ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವುದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಜನರು ಗುಂಪು ಸೇರುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೂ ವಿಮಾನ ನಿಲ್ದಾಣ ಹೆಸರಿನಲ್ಲಿ ನಡೆದ ಸಮಾವೇಶವೂ ಸೇರಿ ಹಲವು ಸಮಾವೇಶಗಳು ನಡೆಯಲು ಸರ್ಕಾರ ಹೇಗೆ ಅನುವು ಮಾಡಿದೆ. ಮುಂದಿನ ದಿನಗಳಲ್ಲಿ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಡೆವ ಇಂತಹ ರಾಜಕೀಯ ರ್ಯಾಲಿಗಳನ್ನು ತಡೆಯಲು ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ರೀತಿಯ ಆಡಳಿತ ವ್ಯವಸ್ಥೆಯನ್ನು ಜಾರಿತರಲು ಆಗದಿದ್ದರೆ, ಕೋರ್ಟ್ ಮಧ್ಯಪ್ರವೇಶಿಸಿ ಅಂತಹ ರ್ಯಾಲಿಗಳನ್ನು ತಡೆಯಲಿದೆ. ನಮಗೆ ಪೂರ್ಣಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಆಗತ್ತಿಲ್ಲ. ಅಂತಹದರಲ್ಲಿ ರಾಜಕೀಯ ಮುಖಂಡರು ರ್ಯಾಲಿಗಳನ್ನು ಹೇಗೆ ನಡೆಸುತ್ತಾರೆ ಎಂದು ಕೋರ್ಟ್, ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಆಶುತೋಷ್ ಕುಂಭಕೋಣಿ ಅವರನ್ನು ಪ್ರಶ್ನಿಸಿದೆ.