ಮೂರು ಬಾರಿಯ ಸಚಿವ ಟಿ.ಆರ್.ಬಿ ರಾಜಾ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಕೈಗಾರಿಕಾ ಸಚಿವರಾಗಿದ್ದ ತಂಗಂ ತೆನ್ನರಸು ಅವರಿಗೆ ಹಣಕಾಸು ಇಲಾಖೆ ನೀಡಲಾಗಿದೆ. ಜತೆಗೆ ಮಾನವ ಸಂಪನ್ಮೂಲ ನಿರ್ವಹಣೆ ಖಾತೆಯನ್ನೂ ವಹಿಸಲಾಗಿದೆ.
ಹೈನೋದ್ಯಮ ಅಭಿವೃದ್ಧಿ ಸಚಿವರಾಗಿದ್ದ ಎಸ್.ಎಂ ನಾಸೆರ್ ಅವರನ್ನು ಕೈಬಿಟ್ಟು ರಾಜಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಅಚ್ಚರಿ ಎಂಬಂತೆ ಅವರಿಗೆ ಪ್ರಮುಖ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ.