<p><strong>ಇಬ್ರಾಹಿಂಪಟ್ಟಣ</strong>: ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈಎಸ್ಆರ್ಸಿಪಿಯ ನಾಯಕ ಜೋಗಿ ರಮೇಶ್ ಅವರ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನ ಮನೆಗೆ ಟಿಡಿಪಿ ಕಾರ್ಯಕರ್ತರು ಬೆಂಕಿ ಇಟ್ಟಿದ್ದಾರೆ.</p><p>ಜೋಗಿ ರಮೇಶ್ ಅವರು ಟಿಡಿಪಿ ನಾಯಕ ನಾರಾ ಲೋಕೇಶ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.</p><p>ರಮೇಶ್ ಹೇಳಿಕೆಯಿಂದ ಕೆರಳಿದ್ದ ಟಿಡಿಪಿಯ ನೂರಾರು ಕಾರ್ಯಕರ್ತರು ಅವರ ಮನೆಗೆ ನುಗ್ಗಿದ್ದರು. ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರಾದರೂ ಕೆಲವು ಕಿಡಿಗೇಡಿಗಳು ಮನೆ ಒಳಗೆ ನುಗ್ಗಿ ಬಾಲ್ಕನಿ ಮತ್ತೆ ಇತರ ಕಡೆಗೆ ಬೆಂಕಿ ಇಟ್ಟಿದ್ದಾರೆ.</p>.<p>ಮನೆಯ ಬಳಿ ನಿಲ್ಲಿಸಲಾಗಿದ್ದ ಕಟೌಟ್ಗಳನ್ನು ಧ್ವಂಸ ಮಾಡಿರುವ ಕಾರ್ಯಕರ್ತರು ರಮೇಶ್ ವಿರುದ್ಧ ಘೋಷಣೆ ಕೂಗಿದರು. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p><p>ಘಟನೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಜೋಗಿ ರಮೇಶ್, ನನ್ನ ಕೊಲೆಗೆ ಯತ್ನಿಸಲಾಗಿದೆ. ಇದರ ಹಿಂದೆ ಸಿಎಂ ಚಂದ್ರಬಾಬು ನಾಯ್ಡು ಹಾಗೂ ನಾರಾ ಲೋಕೇಶ್ ಇದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಅವರು ಕೊಲೆ ಯತ್ನ ದೂರನ್ನೂ ದಾಖಲಿಸಿದ್ದಾರೆ.</p><p>ಸಿಎಂ ಚಂದ್ರಬಾಬು ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಸಚಿವ ಹಾಗೂ ವೈಎಸ್ಆರ್ಪಿಯ ಮತ್ತೊಬ್ಬ ನಾಯಕ ಸಚಿವ ರಾಮ್ ಬಾಬು ಅವರನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ.</p><p>ಈ ಬಗ್ಗೆ ವೈಎಸ್ಆರ್ಸಿಪಿ ನಾಯಕ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಹೇಳಿದ್ದಾರೆ.</p>.ಬಜೆಟ್ 2026 | ವಿದೇಶಿ ಪ್ರವಾಸ, ಶಿಕ್ಷಣ, ಚಿಕಿತ್ಸೆ ಅಗ್ಗ: ಟಿಸಿಎಸ್ನಲ್ಲಿ ಇಳಿಕೆ.ಕೇಂದ್ರ ಬಜೆಟ್: ಉದ್ಯೋಗ ಸೃಜನೆಯ ಮೇಲೆ ಕಣ್ಣಿಡಲು ಉನ್ನತಾಧಿಕಾರದ ಸ್ಥಾಯಿ ಸಮಿತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಬ್ರಾಹಿಂಪಟ್ಟಣ</strong>: ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈಎಸ್ಆರ್ಸಿಪಿಯ ನಾಯಕ ಜೋಗಿ ರಮೇಶ್ ಅವರ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನ ಮನೆಗೆ ಟಿಡಿಪಿ ಕಾರ್ಯಕರ್ತರು ಬೆಂಕಿ ಇಟ್ಟಿದ್ದಾರೆ.</p><p>ಜೋಗಿ ರಮೇಶ್ ಅವರು ಟಿಡಿಪಿ ನಾಯಕ ನಾರಾ ಲೋಕೇಶ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಟಿಡಿಪಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.</p><p>ರಮೇಶ್ ಹೇಳಿಕೆಯಿಂದ ಕೆರಳಿದ್ದ ಟಿಡಿಪಿಯ ನೂರಾರು ಕಾರ್ಯಕರ್ತರು ಅವರ ಮನೆಗೆ ನುಗ್ಗಿದ್ದರು. ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರಾದರೂ ಕೆಲವು ಕಿಡಿಗೇಡಿಗಳು ಮನೆ ಒಳಗೆ ನುಗ್ಗಿ ಬಾಲ್ಕನಿ ಮತ್ತೆ ಇತರ ಕಡೆಗೆ ಬೆಂಕಿ ಇಟ್ಟಿದ್ದಾರೆ.</p>.<p>ಮನೆಯ ಬಳಿ ನಿಲ್ಲಿಸಲಾಗಿದ್ದ ಕಟೌಟ್ಗಳನ್ನು ಧ್ವಂಸ ಮಾಡಿರುವ ಕಾರ್ಯಕರ್ತರು ರಮೇಶ್ ವಿರುದ್ಧ ಘೋಷಣೆ ಕೂಗಿದರು. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p><p>ಘಟನೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಜೋಗಿ ರಮೇಶ್, ನನ್ನ ಕೊಲೆಗೆ ಯತ್ನಿಸಲಾಗಿದೆ. ಇದರ ಹಿಂದೆ ಸಿಎಂ ಚಂದ್ರಬಾಬು ನಾಯ್ಡು ಹಾಗೂ ನಾರಾ ಲೋಕೇಶ್ ಇದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಅವರು ಕೊಲೆ ಯತ್ನ ದೂರನ್ನೂ ದಾಖಲಿಸಿದ್ದಾರೆ.</p><p>ಸಿಎಂ ಚಂದ್ರಬಾಬು ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಸಚಿವ ಹಾಗೂ ವೈಎಸ್ಆರ್ಪಿಯ ಮತ್ತೊಬ್ಬ ನಾಯಕ ಸಚಿವ ರಾಮ್ ಬಾಬು ಅವರನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ.</p><p>ಈ ಬಗ್ಗೆ ವೈಎಸ್ಆರ್ಸಿಪಿ ನಾಯಕ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಹೇಳಿದ್ದಾರೆ.</p>.ಬಜೆಟ್ 2026 | ವಿದೇಶಿ ಪ್ರವಾಸ, ಶಿಕ್ಷಣ, ಚಿಕಿತ್ಸೆ ಅಗ್ಗ: ಟಿಸಿಎಸ್ನಲ್ಲಿ ಇಳಿಕೆ.ಕೇಂದ್ರ ಬಜೆಟ್: ಉದ್ಯೋಗ ಸೃಜನೆಯ ಮೇಲೆ ಕಣ್ಣಿಡಲು ಉನ್ನತಾಧಿಕಾರದ ಸ್ಥಾಯಿ ಸಮಿತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>