<p><strong>ಶ್ರೀನಗರ:</strong> ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರೊಬ್ಬರನ್ನು ಉಗ್ರನೊಬ್ಬ ಗುರುವಾರ ಹತ್ಯೆ ಮಾಡಿರುವುದು ಆ ಸಮುದಾಯದವರಲ್ಲಿ ವ್ಯಾಪಕ ಆಕ್ರೋಶ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗಿದೆ.</p>.<p>ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ 35 ವರ್ಷ ವಯಸ್ಸಿನ ರಾಹುಲ್ ಭಟ್ ಎಂಬವರನ್ನು ಉಗ್ರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಕಾಶ್ಮೀರಿ ಪಂಡಿತ ಸಮುದಾಯದವರಿಗೆ ನೀಡಲಾಗಿರುವ ವಿಶೇಷ ಉದ್ಯೋಗ ಪ್ಯಾಕೇಜ್ನಡಿ ರಾಹುಲ್ ಭಟ್ ಉದ್ಯೋಗಕ್ಕೆ ಸೇರಿದ್ದರು.</p>.<p><a href="https://www.prajavani.net/india-news/sanjay-raut-on-recent-targeted-killing-of-kashmiri-pandit-rahul-bhat-let-us-not-keep-pointing-936393.html" itemprop="url">ಪಾಕ್ ಕಡೆ ಬೆರಳು ತೋರದೇ ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡುತ್ತೀರಿ? ರಾವುತ್ </a></p>.<p>ರಾಹುಲ್ ಭಟ್ ಹತ್ಯೆ ಬೆನ್ನಲ್ಲೇ ಸಮುದಾಯದವರು ಬುದ್ಗಾಂ, ಅನಂತನಾಗ್ ಹಾಗೂ ಬಾರಾಮುಲ್ಲಾಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಂಡಿತ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.</p>.<p>ಸಮುದಾಯದವರನ್ನು ರಕ್ಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪುನರ್ವಸತಿ ಕಲ್ಪಿಸುತ್ತೇವೆ ಎಂಬುದು ಕೇವಲ ಗಿಮಿಕ್ ಅಷ್ಟೇ ಎಂದು ಪ್ರತಿಭಟನಾಕಾರರು ದೂರಿದ್ದಾರೆ.</p>.<p>‘ನಾವು ಹೋರಾಟ ನಡೆಸಲಿದ್ದೇವೆ. ಭಯೋತ್ಪಾದಕರು ಯುದ್ಧ ಸಾರಿದ್ದಾರೆ. ನಾವದನ್ನು ಕೊನೆಗೊಳಿಸಲಿದ್ದೇವೆ. ಸಾಮರಸ್ಯ ಮತ್ತು ಸಮನ್ವಯದ ನೀತಿ ವಿಫಲವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಸಮನ್ವಯ ಫ್ರಂಟ್ (ಜೆಕೆಆರ್ಎಫ್) ಅಧ್ಯಕ್ಷ ಸಂದೀಪ್ ಮಾವಾ ಹೇಳಿದ್ದಾರೆ.</p>.<p><a href="https://www.prajavani.net/india-news/kashmiri-pandit-employee-shot-dead-inside-tehsil-office-936175.html" target="_blank">ತಹಶೀಲ್ ಕಚೇರಿಯೊಳಗೆ ನುಗ್ಗಿ ಕಾಶ್ಮೀರಿ ಪಂಡಿತ್ ನೌಕರನ ಹತ್ಯೆ</a></p>.<p>ಕಣಿವೆಯಲ್ಲಿ ಮುಗ್ದ ಜನರ ಹತ್ಯೆ ಮಾಡುವವರ ವಿರುದ್ಧ ನಾವೆಲ್ಲ ಜತೆಯಾಗಿ ಹೋರಾಡಬೇಕು ಎಂದು ಅವರು ಮುಸ್ಲಿಮ್, ಸಿಖ್ ಹಾಗೂ ಇತರ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರೊಬ್ಬರನ್ನು ಉಗ್ರನೊಬ್ಬ ಗುರುವಾರ ಹತ್ಯೆ ಮಾಡಿರುವುದು ಆ ಸಮುದಾಯದವರಲ್ಲಿ ವ್ಯಾಪಕ ಆಕ್ರೋಶ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗಿದೆ.</p>.<p>ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ 35 ವರ್ಷ ವಯಸ್ಸಿನ ರಾಹುಲ್ ಭಟ್ ಎಂಬವರನ್ನು ಉಗ್ರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಕಾಶ್ಮೀರಿ ಪಂಡಿತ ಸಮುದಾಯದವರಿಗೆ ನೀಡಲಾಗಿರುವ ವಿಶೇಷ ಉದ್ಯೋಗ ಪ್ಯಾಕೇಜ್ನಡಿ ರಾಹುಲ್ ಭಟ್ ಉದ್ಯೋಗಕ್ಕೆ ಸೇರಿದ್ದರು.</p>.<p><a href="https://www.prajavani.net/india-news/sanjay-raut-on-recent-targeted-killing-of-kashmiri-pandit-rahul-bhat-let-us-not-keep-pointing-936393.html" itemprop="url">ಪಾಕ್ ಕಡೆ ಬೆರಳು ತೋರದೇ ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡುತ್ತೀರಿ? ರಾವುತ್ </a></p>.<p>ರಾಹುಲ್ ಭಟ್ ಹತ್ಯೆ ಬೆನ್ನಲ್ಲೇ ಸಮುದಾಯದವರು ಬುದ್ಗಾಂ, ಅನಂತನಾಗ್ ಹಾಗೂ ಬಾರಾಮುಲ್ಲಾಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಂಡಿತ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.</p>.<p>ಸಮುದಾಯದವರನ್ನು ರಕ್ಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪುನರ್ವಸತಿ ಕಲ್ಪಿಸುತ್ತೇವೆ ಎಂಬುದು ಕೇವಲ ಗಿಮಿಕ್ ಅಷ್ಟೇ ಎಂದು ಪ್ರತಿಭಟನಾಕಾರರು ದೂರಿದ್ದಾರೆ.</p>.<p>‘ನಾವು ಹೋರಾಟ ನಡೆಸಲಿದ್ದೇವೆ. ಭಯೋತ್ಪಾದಕರು ಯುದ್ಧ ಸಾರಿದ್ದಾರೆ. ನಾವದನ್ನು ಕೊನೆಗೊಳಿಸಲಿದ್ದೇವೆ. ಸಾಮರಸ್ಯ ಮತ್ತು ಸಮನ್ವಯದ ನೀತಿ ವಿಫಲವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಸಮನ್ವಯ ಫ್ರಂಟ್ (ಜೆಕೆಆರ್ಎಫ್) ಅಧ್ಯಕ್ಷ ಸಂದೀಪ್ ಮಾವಾ ಹೇಳಿದ್ದಾರೆ.</p>.<p><a href="https://www.prajavani.net/india-news/kashmiri-pandit-employee-shot-dead-inside-tehsil-office-936175.html" target="_blank">ತಹಶೀಲ್ ಕಚೇರಿಯೊಳಗೆ ನುಗ್ಗಿ ಕಾಶ್ಮೀರಿ ಪಂಡಿತ್ ನೌಕರನ ಹತ್ಯೆ</a></p>.<p>ಕಣಿವೆಯಲ್ಲಿ ಮುಗ್ದ ಜನರ ಹತ್ಯೆ ಮಾಡುವವರ ವಿರುದ್ಧ ನಾವೆಲ್ಲ ಜತೆಯಾಗಿ ಹೋರಾಡಬೇಕು ಎಂದು ಅವರು ಮುಸ್ಲಿಮ್, ಸಿಖ್ ಹಾಗೂ ಇತರ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>