ಆಗದ ಕಾರಣ ಈ ಪಿಡುಗು ಇಡೀ ದೇಶವನ್ನೇ ವ್ಯಾಪಿಸುವಂತಾಯಿತು. ವಲಸೆ ಕಾರ್ಮಿಕರು ಪಟ್ಟ ಕಷ್ಟ, ಕೋವಿಡ್ ಪ್ರಸರಣ ನಿಯಂತ್ರಣಕ್ಕಾಗಿ ಯೋಜನೆಯೇ ಇಲ್ಲದಿರುವುದೇ ಈ ಮಾತಿಗೆ ಸಾಕ್ಷಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ನೂತನ ಕೃಷಿ ಕಾಯ್ದೆಗಳು, ಕೋವಿಡ್–19 ಪಿಡುಗಿನ ನಿರ್ವಹಣೆ, ಆರ್ಥಿಕತೆ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ‘ದೇಶದ ಪ್ರಜಾತಂತ್ರ ವ್ಯವಸ್ಥೆ ಸಂಕಷ್ಟದ ಸಮಯ ಎದುರಿಸುತ್ತಿದೆ’ ಎಂದು ಟೀಕಿಸಿದ್ದಾರೆ.</p>.<p>ಭಾನುವಾರ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಪರಿಶಿಷ್ಟ ಜನರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ’ ಎಂದೂ ಆರೋಪಿಸಿದರು.</p>.<p>ಬಿಹಾರ ವಿಧಾನಸಭೆಗೆ ಚುನಾವಣೆ, ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಹೊತ್ತಿನಲ್ಲಿ ನಡೆದಿರುವ ಸಭೆಗೆ ಮಹತ್ವಬಂದಿದೆ. ಅಲ್ಲದೇ, ಸಂಘಟನೆಯಲ್ಲಿ ಕಳೆದ ತಿಂಗಳು ಭಾರಿ ಬದಲಾವಣೆ ತಂದ ನಂತರ ನಡೆದ ಮೊದಲ ಸಭೆಯೂ ಇದಾಗಿದೆ.</p>.<p>‘ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ. ಹಸಿರು ಕ್ರಾಂತಿಯಿಂದ ಈ ದೇಶಕ್ಕೆ ಆಗಿರುವ ಲಾಭವನ್ನು ಅಳಿಸಿ ಹಾಕುವ ಪಿತೂರಿಯ ಭಾಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ’ ಎಂದೂ ಆಪಾದಿಸಿದರು.</p>.<p>‘ಈ ನೂತನ ಕಾಯ್ದೆಗಳು ಭಾರತದ ಕೃಷಿ ಕ್ಷೇತ್ರ, ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ಬುನಾದಿಯನ್ನೇ ಬುಡಮೇಲು ಮಾಡಲಿವೆ. ಕೋಟ್ಯಂತರ ಜನ ಸಣ್ಣ–ಮಧ್ಯಮ ಹಿಡುವಳಿದಾರರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರ ಜೀವನೋಪಾಯವನ್ನೂ ಅಪಾಯಕ್ಕೆ ತಳ್ಳಿದೆ. ಆದರೆ, ಕೇಂದ್ರದ ಈ ಹುನ್ನಾರವನ್ನು ತಡೆಯುವ ಕರ್ತವ್ಯ ನಮ್ಮದು’ ಎಂದೂ ಹೇಳಿದರು.</p>.<p>‘ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.</p>.<p>‘ಕೊರೊನಾ ಸೋಂಕು ಪ್ರಸರಣವನ್ನು ತಡೆಗಟ್ಟುವ ಕಾರ್ಯ ಸಮರ್ಪಕವಾಗಿ ಆಗದ ಕಾರಣ ಈ ಪಿಡುಗು ಇಡೀ ದೇಶವನ್ನೇ ವ್ಯಾಪಿಸುವಂತಾಯಿತು. ವಲಸೆ ಕಾರ್ಮಿಕರು ಪಟ್ಟ ಕಷ್ಟ, ಕೋವಿಡ್ ಪ್ರಸರಣ ನಿಯಂತ್ರಣಕ್ಕಾಗಿ ಯೋಜನೆಯೇ ಇಲ್ಲದಿರುವುದೇ ಈ ಮಾತಿಗೆ ಸಾಕ್ಷಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>