ಮುಖ್ಯಮಂತ್ರಿಯವರು ಸಂತ್ರಸ್ತರ ಭೇಟಿಗಾಗಿ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಬುಧವಾರ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅಪಾರ ವಿನಾಶ ಉಂಟಾಗಿರುವ, ರಸ್ತೆಗಳು ಹಾಳಾಗಿರುವ, ದೊಡ್ಡದೊಡ್ಡ ಮರಗಳು ಧರೆಗುರುಳಿ ಸಂಚಾರ ಬಂದ್ ಆಗಿರುವ ಎಷ್ಟು ಪ್ರದೇಶಗಳಿಗೆ ಸ್ಟಾಲಿನ್ ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.