<p><strong>ಚೆನ್ನೈ:</strong> ತಮಿಳುನಾಡು ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಘೋಷಿಸಿದ್ದಾರೆ.</p>.<p>‘ತಮಿಳುನಾಡು ಹೊಸ ಪಿಂಚಣಿ ಖಾತರಿ ಯೋಜನೆ’ಯನ್ನು ಘೋಷಿಸುವ ಮೂಲಕ ಎರಡು ದಶಕಗಳಷ್ಟು ಹಳೆಯದಾದ ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ.</p>.<p>ಸರ್ಕಾರಿ ನೌಕರರ ಕೊನೆಯ ವೇತನದ ಶೇಕಡ 50ರಷ್ಟು ಪಿಂಚಣಿ ದೊರೆಯಲಿದೆ. ಈ ಹೊಸ ಪಿಂಚಣಿ ಯೋಜನೆಯಲ್ಲಿ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳೂ ಸೇರಿವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ನೌಕರರ ಶೇಕಡ 10 ರಷ್ಟು ಕೊಡುಗೆಯ ಜೊತೆಗೆ, ಪಿಂಚಣಿ ನಿಧಿಗೆ ಅಗತ್ಯವಿರುವ ಸಂಪೂರ್ಣ ಹೆಚ್ಚುವರಿ ಹಣವನ್ನು ಒದಗಿಸುತ್ತದೆ.</p>.<p>ಶೇಕಡ 50 ರಷ್ಟು ಪಿಂಚಣಿ ಪಡೆಯುವ ಪಿಂಚಣಿದಾರರಿಗೆ ಸರ್ಕಾರಿ ನೌಕರರಂತೆಯೇ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಹೆಚ್ಚಳದ ಸೌಲಭ್ಯವೂ ಇರಲಿದೆ. ಪಿಂಚಣಿದಾರರು ಮೃತಪಟ್ಟರೆ, ಮೃತರ ನಾಮನಿರ್ದೇಶಿತರಿಗೆ ಪಿಂಚಣಿ ಮೊತ್ತದ ಶೇ 60ರಷ್ಟು ಹಣವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ.</p>.<p>ನೌಕರರೊಬ್ಬರು ಸೇವಾವಧಿಯಲ್ಲಿ ಮೃತಪಟ್ಟರೆ ಅಥವಾ ನಿವೃತ್ತಿಯ ಸಮಯದಲ್ಲಿ ಮರಣ ಹೊಂದಿದರೆ ಅವರ ಉಳಿದ ಸೇವಾವಧಿಗೆ ಅನುಗುಣವಾಗಿ ಗರಿಷ್ಠ ₹25 ಲಕ್ಷದವರೆಗೆ (ಡೆತ್ ಗ್ರಾಚ್ಯುಟಿ) ನೀಡಲಾಗುವುದು. ಹೊಸ ಪಿಂಚಣಿ ಯೋಜನೆ ಜಾರಿಯಾದ ನಂತರ, ಪಿಂಚಣಿ ಪಡೆಯಲು ಅರ್ಹತಾ ಸೇವಾ ಅವಧಿಯನ್ನು ಪೂರ್ಣಗೊಳಿಸದೆ ನಿವೃತ್ತರಾಗುವ ಎಲ್ಲರಿಗೂ ಕನಿಷ್ಠ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡು ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಘೋಷಿಸಿದ್ದಾರೆ.</p>.<p>‘ತಮಿಳುನಾಡು ಹೊಸ ಪಿಂಚಣಿ ಖಾತರಿ ಯೋಜನೆ’ಯನ್ನು ಘೋಷಿಸುವ ಮೂಲಕ ಎರಡು ದಶಕಗಳಷ್ಟು ಹಳೆಯದಾದ ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ.</p>.<p>ಸರ್ಕಾರಿ ನೌಕರರ ಕೊನೆಯ ವೇತನದ ಶೇಕಡ 50ರಷ್ಟು ಪಿಂಚಣಿ ದೊರೆಯಲಿದೆ. ಈ ಹೊಸ ಪಿಂಚಣಿ ಯೋಜನೆಯಲ್ಲಿ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳೂ ಸೇರಿವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ನೌಕರರ ಶೇಕಡ 10 ರಷ್ಟು ಕೊಡುಗೆಯ ಜೊತೆಗೆ, ಪಿಂಚಣಿ ನಿಧಿಗೆ ಅಗತ್ಯವಿರುವ ಸಂಪೂರ್ಣ ಹೆಚ್ಚುವರಿ ಹಣವನ್ನು ಒದಗಿಸುತ್ತದೆ.</p>.<p>ಶೇಕಡ 50 ರಷ್ಟು ಪಿಂಚಣಿ ಪಡೆಯುವ ಪಿಂಚಣಿದಾರರಿಗೆ ಸರ್ಕಾರಿ ನೌಕರರಂತೆಯೇ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಹೆಚ್ಚಳದ ಸೌಲಭ್ಯವೂ ಇರಲಿದೆ. ಪಿಂಚಣಿದಾರರು ಮೃತಪಟ್ಟರೆ, ಮೃತರ ನಾಮನಿರ್ದೇಶಿತರಿಗೆ ಪಿಂಚಣಿ ಮೊತ್ತದ ಶೇ 60ರಷ್ಟು ಹಣವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ.</p>.<p>ನೌಕರರೊಬ್ಬರು ಸೇವಾವಧಿಯಲ್ಲಿ ಮೃತಪಟ್ಟರೆ ಅಥವಾ ನಿವೃತ್ತಿಯ ಸಮಯದಲ್ಲಿ ಮರಣ ಹೊಂದಿದರೆ ಅವರ ಉಳಿದ ಸೇವಾವಧಿಗೆ ಅನುಗುಣವಾಗಿ ಗರಿಷ್ಠ ₹25 ಲಕ್ಷದವರೆಗೆ (ಡೆತ್ ಗ್ರಾಚ್ಯುಟಿ) ನೀಡಲಾಗುವುದು. ಹೊಸ ಪಿಂಚಣಿ ಯೋಜನೆ ಜಾರಿಯಾದ ನಂತರ, ಪಿಂಚಣಿ ಪಡೆಯಲು ಅರ್ಹತಾ ಸೇವಾ ಅವಧಿಯನ್ನು ಪೂರ್ಣಗೊಳಿಸದೆ ನಿವೃತ್ತರಾಗುವ ಎಲ್ಲರಿಗೂ ಕನಿಷ್ಠ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>