<p class="title"><strong>ಪುಣೆ (ಪಿಟಿಐ):</strong> ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುತ್ತಿರುವವರಿಗೆ ಭಾರತದ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಗೊತ್ತಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿ ಕಾರಿದರು.</p>.<p class="title">ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪವಾರ್ ಮಾತನಾಡಿದರು. ‘ಅಲ್ಪಸಂಖ್ಯಾತ ಸಮುದಾಯದ ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯವನ್ನು ಹೇಳುವಂತೆಯೇ ಇಲ್ಲ. ಆ ಅಭಿಪ್ರಾಯ ಕೆಲವರಿಗೆ ಹಿಡಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಜೀವಿಸಲು ಆತನಿಗೆ ಹಕ್ಕಿಲ್ಲ ಎಂದು ಆ ಕೆಲವರು ಪ್ರತಿಪಾದಿಸುತ್ತಾರೆ, ಪಾಕಿಸ್ತಾನಕ್ಕೆ ಹೋಗುವಂತೆ ಒತ್ತಾಯಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p class="title">‘ಪಾಕಿಸ್ತಾನ ಅಂದರೆ ಏನು? ದೇಶ ವಿಭಜನೆಗೂ ಮುನ್ನ ಅದು ಭಾರತದ್ದೇ ಭಾಗವಾಗಿತ್ತು, ಪಾಕಿಸ್ತಾನದಲ್ಲಿ ನೆಲೆಸಿರುವವರು ಭಾರತೀಯರೇ ಆಗಿದ್ದರು. ದೇಶ ವಿಭಜನೆ ಸಂದರ್ಭದಲ್ಲಿ ಕೋಟ್ಯಂತರ ಮಂದಿ ಈ ಕಡೆಯಿಂದ ಆ ಕಡೆಗೆ ಹೋಗಿದ್ದಾರೆ, ಆ ಕಡೆಯಿಂದ ಈ ಕಡೆಗೆ ಬಂದಿದ್ದಾರೆ. ಎರಡೂ ದೇಶದ ಜನರ ಮಧ್ಯೆ ಸಂಘರ್ಷ ಇಲ್ಲ. ಆದರೆ, ‘ಪಾಕಿಸ್ತಾನಕ್ಕೆ ಹೋಗಿ– ಪಾಕಿಸ್ತಾನಕ್ಕೆ ಹೋಗಿ’ ಎಂದು ಬಡಬಡಿಸುತ್ತಿರುವವರಿಗೆ ಎರಡೂ ದೇಶಗಳ ಬಗ್ಗೆ ಕಿಂಚಿತ್ ಜ್ಞಾನವೂ ಇಲ್ಲ’ ಎಂದು ಅವರು ಹರಿಹಾಯ್ದರು.</p>.<p class="title">‘ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿದ್ದಾಗ ನಾನು ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೇನೆ. ಅಲ್ಲಿನ ಜನಸಾಮಾನ್ಯರನ್ನು ಭೇಟಿ ಮಾಡಿದ್ದೇನೆ. ಭಾರತ ಮತ್ತು ಭಾರತೀಯರ ಮಧ್ಯೆ ಆ ಜನಕ್ಕೆ ಬಹಳ ಪ್ರೀತಿಯಿದೆ. ಭಾರತದಲ್ಲಿ ಸಂಬಂಧಿಕರನ್ನು ಹೊಂದಿರುವ ಬಹಳ ಮಂದಿ ಪಾಕಿಸ್ತಾನದಲ್ಲಿದ್ದಾರೆ. ಎರಡೂ ದೇಶಗಳ ಮಧ್ಯೆ ಸಂಘರ್ಷ ಇರುವ ಕಾರಣಕ್ಕೆ ಅವರು ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಪವಾರ್ ವಿವರಿಸಿದರು.</p>.<p class="Subhead">ಜಾರಿಯಲ್ಲಿರುವ ಮೀಸಲಾತಿ ಬದಲಿಸಬೇಡಿ:‘ಮರಾಠ ಜನರಿಗೆ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ, ಈಗ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣವನ್ನು ಬದಲಿಸಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪುಣೆ (ಪಿಟಿಐ):</strong> ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುತ್ತಿರುವವರಿಗೆ ಭಾರತದ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಗೊತ್ತಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿ ಕಾರಿದರು.</p>.<p class="title">ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪವಾರ್ ಮಾತನಾಡಿದರು. ‘ಅಲ್ಪಸಂಖ್ಯಾತ ಸಮುದಾಯದ ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯವನ್ನು ಹೇಳುವಂತೆಯೇ ಇಲ್ಲ. ಆ ಅಭಿಪ್ರಾಯ ಕೆಲವರಿಗೆ ಹಿಡಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಜೀವಿಸಲು ಆತನಿಗೆ ಹಕ್ಕಿಲ್ಲ ಎಂದು ಆ ಕೆಲವರು ಪ್ರತಿಪಾದಿಸುತ್ತಾರೆ, ಪಾಕಿಸ್ತಾನಕ್ಕೆ ಹೋಗುವಂತೆ ಒತ್ತಾಯಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>.<p class="title">‘ಪಾಕಿಸ್ತಾನ ಅಂದರೆ ಏನು? ದೇಶ ವಿಭಜನೆಗೂ ಮುನ್ನ ಅದು ಭಾರತದ್ದೇ ಭಾಗವಾಗಿತ್ತು, ಪಾಕಿಸ್ತಾನದಲ್ಲಿ ನೆಲೆಸಿರುವವರು ಭಾರತೀಯರೇ ಆಗಿದ್ದರು. ದೇಶ ವಿಭಜನೆ ಸಂದರ್ಭದಲ್ಲಿ ಕೋಟ್ಯಂತರ ಮಂದಿ ಈ ಕಡೆಯಿಂದ ಆ ಕಡೆಗೆ ಹೋಗಿದ್ದಾರೆ, ಆ ಕಡೆಯಿಂದ ಈ ಕಡೆಗೆ ಬಂದಿದ್ದಾರೆ. ಎರಡೂ ದೇಶದ ಜನರ ಮಧ್ಯೆ ಸಂಘರ್ಷ ಇಲ್ಲ. ಆದರೆ, ‘ಪಾಕಿಸ್ತಾನಕ್ಕೆ ಹೋಗಿ– ಪಾಕಿಸ್ತಾನಕ್ಕೆ ಹೋಗಿ’ ಎಂದು ಬಡಬಡಿಸುತ್ತಿರುವವರಿಗೆ ಎರಡೂ ದೇಶಗಳ ಬಗ್ಗೆ ಕಿಂಚಿತ್ ಜ್ಞಾನವೂ ಇಲ್ಲ’ ಎಂದು ಅವರು ಹರಿಹಾಯ್ದರು.</p>.<p class="title">‘ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿದ್ದಾಗ ನಾನು ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೇನೆ. ಅಲ್ಲಿನ ಜನಸಾಮಾನ್ಯರನ್ನು ಭೇಟಿ ಮಾಡಿದ್ದೇನೆ. ಭಾರತ ಮತ್ತು ಭಾರತೀಯರ ಮಧ್ಯೆ ಆ ಜನಕ್ಕೆ ಬಹಳ ಪ್ರೀತಿಯಿದೆ. ಭಾರತದಲ್ಲಿ ಸಂಬಂಧಿಕರನ್ನು ಹೊಂದಿರುವ ಬಹಳ ಮಂದಿ ಪಾಕಿಸ್ತಾನದಲ್ಲಿದ್ದಾರೆ. ಎರಡೂ ದೇಶಗಳ ಮಧ್ಯೆ ಸಂಘರ್ಷ ಇರುವ ಕಾರಣಕ್ಕೆ ಅವರು ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಪವಾರ್ ವಿವರಿಸಿದರು.</p>.<p class="Subhead">ಜಾರಿಯಲ್ಲಿರುವ ಮೀಸಲಾತಿ ಬದಲಿಸಬೇಡಿ:‘ಮರಾಠ ಜನರಿಗೆ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ, ಈಗ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣವನ್ನು ಬದಲಿಸಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>