<p><strong>ನವದೆಹಲಿ</strong>: ‘ಲೋಕಸಭೆಯಲ್ಲಿ ಬಹುಶಃ ಕೊನೆಯದಾಗಿ ಮಾತನಾಡಬಹುದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ತಿಳಿಸಿ ಮನವಿ ಮಾಡಿಕೊಂಡರೂ ಭಾಷಣಕ್ಕೆ ಹೆಚ್ಚಿನ ಅವಕಾಶ ನೀಡದೆ, ಬರೀ 5 ನಿಮಿಷಕ್ಕೇ ಮಾತು ಮುಗಿಸುವಂತೆ ಸೂಚಿಸಿದ್ದು ನನಗೆ ತೀವ್ರ ನೋವುಂಟು ಮಾಡಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಳಲು ತೋಡಿಕೊಂಡರು.</p>.<p>ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಲು ಗುರುವಾರ ಅವಕಾಶ ನೀಡಿದ್ದ ಸ್ಪೀಕರ್, 5 ನಿಮಿಷದೊಳಗೇ ಮಾತಿಗೆ ವಿರಾಮ ಹೇಳುವಂತೆ ಸೂಚಿಸಿದರು. ಮಾತನಾಡಲು ಅವಕಾಶ ನೀಡುವಂತೆ ಇಂದೂ ಕೋರಿದ್ದೆ. ಆದರೂ ಅವರು ಅವಕಾಶ ನಿರಾಕರಿಸಿದರು ಎಂದು ಸುದ್ದಿಗಾರರೆದುರು ನೋವು ತೋಡಿಕೊಂಡರು.</p>.<p>‘ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಬಗ್ಗೆ ವ್ಯಂಗ್ಯವಾಡಿದರು. ಜೆಡಿಎಸ್– ಕಾಂಗ್ರೆಸ್ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಸಮರ್ಪಕವಾಗಿ ಮನ್ನಾ ಮಾಡಿಲ್ಲ ಎಂದು ಟೀಕಿಸಿದರು. ಆದರೆ, ಅವರು ಆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪ್ರತಿ<br />ಕ್ರಿಯೆ ನೀಡಲೆಂದೇ ಸಮಯ ಕೋರಿದ್ದೆ. ಆದರೆ ಅವಕಾಶ ಸಿಗಲಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಲೋಕಸಭೆಯಲ್ಲಿ ಬಹುಶಃ ಕೊನೆಯದಾಗಿ ಮಾತನಾಡಬಹುದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ತಿಳಿಸಿ ಮನವಿ ಮಾಡಿಕೊಂಡರೂ ಭಾಷಣಕ್ಕೆ ಹೆಚ್ಚಿನ ಅವಕಾಶ ನೀಡದೆ, ಬರೀ 5 ನಿಮಿಷಕ್ಕೇ ಮಾತು ಮುಗಿಸುವಂತೆ ಸೂಚಿಸಿದ್ದು ನನಗೆ ತೀವ್ರ ನೋವುಂಟು ಮಾಡಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಳಲು ತೋಡಿಕೊಂಡರು.</p>.<p>ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಲು ಗುರುವಾರ ಅವಕಾಶ ನೀಡಿದ್ದ ಸ್ಪೀಕರ್, 5 ನಿಮಿಷದೊಳಗೇ ಮಾತಿಗೆ ವಿರಾಮ ಹೇಳುವಂತೆ ಸೂಚಿಸಿದರು. ಮಾತನಾಡಲು ಅವಕಾಶ ನೀಡುವಂತೆ ಇಂದೂ ಕೋರಿದ್ದೆ. ಆದರೂ ಅವರು ಅವಕಾಶ ನಿರಾಕರಿಸಿದರು ಎಂದು ಸುದ್ದಿಗಾರರೆದುರು ನೋವು ತೋಡಿಕೊಂಡರು.</p>.<p>‘ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಬಗ್ಗೆ ವ್ಯಂಗ್ಯವಾಡಿದರು. ಜೆಡಿಎಸ್– ಕಾಂಗ್ರೆಸ್ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಸಮರ್ಪಕವಾಗಿ ಮನ್ನಾ ಮಾಡಿಲ್ಲ ಎಂದು ಟೀಕಿಸಿದರು. ಆದರೆ, ಅವರು ಆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪ್ರತಿ<br />ಕ್ರಿಯೆ ನೀಡಲೆಂದೇ ಸಮಯ ಕೋರಿದ್ದೆ. ಆದರೆ ಅವಕಾಶ ಸಿಗಲಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>