<p><strong>ರಜೌರಿ:</strong> ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತನಮಂಡಿ ಪ್ರದೇಶದ ಡರ್ರಾ ಬಾರಚಾರ ಗ್ರಾಮದಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ್ದಾರೆ. ಅಡಗುತಾಣದಿಂದ 10 ಗ್ರೆನೇಡ್ ಲಾಂಚರ್ಗಳನ್ನು ವಶಕ್ಕೆ ಪಡೆಯಲಾಗಿದೆ. </p>.<p>ಘಟನೆಗೆ ಸಂಬಂಧಿಸಿದಂತೆ ಯಾರವನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಸಭಾಂಗಣಕ್ಕೆ ರಾಜ್ ಕುಮಾರ್ ಥಾಪಾ ಹೆಸರು: </strong>ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾಗಿರುವ ಜಮ್ಮು–ಕಾಶ್ಮೀರದ ಆಡಳಿತ ಸೇವಾ (ಜೆಕೆಎಎಸ್) ಅಧಿಕಾರಿ ರಾಜ್ ಕುಮಾರ್ ಥಾಪಾ ಹೆಸರನ್ನು ಇಲ್ಲಿನ ಡಾಕ್ ಬಂಗ್ಲೆ ಸಭಾಂಗಣಕ್ಕೆ ಇಡುವ ಮೂಲಕ ರಜೌರಿ ಜಿಲ್ಲಾಡಳಿತವು ಜನಾನುರಾಗಿಯಾಗಿದ್ದ ಅಧಿಕಾರಿಗೆ ನಮನ ಸಲ್ಲಿಸಿದೆ. </p>.<p>ಎಂಬಿಬಿಎಸ್ ಪದವೀಧರರಾಗಿದ್ದ ಥಾಪಾ (54), 2001ರಲ್ಲಿ ಜೆಕೆಎಎಸ್ಗೆ ಸೇರ್ಪಡೆಗೊಂಡು, ಕಳೆದ ವರ್ಷ ರಜೌರಿ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಮೇ 10ರಂದು ತಮ್ಮ ಗೃಹ ಕಚೇರಿಯ ಮೇಲೆ ನಡೆದ ಶೆಲ್ ದಾಳಿಯಲ್ಲಿ ಅವರು ಮೃತಪಟ್ಟಿದ್ದರು. </p>.<p>ಜಿಲ್ಲಾಡಳಿತದ ವತಿಯಿಂದ ರಾಜ್ ಕುಮಾರ್ ಥಾಪಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಜೌರಿ ಜಿಲ್ಲಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಸೀಮ್ ಲಿಖಾತ್, ಜಿಲ್ಲಾಧಿಕಾರಿ ಅಭಿಷೇಕ್ ಶರ್ಮಾ, ಜಿಲ್ಲಾಡಳಿತದ ಅಧಿಕಾರಿಗಳು, ರಾಜ್ ಕುಮಾರ್ ಥಾಪಾ ಅವರ ಕುಟುಂಬ ಸದಸ್ಯರು ಇದ್ದರು. </p>.<p>ಸಭೆಗೂ ಮುನ್ನ ರಾಜ್ ಕುಮಾರ್ ಥಾಪಾ ಅವರು ಕೊನೆಯ ಕ್ಷಣಗಳನ್ನು ಕಳೆದಿದ್ದ ಅವರ ಗೃಹ ಕಚೇರಿಗೆ ಕುಟುಂಬ ಸದಸ್ಯರು ಭೇಟಿ ನೀಡಿದರು. ಅವರ ಸ್ಮರಣಾರ್ಥ ಕಚೇರಿ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಜೌರಿ:</strong> ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತನಮಂಡಿ ಪ್ರದೇಶದ ಡರ್ರಾ ಬಾರಚಾರ ಗ್ರಾಮದಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ್ದಾರೆ. ಅಡಗುತಾಣದಿಂದ 10 ಗ್ರೆನೇಡ್ ಲಾಂಚರ್ಗಳನ್ನು ವಶಕ್ಕೆ ಪಡೆಯಲಾಗಿದೆ. </p>.<p>ಘಟನೆಗೆ ಸಂಬಂಧಿಸಿದಂತೆ ಯಾರವನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಸಭಾಂಗಣಕ್ಕೆ ರಾಜ್ ಕುಮಾರ್ ಥಾಪಾ ಹೆಸರು: </strong>ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾಗಿರುವ ಜಮ್ಮು–ಕಾಶ್ಮೀರದ ಆಡಳಿತ ಸೇವಾ (ಜೆಕೆಎಎಸ್) ಅಧಿಕಾರಿ ರಾಜ್ ಕುಮಾರ್ ಥಾಪಾ ಹೆಸರನ್ನು ಇಲ್ಲಿನ ಡಾಕ್ ಬಂಗ್ಲೆ ಸಭಾಂಗಣಕ್ಕೆ ಇಡುವ ಮೂಲಕ ರಜೌರಿ ಜಿಲ್ಲಾಡಳಿತವು ಜನಾನುರಾಗಿಯಾಗಿದ್ದ ಅಧಿಕಾರಿಗೆ ನಮನ ಸಲ್ಲಿಸಿದೆ. </p>.<p>ಎಂಬಿಬಿಎಸ್ ಪದವೀಧರರಾಗಿದ್ದ ಥಾಪಾ (54), 2001ರಲ್ಲಿ ಜೆಕೆಎಎಸ್ಗೆ ಸೇರ್ಪಡೆಗೊಂಡು, ಕಳೆದ ವರ್ಷ ರಜೌರಿ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಮೇ 10ರಂದು ತಮ್ಮ ಗೃಹ ಕಚೇರಿಯ ಮೇಲೆ ನಡೆದ ಶೆಲ್ ದಾಳಿಯಲ್ಲಿ ಅವರು ಮೃತಪಟ್ಟಿದ್ದರು. </p>.<p>ಜಿಲ್ಲಾಡಳಿತದ ವತಿಯಿಂದ ರಾಜ್ ಕುಮಾರ್ ಥಾಪಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಜೌರಿ ಜಿಲ್ಲಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಸೀಮ್ ಲಿಖಾತ್, ಜಿಲ್ಲಾಧಿಕಾರಿ ಅಭಿಷೇಕ್ ಶರ್ಮಾ, ಜಿಲ್ಲಾಡಳಿತದ ಅಧಿಕಾರಿಗಳು, ರಾಜ್ ಕುಮಾರ್ ಥಾಪಾ ಅವರ ಕುಟುಂಬ ಸದಸ್ಯರು ಇದ್ದರು. </p>.<p>ಸಭೆಗೂ ಮುನ್ನ ರಾಜ್ ಕುಮಾರ್ ಥಾಪಾ ಅವರು ಕೊನೆಯ ಕ್ಷಣಗಳನ್ನು ಕಳೆದಿದ್ದ ಅವರ ಗೃಹ ಕಚೇರಿಗೆ ಕುಟುಂಬ ಸದಸ್ಯರು ಭೇಟಿ ನೀಡಿದರು. ಅವರ ಸ್ಮರಣಾರ್ಥ ಕಚೇರಿ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>