ಸಿಬಿಐಗೆ ಕಲಾಲ್ ದೂರು
ನವದೆಹಲಿ: ಸಂದೇಶ್ಖಾಲಿ ಕುರಿತು ತಾನು ಮಾತನಾಡಿರುವುದು ಎನ್ನಲಾದ ವಿಡಿಯೊ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಕಯಾಲ್ ಅವರು ಸಿಬಿಐಗೆ ದೂರು ನೀಡಿದ್ದಾರೆ.
‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ದೃಢಪಡಿಸದ ಯೂಟ್ಯೂಬ್ ಚಾನೆಲ್ವೊಂದರಿಂದ ಅಪ್ಲೋಡ್ ಮಾಡಲಾಗಿದೆ. ವಿಲಿಯನ್ಸ್ ಎಂಬ ವ್ಯಕ್ತಿ ವಿಡಿಯೊ ಅಪ್ಲೋಡ್ ಮಾಡಿದ್ದಾರೆ’ ಎಂದು ಸಿಬಿಐಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
‘ಜನರನ್ನು ದಾರಿತಪ್ಪಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ನನ್ನ ಮುಖ ಹಾಗೂ ಧ್ವನಿ ಹೋಲುವಂತೆ ಮಾಡಲಾಗಿದೆ’ ಎಂದು ಕಯಾಲ್ ದೂರಿನಲ್ಲಿ ತಿಳಿಸಿದ್ದಾರೆ.