<p><strong>ತಿರುಪತಿ:</strong> ತಿರುಮಲ ತಿರುಪತಿ ದೇವಸ್ಥಾನಮ್ಸ್ನ (ಟಿಟಿಡಿ) ‘ಶ್ರೀ ಬಾಲಾಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ’ಗೆ ಬೆಂಗಳೂರು ಮೂಲದ ಭಕ್ತರೊಬ್ಬರು ಒಂದು ಕೋಟಿಗೂ ಅಧಿಕ ರೂಪಾಯಿ ದಾನ ಮಾಡಿದದಾರೆ.</p><p>ತಿರುಮಲದಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಅವರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದೇಣಿಗೆ ಹಸ್ತಾಂತರಿಸಿದ್ದಾರೆ.</p>.ತಿರುಪತಿಗೆ ₹1 ಕೋಟಿ ದೇಣಿಗೆ ನೀಡಿದ ಬೆಂಗಳೂರಿನ ಉದ್ಯಮಿ .<p>‘ಬೆಂಗಳೂರಿನ ಅನಾಮಿಕ ದಾನಿಯೊಬ್ಬರು ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆಗೆ ₹ 1,00,50,000 (ಒಂದು ಕೋಟಿ ಐವತ್ತು ಸಾವಿರ) ದೇಣಿಗೆ ನೀಡಿದ್ದಾರೆ’ ಎಂದು ಟಿಟಿಡಿ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p><p>ಟಿಟಿಡಿ ಆಡಳಿತದ ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಡಿ (ಎಸ್ವಿಐಎಂಎಸ್) ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ ಇದ್ದು, ಬಡವರು ಮತ್ತು ಅಂಗವಿಕಲರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ಒದಗಿಸುವ ಉದ್ದೇಶ ಹೊಂದಿದೆ.</p>.ತಿರುಪತಿ ದೇವಸ್ಥಾನಕ್ಕೆ ₹6 ಕೋಟಿ ದೇಣಿಗೆ ನೀಡಿದ ಚೆನ್ನೈ ಮೂಲದ ಭಕ್ತ.<p>ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇಗುಲ ತಿರುಪತಿಯ ಶ್ರೀ ವೆಂಕಟೇಶ್ವರ ದೇಗುಲದ ಮೇಲುಸ್ತುವಾರಿಯನ್ನು ಟಿಟಿಡಿ ನೋಡಿಕೊಳ್ಳುತ್ತಿದೆ.</p> .ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ₹1.11 ಕೋಟಿ ದೇಣಿಗೆ ನೀಡಿದ ಶಿಕ್ಷಣ ಸಂಸ್ಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ:</strong> ತಿರುಮಲ ತಿರುಪತಿ ದೇವಸ್ಥಾನಮ್ಸ್ನ (ಟಿಟಿಡಿ) ‘ಶ್ರೀ ಬಾಲಾಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ’ಗೆ ಬೆಂಗಳೂರು ಮೂಲದ ಭಕ್ತರೊಬ್ಬರು ಒಂದು ಕೋಟಿಗೂ ಅಧಿಕ ರೂಪಾಯಿ ದಾನ ಮಾಡಿದದಾರೆ.</p><p>ತಿರುಮಲದಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಅವರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದೇಣಿಗೆ ಹಸ್ತಾಂತರಿಸಿದ್ದಾರೆ.</p>.ತಿರುಪತಿಗೆ ₹1 ಕೋಟಿ ದೇಣಿಗೆ ನೀಡಿದ ಬೆಂಗಳೂರಿನ ಉದ್ಯಮಿ .<p>‘ಬೆಂಗಳೂರಿನ ಅನಾಮಿಕ ದಾನಿಯೊಬ್ಬರು ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆಗೆ ₹ 1,00,50,000 (ಒಂದು ಕೋಟಿ ಐವತ್ತು ಸಾವಿರ) ದೇಣಿಗೆ ನೀಡಿದ್ದಾರೆ’ ಎಂದು ಟಿಟಿಡಿ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p><p>ಟಿಟಿಡಿ ಆಡಳಿತದ ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಡಿ (ಎಸ್ವಿಐಎಂಎಸ್) ಶ್ರೀ ಬಾಲಜಿ ಆರೋಗ್ಯ ವರಪ್ರಸನ್ನಿಧಿ ಯೋಜನೆ ಇದ್ದು, ಬಡವರು ಮತ್ತು ಅಂಗವಿಕಲರಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳು ಒದಗಿಸುವ ಉದ್ದೇಶ ಹೊಂದಿದೆ.</p>.ತಿರುಪತಿ ದೇವಸ್ಥಾನಕ್ಕೆ ₹6 ಕೋಟಿ ದೇಣಿಗೆ ನೀಡಿದ ಚೆನ್ನೈ ಮೂಲದ ಭಕ್ತ.<p>ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇಗುಲ ತಿರುಪತಿಯ ಶ್ರೀ ವೆಂಕಟೇಶ್ವರ ದೇಗುಲದ ಮೇಲುಸ್ತುವಾರಿಯನ್ನು ಟಿಟಿಡಿ ನೋಡಿಕೊಳ್ಳುತ್ತಿದೆ.</p> .ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ₹1.11 ಕೋಟಿ ದೇಣಿಗೆ ನೀಡಿದ ಶಿಕ್ಷಣ ಸಂಸ್ಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>