<p><strong>ನವದೆಹಲಿ:</strong> ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.</p>.<p>ವಕೀಲ ಮ್ಯಾಥ್ಯೂಸ್ ನೆಡುಂಬಾರ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ತಮ್ಮ ಮೂರನೇ ಅರ್ಜಿಯಾಗಿದ್ದು, ಅದನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವನ್ನು ಒತ್ತಾಯಿಸಿದರು.</p>.<p class="bodytext">‘ಈ ಆರ್ಜಿಯನ್ನು ಈಗಲೇ ವಜಾಗೊಳಿಸಲು ನೀವು ಬಯಸುತ್ತೀರಾ’ ಎಂದು ಪ್ರಶ್ನಿಸಿದ ಸಿಜೆಐ, ಸೂಕ್ತ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.</p>.<p class="bodytext">‘ಅರ್ಜಿಯನ್ನು ವಜಾಗೊಳಿಸುವುದು ಅಸಾಧ್ಯ. ಈ ಪ್ರಕರಣದ ಎಫ್ಐಆರ್ ದಾಖಲಿಸಬೇಕಾಗಿದೆ. ಈಗ ವರ್ಮಾ ಕೂಡಾ ಅದನ್ನೇ ಕೇಳುತ್ತಿರುವಂತೆ ತೋರುತ್ತಿದೆ. ಎಫ್ಐಆರ್ ದಾಖಲಿಸಿ ತನಿಖೆ ನಡೆಯಬೇಕು’ ಎಂದು ವಕೀಲರು ತಿಳಿಸಿದರು.</p>.<p>ವಕೀಲರು ಹೈಕೋರ್ಟ್ ನ್ಯಾಯಮೂರ್ತಿಯನ್ನು ‘ವರ್ಮಾ’ ಎಂದಷ್ಟೇ ಸಂಬೋಧಿಸಿರುವುದಕ್ಕೆ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. </p>.<p>‘ಅವರು (ವರ್ಮಾ) ನಿಮ್ಮ ಸ್ನೇಹಿತರೇ? ವರ್ಮಾ ಅವರು ಇನ್ನೂ ನ್ಯಾಯಮೂರ್ತಿ ಆಗಿದ್ದಾರೆ. ನೀವು ಅವರನ್ನು ಯಾವ ರೀತಿ ಸಂಬೋಧಿಸುತ್ತೀರಿ? ಶಿಷ್ಟಾಚಾರ ಪಾಲಿಸಿರಿ’ ಎಂದು ಸಿಜೆಐ ಹೇಳಿದರು.</p>.<p>‘ನ್ಯಾಯಮೂರ್ತಿ ಎಂಬ ಗೌರವದ ಸ್ಥಾನ ಅವರಿಗೆ ಅನ್ವಯಿಸಬಹುದು ಎಂದು ನಾನು ಭಾವಿಸುವುದಿಲ್ಲ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ವಕೀಲರು ಒತ್ತಾಯಿಸಿದರು. ‘ದಯವಿಟ್ಟು ನ್ಯಾಯಾಲಯಕ್ಕೆ ಅಪ್ಪಣೆ ಮಾಡಬೇಡಿ’ ಎಂದು ಸಿಜೆಐ ಹೇಳಿದರು.</p>.ನ್ಯಾ. ವರ್ಮಾ ಪದಚ್ಯುತಿಗೊಳಿಸುವ ಪ್ರಕ್ರಿಯೆ: ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಕೆ.ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ 100ಕ್ಕೂ ಹೆಚ್ಚು ಸಂಸದರಿಂದ ಸಹಿ: ರಿಜಿಜು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.</p>.<p>ವಕೀಲ ಮ್ಯಾಥ್ಯೂಸ್ ನೆಡುಂಬಾರ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ತಮ್ಮ ಮೂರನೇ ಅರ್ಜಿಯಾಗಿದ್ದು, ಅದನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವನ್ನು ಒತ್ತಾಯಿಸಿದರು.</p>.<p class="bodytext">‘ಈ ಆರ್ಜಿಯನ್ನು ಈಗಲೇ ವಜಾಗೊಳಿಸಲು ನೀವು ಬಯಸುತ್ತೀರಾ’ ಎಂದು ಪ್ರಶ್ನಿಸಿದ ಸಿಜೆಐ, ಸೂಕ್ತ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.</p>.<p class="bodytext">‘ಅರ್ಜಿಯನ್ನು ವಜಾಗೊಳಿಸುವುದು ಅಸಾಧ್ಯ. ಈ ಪ್ರಕರಣದ ಎಫ್ಐಆರ್ ದಾಖಲಿಸಬೇಕಾಗಿದೆ. ಈಗ ವರ್ಮಾ ಕೂಡಾ ಅದನ್ನೇ ಕೇಳುತ್ತಿರುವಂತೆ ತೋರುತ್ತಿದೆ. ಎಫ್ಐಆರ್ ದಾಖಲಿಸಿ ತನಿಖೆ ನಡೆಯಬೇಕು’ ಎಂದು ವಕೀಲರು ತಿಳಿಸಿದರು.</p>.<p>ವಕೀಲರು ಹೈಕೋರ್ಟ್ ನ್ಯಾಯಮೂರ್ತಿಯನ್ನು ‘ವರ್ಮಾ’ ಎಂದಷ್ಟೇ ಸಂಬೋಧಿಸಿರುವುದಕ್ಕೆ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. </p>.<p>‘ಅವರು (ವರ್ಮಾ) ನಿಮ್ಮ ಸ್ನೇಹಿತರೇ? ವರ್ಮಾ ಅವರು ಇನ್ನೂ ನ್ಯಾಯಮೂರ್ತಿ ಆಗಿದ್ದಾರೆ. ನೀವು ಅವರನ್ನು ಯಾವ ರೀತಿ ಸಂಬೋಧಿಸುತ್ತೀರಿ? ಶಿಷ್ಟಾಚಾರ ಪಾಲಿಸಿರಿ’ ಎಂದು ಸಿಜೆಐ ಹೇಳಿದರು.</p>.<p>‘ನ್ಯಾಯಮೂರ್ತಿ ಎಂಬ ಗೌರವದ ಸ್ಥಾನ ಅವರಿಗೆ ಅನ್ವಯಿಸಬಹುದು ಎಂದು ನಾನು ಭಾವಿಸುವುದಿಲ್ಲ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ವಕೀಲರು ಒತ್ತಾಯಿಸಿದರು. ‘ದಯವಿಟ್ಟು ನ್ಯಾಯಾಲಯಕ್ಕೆ ಅಪ್ಪಣೆ ಮಾಡಬೇಡಿ’ ಎಂದು ಸಿಜೆಐ ಹೇಳಿದರು.</p>.ನ್ಯಾ. ವರ್ಮಾ ಪದಚ್ಯುತಿಗೊಳಿಸುವ ಪ್ರಕ್ರಿಯೆ: ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಕೆ.ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ 100ಕ್ಕೂ ಹೆಚ್ಚು ಸಂಸದರಿಂದ ಸಹಿ: ರಿಜಿಜು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>