‘ಈ ನೂತನ ಕಾಯ್ದೆಗಳು ಭಾರತದ ಕೃಷಿ ಕ್ಷೇತ್ರ, ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ಬುನಾದಿಯನ್ನೇ ಬುಡಮೇಲು ಮಾಡಲಿವೆ. ಕೋಟ್ಯಂತರ ಜನ ಸಣ್ಣ–ಮಧ್ಯಮ ಹಿಡುವಳಿದಾರರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರ ಜೀವನೋಪಾಯವನ್ನೂ ಅಪಾಯಕ್ಕೆ ತಳ್ಳಿದೆ. ಆದರೆ, ಕೇಂದ್ರದ ಈ ಹುನ್ನಾರವನ್ನು ತಡೆಯುವ ಕರ್ತವ್ಯ ನಮ್ಮದು’ ಎಂದೂ ಹೇಳಿದರು.