ಶ್ರೀನಗರ : ಪ್ರತಿಕೂಲ ಹವಾಮಾನದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮೂರು ದಿನಗಳ ಬಳಿಕ ಇಲ್ಲಿಯ ಪಂಚತರಣಿ ಮತ್ತು ಶೇಶನಾಗ್ ಕ್ಯಾಂಪ್ನಿಂದ ಭಾನುವಾರ ಪುನರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಹಾದೇಗುಲದ ಸುತ್ತಮುತ್ತ ಆಕಾಶ ತಿಳಿಯಾಗುತ್ತಿದ್ದಂತೆ ಅಧಿಕಾರಿಗಳು ದ್ವಾರಗಳನ್ನು ತೆರೆದು, ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ದರ್ಶನ ಪಡೆದ ಭಕ್ತಾದಿಗಳಿಗೆ ಬಾಲಟಾಲ್ ಕ್ಯಾಂಪ್ಗೆ ಮರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಪಂಚತರಣಿ ಕ್ಯಾಂಪ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದ 700ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಸೇನೆಯು ಅನಂತ್ನಾಗ್ ಜಿಲ್ಲೆಯಲ್ಲಿ ಕ್ಯಾಂಪ್ಗಳನ್ನು ನಿರ್ಮಿಸಿ ವಸತಿ ಒದಗಿಸಿದೆ.