<p><strong>ನವದೆಹಲಿ :</strong> ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯನ್ನು (ಸಿಎಸ್ಆರ್) ಕಾರ್ಪೊರೇಟ್ ಪರಿಸರ ಜವಾಬ್ದಾರಿಯಿಂದ (ಸಿಇಆರ್) ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.</p>.<p>ಪರಿಸರ ಮತ್ತು ಪರಿಸರ ವ್ಯವಸ್ಥೆಯಲ್ಲಿನ ಇತರ ಜೀವಿಗಳ ಸಮಾನ ಹಕ್ಕುಗಳನ್ನು ನಿರ್ಲಕ್ಷಿಸುವಂತಿಲ್ಲ. ಅವುಗಳನ್ನು ನಿರ್ಲಕ್ಷಿಸುವ ಕಂಪನಿಗಳು ತಮ್ಮನ್ನು ಸಾಮಾಜಿಕವಾಗಿ ಹೊಣೆಗಾರರು ಎಂದು ಹೇಳಿಕೊಳ್ಳಲು ಆಗದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರ ಪೀಠ ಖಾರವಾಗಿ ಹೇಳಿದೆ .</p>.<p>ರಾಜಸ್ಥಾನ ಮತ್ತು ಗುಜರಾತ್ನಲ್ಲಿ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಾರ್ಯಾಚರಣೆಯಿಂದ ಸಂಕಷ್ಟ ಎದುರಿಸುತ್ತಿರುವ ಹೆಬ್ಬಕ ಪಕ್ಷಿ ಸಂಕುಲದ ರಕ್ಷಣೆ ದೃಷ್ಟಿಯಿಂದ ಪೀಠ ಕೆಲ ನಿರ್ದೇಶನಗಳನ್ನು ನೀಡಿದೆ. ಹೆಬ್ಬಕಗಳನ್ನು ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದದಲ್ಲಿ ಗುರುತಿಸಲಾಗಿದೆ. </p>.<p>ಸಾಮಾಜಿಕ ಹೊಣೆಗಾರಿಕೆಯು ಅಂತರ್ಗತವಾಗಿ ಪರಿಸರ ಹೊಣೆಗಾರಿಕೆಯನ್ನೂ ಒಳಗೊಂಡಿರಬೇಕು ಎಂದು ಪೀಠ ಸೂಚಿಸಿದೆ. </p>.<p>ದೇಶದ ಪ್ರಜೆಗಳು ಕಾಡು, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕು ಮತ್ತು ಸುಧಾರಿಸಬೇಕು. ಅಲ್ಲದೆ ಸಕಲ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು ಎಂಬುದು ಮೂಲಭೂತ ಕರ್ತವ್ಯ. ಭಾರತದ ಸಂವಿಧಾನವು 51ಎ(ಜಿ) ವಿಧಿಯಲ್ಲಿ ಇವುಗಳನ್ನು ಉಲ್ಲೇಖಿಸಿದೆ ಎಂದು ಪೀಠ ಹೇಳಿದೆ. </p>.<p>ಕಾರ್ಪೊರೇಟ್ ಕಂಪನಿಗಳು ಸಮಾಜದ ಮುಖ್ಯ ಅಂಗವಾಗಿ ಈ ಮೂಲಭೂತ ಕರ್ತವ್ಯಗಳನ್ನು ಹಂಚಿಕೊಳ್ಳಬೇಕು. ಸಿಎಸ್ಆರ್ ನಿಧಿಗಳ ಮೂಲಕ ಈ ಕರ್ತವ್ಯ ನಿಭಾಯಿಸಬೇಕು. ಪರಿಸರ ಸಂರಕ್ಷಣೆಗಾಗಿ ಹಣವನ್ನು ಹಂಚಿಕೆ ಮಾಡುವುದು ಸ್ವಯಂಪ್ರೇರಿತವಾಗಿ ಮಾಡುವ ದಾನವಲ್ಲ. ಅದು ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂಬುದನ್ನು ನೆನಪಿಡಬೇಕು ಎಂದು ಪೀಠ ತಿಳಿಸಿದೆ. </p>.<p>ರಾಜಸ್ಥಾನ ಮತ್ತು ಗುಜರಾತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಂಪನಿಗಳು ಅಳಿವಿನ ಅಂಚಿನಲ್ಲಿರುವ ಹೆಬ್ಬಕ ಪಕ್ಷಿಗಳ ವಾಸಸ್ಥಾನದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿವೆ. ಈ ಪ್ರದೇಶಗಳಲ್ಲಿ ಪಕ್ಷಿ ಸಂಕುಲಕ್ಕೆ ತೊಂದರೆ ಆಗದಂತೆ ಎಚ್ಚರದಿಂದ ಚಟುವಟಿಕೆಗಳನ್ನು ನಡೆಸಬೇಕು. ಅವುಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪೀಠ ಸೂಚಿಸಿದೆ. </p>.<p>ಹೆಬ್ಬಕಗಳ ರಕ್ಷಣೆಗೆ ಕೋರಿ ಪರಿಸರವಾದಿ ಎಂ.ಕೆ.ರಂಜಿತ್ ಸಿನ್ಹ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಕುರಿತು ನಿರ್ದೇಶನಗಳನ್ನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ :</strong> ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯನ್ನು (ಸಿಎಸ್ಆರ್) ಕಾರ್ಪೊರೇಟ್ ಪರಿಸರ ಜವಾಬ್ದಾರಿಯಿಂದ (ಸಿಇಆರ್) ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.</p>.<p>ಪರಿಸರ ಮತ್ತು ಪರಿಸರ ವ್ಯವಸ್ಥೆಯಲ್ಲಿನ ಇತರ ಜೀವಿಗಳ ಸಮಾನ ಹಕ್ಕುಗಳನ್ನು ನಿರ್ಲಕ್ಷಿಸುವಂತಿಲ್ಲ. ಅವುಗಳನ್ನು ನಿರ್ಲಕ್ಷಿಸುವ ಕಂಪನಿಗಳು ತಮ್ಮನ್ನು ಸಾಮಾಜಿಕವಾಗಿ ಹೊಣೆಗಾರರು ಎಂದು ಹೇಳಿಕೊಳ್ಳಲು ಆಗದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರ ಪೀಠ ಖಾರವಾಗಿ ಹೇಳಿದೆ .</p>.<p>ರಾಜಸ್ಥಾನ ಮತ್ತು ಗುಜರಾತ್ನಲ್ಲಿ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಾರ್ಯಾಚರಣೆಯಿಂದ ಸಂಕಷ್ಟ ಎದುರಿಸುತ್ತಿರುವ ಹೆಬ್ಬಕ ಪಕ್ಷಿ ಸಂಕುಲದ ರಕ್ಷಣೆ ದೃಷ್ಟಿಯಿಂದ ಪೀಠ ಕೆಲ ನಿರ್ದೇಶನಗಳನ್ನು ನೀಡಿದೆ. ಹೆಬ್ಬಕಗಳನ್ನು ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದದಲ್ಲಿ ಗುರುತಿಸಲಾಗಿದೆ. </p>.<p>ಸಾಮಾಜಿಕ ಹೊಣೆಗಾರಿಕೆಯು ಅಂತರ್ಗತವಾಗಿ ಪರಿಸರ ಹೊಣೆಗಾರಿಕೆಯನ್ನೂ ಒಳಗೊಂಡಿರಬೇಕು ಎಂದು ಪೀಠ ಸೂಚಿಸಿದೆ. </p>.<p>ದೇಶದ ಪ್ರಜೆಗಳು ಕಾಡು, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕು ಮತ್ತು ಸುಧಾರಿಸಬೇಕು. ಅಲ್ಲದೆ ಸಕಲ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು ಎಂಬುದು ಮೂಲಭೂತ ಕರ್ತವ್ಯ. ಭಾರತದ ಸಂವಿಧಾನವು 51ಎ(ಜಿ) ವಿಧಿಯಲ್ಲಿ ಇವುಗಳನ್ನು ಉಲ್ಲೇಖಿಸಿದೆ ಎಂದು ಪೀಠ ಹೇಳಿದೆ. </p>.<p>ಕಾರ್ಪೊರೇಟ್ ಕಂಪನಿಗಳು ಸಮಾಜದ ಮುಖ್ಯ ಅಂಗವಾಗಿ ಈ ಮೂಲಭೂತ ಕರ್ತವ್ಯಗಳನ್ನು ಹಂಚಿಕೊಳ್ಳಬೇಕು. ಸಿಎಸ್ಆರ್ ನಿಧಿಗಳ ಮೂಲಕ ಈ ಕರ್ತವ್ಯ ನಿಭಾಯಿಸಬೇಕು. ಪರಿಸರ ಸಂರಕ್ಷಣೆಗಾಗಿ ಹಣವನ್ನು ಹಂಚಿಕೆ ಮಾಡುವುದು ಸ್ವಯಂಪ್ರೇರಿತವಾಗಿ ಮಾಡುವ ದಾನವಲ್ಲ. ಅದು ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂಬುದನ್ನು ನೆನಪಿಡಬೇಕು ಎಂದು ಪೀಠ ತಿಳಿಸಿದೆ. </p>.<p>ರಾಜಸ್ಥಾನ ಮತ್ತು ಗುಜರಾತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಂಪನಿಗಳು ಅಳಿವಿನ ಅಂಚಿನಲ್ಲಿರುವ ಹೆಬ್ಬಕ ಪಕ್ಷಿಗಳ ವಾಸಸ್ಥಾನದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿವೆ. ಈ ಪ್ರದೇಶಗಳಲ್ಲಿ ಪಕ್ಷಿ ಸಂಕುಲಕ್ಕೆ ತೊಂದರೆ ಆಗದಂತೆ ಎಚ್ಚರದಿಂದ ಚಟುವಟಿಕೆಗಳನ್ನು ನಡೆಸಬೇಕು. ಅವುಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪೀಠ ಸೂಚಿಸಿದೆ. </p>.<p>ಹೆಬ್ಬಕಗಳ ರಕ್ಷಣೆಗೆ ಕೋರಿ ಪರಿಸರವಾದಿ ಎಂ.ಕೆ.ರಂಜಿತ್ ಸಿನ್ಹ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಕುರಿತು ನಿರ್ದೇಶನಗಳನ್ನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>