<p><strong>ನವದೆಹಲಿ:</strong> ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ‘ಇಂಡಿಯಾ’ ಕೂಟದ ಸಂಚಾಲಕರಾಗಲು ‘ಸೂಕ್ತ ವ್ಯಕ್ತಿ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಸೋಮವಾರ ಪ್ರತಿಪಾದಿಸಿದರು.</p>.<p>‘ಕೂಟದಲ್ಲಿ ಒಗ್ಗಟ್ಟನ್ನು ಖಾತರಿಪಡಿಸಲು ಪ್ರಾಬಲ್ಯ ಸಾಧಿಸುವ ಪಕ್ಷಕ್ಕಿಂತ ಸಣ್ಣ ಪಕ್ಷದ ನಾಯಕರೊಬ್ಬರು ಆ ಹುದ್ದೆಯಲ್ಲಿ ಕೂರುವುದು ಉತ್ತಮ’ ಎಂದು ಅವರು ಅಭಿಪ್ರಾಯಪಟ್ಟರು. </p>.<p>‘ಸದ್ಯ 2029ರ ಚುನಾವಣೆಯೇ ನಮ್ಮ ಗುರಿ. ಹೀಗಿದ್ದಾಗ ‘ಇಂಡಿಯಾ’ ಒಕ್ಕೂಟ ಮುನ್ನಡೆಸಲು ಸ್ಟಾಲಿನ್ಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ’ ಎಂದು ಅವರು ಹೇಳಿದರು.</p>.<p>‘ಬಲಿಷ್ಠ ‘ಇಂಡಿಯಾ’ ಒಕ್ಕೂಟ ಮಾತ್ರ 2029ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಇದಿಲ್ಲದಿದ್ದರೆ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲು ಸಾಧ್ಯವಿಲ್ಲ’ ಎಂದೂ ಅವರು ಕಾರಣವನ್ನು ವಿವರಿಸಿದರು.</p>.<p>‘ಮುಂಬರುವ ಚುನಾವಣೆ ಬಳಿಕ ಸ್ಟಾಲಿನ್ ಪುತ್ರ ಮತ್ತು ಅವರ ಸಹಚರರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಾರೆ. ಸ್ಟಾಲಿನ್ ಅವರು ಮಾತ್ರ ರಾಷ್ಟ್ರಮಟ್ಟದಲ್ಲಿ ಒಕ್ಕೂಟವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದರು.</p>.<p>‘ಕಳೆದ ಕೆಲವು ವರ್ಷಗಳಿಂದ ಡಿಎಂಕೆಯು ಕಾಂಗ್ರೆಸ್ನ ವಿಶ್ವಾಸಾರ್ಹ ಮಿತ್ರಪಕ್ಷವಾಗಿದೆ. ತಾವೊಬ್ಬ ಅಸಾಧಾರಣ ಆಡಳಿತಗಾರ ಎಂಬುದನ್ನು ಸ್ಟಾಲಿನ್ ಸಾಬೀತುಪಡಿಸಿದ್ದಾರೆ. ಅವರೊಬ್ಬ ನಿಷ್ಕಳಂಕ ಜಾತ್ಯತೀತ ನಾಯಕ ಸಹ ಹೌದು. ಹೀಗಾಗಿ ಅವರ ಆಯ್ಕೆ ಸೂಕ್ತ’ ಎಂದೂ ಹೇಳಿದರು.</p>.<div><blockquote>ನನ್ನ ಮಿತಿ ಏನೆಂದು ಸ್ಪಷ್ಟವಾಗಿ ತಿಳಿದಿದೆ. ಆ ವ್ಯಾಪ್ತಿಯಿಂದ ಆಚೆಗೆ ಬರಲಾರೆ. ‘ಇಂಡಿಯಾ’ ಒಕ್ಕೂಟವನ್ನು ಕಾಂಗ್ರೆಸ್ನವರೇ ಮುನ್ನಡೆಸುವುದು ಸೂಕ್ತ</blockquote><span class="attribution"> ಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ‘ಇಂಡಿಯಾ’ ಕೂಟದ ಸಂಚಾಲಕರಾಗಲು ‘ಸೂಕ್ತ ವ್ಯಕ್ತಿ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಸೋಮವಾರ ಪ್ರತಿಪಾದಿಸಿದರು.</p>.<p>‘ಕೂಟದಲ್ಲಿ ಒಗ್ಗಟ್ಟನ್ನು ಖಾತರಿಪಡಿಸಲು ಪ್ರಾಬಲ್ಯ ಸಾಧಿಸುವ ಪಕ್ಷಕ್ಕಿಂತ ಸಣ್ಣ ಪಕ್ಷದ ನಾಯಕರೊಬ್ಬರು ಆ ಹುದ್ದೆಯಲ್ಲಿ ಕೂರುವುದು ಉತ್ತಮ’ ಎಂದು ಅವರು ಅಭಿಪ್ರಾಯಪಟ್ಟರು. </p>.<p>‘ಸದ್ಯ 2029ರ ಚುನಾವಣೆಯೇ ನಮ್ಮ ಗುರಿ. ಹೀಗಿದ್ದಾಗ ‘ಇಂಡಿಯಾ’ ಒಕ್ಕೂಟ ಮುನ್ನಡೆಸಲು ಸ್ಟಾಲಿನ್ಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ’ ಎಂದು ಅವರು ಹೇಳಿದರು.</p>.<p>‘ಬಲಿಷ್ಠ ‘ಇಂಡಿಯಾ’ ಒಕ್ಕೂಟ ಮಾತ್ರ 2029ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಇದಿಲ್ಲದಿದ್ದರೆ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲು ಸಾಧ್ಯವಿಲ್ಲ’ ಎಂದೂ ಅವರು ಕಾರಣವನ್ನು ವಿವರಿಸಿದರು.</p>.<p>‘ಮುಂಬರುವ ಚುನಾವಣೆ ಬಳಿಕ ಸ್ಟಾಲಿನ್ ಪುತ್ರ ಮತ್ತು ಅವರ ಸಹಚರರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಾರೆ. ಸ್ಟಾಲಿನ್ ಅವರು ಮಾತ್ರ ರಾಷ್ಟ್ರಮಟ್ಟದಲ್ಲಿ ಒಕ್ಕೂಟವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದರು.</p>.<p>‘ಕಳೆದ ಕೆಲವು ವರ್ಷಗಳಿಂದ ಡಿಎಂಕೆಯು ಕಾಂಗ್ರೆಸ್ನ ವಿಶ್ವಾಸಾರ್ಹ ಮಿತ್ರಪಕ್ಷವಾಗಿದೆ. ತಾವೊಬ್ಬ ಅಸಾಧಾರಣ ಆಡಳಿತಗಾರ ಎಂಬುದನ್ನು ಸ್ಟಾಲಿನ್ ಸಾಬೀತುಪಡಿಸಿದ್ದಾರೆ. ಅವರೊಬ್ಬ ನಿಷ್ಕಳಂಕ ಜಾತ್ಯತೀತ ನಾಯಕ ಸಹ ಹೌದು. ಹೀಗಾಗಿ ಅವರ ಆಯ್ಕೆ ಸೂಕ್ತ’ ಎಂದೂ ಹೇಳಿದರು.</p>.<div><blockquote>ನನ್ನ ಮಿತಿ ಏನೆಂದು ಸ್ಪಷ್ಟವಾಗಿ ತಿಳಿದಿದೆ. ಆ ವ್ಯಾಪ್ತಿಯಿಂದ ಆಚೆಗೆ ಬರಲಾರೆ. ‘ಇಂಡಿಯಾ’ ಒಕ್ಕೂಟವನ್ನು ಕಾಂಗ್ರೆಸ್ನವರೇ ಮುನ್ನಡೆಸುವುದು ಸೂಕ್ತ</blockquote><span class="attribution"> ಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>