ಅಧಿಕಾರಿ ಅವರ ಆಪ್ತ ಮೂಲಗಳ ಪ್ರಕಾರ ಅವರು ಪಕ್ಷದ ವರಿಷ್ಠರ ವಿಚಾರದಲ್ಲಿ ಅಸಮಾದಾನ ಹೊಂದಿದ್ದಾರೆ ಎನ್ನಲಾಗಿದೆ. ಪಕ್ಷದ ಬಾವುಟವಿಲ್ಲದೆ, ಬೆಂಬಲಿಗರ ಸಮಾವೇಶ, ರ್ಯಾಲಿಗಳನ್ನು ಆಯೋಜಿಸಿದ್ದ ಸುವೇಂದು ಅಧಿಕಾರಿ ಅವರ ಮನವೊಲಿಸಲು ಪಕ್ಷವೂ ಪ್ರಯತ್ನ ನಡೆಸಿತ್ತು. ಸಂಸದರಾದ ಸೌಗತ ರಾಯ್, ಸುದೀಪ್ ಬಂಡೋಪಧ್ಯಾಯ ಅವರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ, ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ.