ತಿರುವನಂತಪುರ: ಬೀದಿ ಬದಿ ಆಹಾರ, ಬೀದಿ ನಾಟಕ, ಬೀದಿ ಪ್ರದರ್ಶನ ಹಾಗೂ ಕಲಾತ್ಮಕ ಕೆಲಸಗಳಿಗೆ ಹೆಸರಾಗಿರುವ ಇಲ್ಲಿನ ಮಾನವೀಯಂ ಬೀದಿಯಲ್ಲಿ ಮಧ್ಯರಾತ್ರಿ ಬಳಿಕ ಲೌಡ್ ಸ್ಪೀಕರ್ ಬಳಕೆ ಮಾಡುವುದಕ್ಕೆ ನಿಷೇಧ ಹೇರಿದ ಬೆನ್ನಲ್ಲೇ, ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಮದ್ಯ ಸೇವಿಸಿದ್ದ ಕೆಲ ವ್ಯಕ್ತಿಗಳು ಸ್ಥಳದಲ್ಲಿ ಗಲಾಟೆ ಮಾಡಿದ್ದು, ಅಂಗಡಿಗಳಿಗೆ ಸೇರಿದ ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.