<p><strong>ಮುಂಬೈ:</strong> ಬಿಜೆಪಿಗೆ ರಾಜೀನಾಮೆ ನೀಡಿದ್ದ ಹಿರಿಯ ರಾಜಕಾರಣಿ ಸೂರ್ಯಕಾಂತ ಪಾಟೀಲ್ ಮಂಗಳವಾರ ಶರದ್ ಪವಾರ್ ನೇತೃತ್ವದ ಎನ್ಸಿಪಿಗೆ (ಎಸ್ಪಿ) ಮರು ಸೇರ್ಪಡೆಗೊಂಡರು.</p>.<p>ಶರದ್ ಪವಾರ್ ಹಾಗೂ ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಸೂರ್ಯಕಾಂತ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ.</p>.<p>ಹತ್ತು ವರ್ಷದ ಹಿಂದೆ ಎನ್ಸಿಪಿ ತೊರೆದು ಬಿಜೆಪಿಗೆ ಸೇರಿದ್ದ ಸೂರ್ಯಕಾಂತ ಪಾಟೀಲ್, ಇದೀಗ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿದ್ದಾರೆ.</p>.<p>ಪತ್ರಕರ್ತರೂ ಆಗಿದ್ದ ಸೂರ್ಯಕಾಂತ ಅವರು ಮರಾಠವಾಡ ಪ್ರಾಂತ್ಯದ ನಾಂದೇಡ್, ಹಿಂಗೋಲಿ, ಪರ್ಭಾನಿ ಹಾಗೂ ಬೀಡ್ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದಾರೆ.</p>.<p>ಶರದ್ ಪವಾರ್ 1999ರಲ್ಲಿ ಕಾಂಗ್ರೆಸ್ ತೊರೆದು ಎನ್ಸಿಪಿ ಸ್ಥಾಪಿಸಿದಾಗ, ಸೂರ್ಯಕಾಂತ ಪಾಟೀಲ್ ಅವರು ಪವಾರ್ ಅವರನ್ನು ಹಿಂಬಾಲಿಸಿದ್ದರು.</p>.<p>ಕಾಂಗ್ರೆಸ್ನ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕಾದ ನಷ್ಟವನ್ನು ಸೂರ್ಯಕಾಂತ ಸೇರ್ಪಡೆಯು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರಿದೂಗಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಬಿಜೆಪಿಗೆ ರಾಜೀನಾಮೆ ನೀಡಿದ್ದ ಹಿರಿಯ ರಾಜಕಾರಣಿ ಸೂರ್ಯಕಾಂತ ಪಾಟೀಲ್ ಮಂಗಳವಾರ ಶರದ್ ಪವಾರ್ ನೇತೃತ್ವದ ಎನ್ಸಿಪಿಗೆ (ಎಸ್ಪಿ) ಮರು ಸೇರ್ಪಡೆಗೊಂಡರು.</p>.<p>ಶರದ್ ಪವಾರ್ ಹಾಗೂ ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಸೂರ್ಯಕಾಂತ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ.</p>.<p>ಹತ್ತು ವರ್ಷದ ಹಿಂದೆ ಎನ್ಸಿಪಿ ತೊರೆದು ಬಿಜೆಪಿಗೆ ಸೇರಿದ್ದ ಸೂರ್ಯಕಾಂತ ಪಾಟೀಲ್, ಇದೀಗ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿದ್ದಾರೆ.</p>.<p>ಪತ್ರಕರ್ತರೂ ಆಗಿದ್ದ ಸೂರ್ಯಕಾಂತ ಅವರು ಮರಾಠವಾಡ ಪ್ರಾಂತ್ಯದ ನಾಂದೇಡ್, ಹಿಂಗೋಲಿ, ಪರ್ಭಾನಿ ಹಾಗೂ ಬೀಡ್ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದಾರೆ.</p>.<p>ಶರದ್ ಪವಾರ್ 1999ರಲ್ಲಿ ಕಾಂಗ್ರೆಸ್ ತೊರೆದು ಎನ್ಸಿಪಿ ಸ್ಥಾಪಿಸಿದಾಗ, ಸೂರ್ಯಕಾಂತ ಪಾಟೀಲ್ ಅವರು ಪವಾರ್ ಅವರನ್ನು ಹಿಂಬಾಲಿಸಿದ್ದರು.</p>.<p>ಕಾಂಗ್ರೆಸ್ನ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕಾದ ನಷ್ಟವನ್ನು ಸೂರ್ಯಕಾಂತ ಸೇರ್ಪಡೆಯು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರಿದೂಗಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>