<p><strong>ಮುಜಾಫರನಗರ:</strong> ದೆಹಲಿ–ಸಹರಾನ್ಪುರ ರೈಲು ಮಾರ್ಗದಲ್ಲಿ 10 ಅಡಿ ಉದ್ದದ ಕಬ್ಬಿಣದ ಪೈಪ್ ಪತ್ತೆಯಾಗಿದ್ದು, ಲೋಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಬಹುದೊಡ್ಡ ಅವಘಡವೊಂದು ತಪ್ಪಿದೆ. ಶಮ್ಲಿ ಜಿಲ್ಲೆಯ ಬಲ್ವಾ ಗ್ರಾಮದಲ್ಲಿ ಹಾದುಹೋಗಿರುವ ಪಟ್ಟಿಯ ಮೇಲೆ ಈ ಪೈಪ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ರೈಲು ಅಪಘಾತ: ಮೃತನ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ.<p>ಶನಿವಾರ ರಾತ್ರಿ ಘಟನೆ ನಡೆದಿದ್ದು, ಸಹರಾನ್ಪುರ–ದೆಹಲಿ ಪ್ರಯಾಣಿಕ ರೈಲಿನ ಲೋಕೊ ಪೈಲಟ್ ಹಳಿಯಲ್ಲಿ ಕಬ್ಬಿಣದ ಪೈಪ್ ಕಂಡ ಕೂಡಲೇ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಠಾಣಾಧಿಕಾರಿ ಚಂದರ್ವೀರ್ ಮಾಹಿತಿ ನೀಡಿದ್ದಾರೆ.</p><p>‘ಯಾರೋ ಕಿಡಿಗೇಡಿಗಳು ಭಾರಿ ಗ್ರಾತ್ರದ ಕಬ್ಬಿಣದ ಪೈಪ್ ಅನ್ನು ಹಳಿಯ ಮೇಲೆ ಇರಿಸಿದ್ದಾರೆ. ಲೋಕೊ ಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಬಹುದೊಡ್ಡ ಅನಾಹುತವೊಂದು ತಪ್ಪಿದೆ’ ಎಂದು ಅವರು ಹೇಳಿದ್ದಾರೆ.</p>.ರೈಲು ಟಿಕೆಟ್ ಮೇಲೆ ಯೋಧರಿಗೆ ನಮಿಸುವ ಪ್ರಧಾನಿ ಮೋದಿ ಚಿತ್ರ: ಕಾಂಗ್ರೆಸ್ ವಾಗ್ದಾಳಿ.<p>ಶಮ್ಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಮ್ಸೇವಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದ್ದು, ದುಷ್ಕರ್ಮಿಗಳ ಪತ್ತೆ ಬಲೆ ಬೀಸಲಾಗಿದೆ.</p><p>ಘಟನೆಯಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಕಬ್ಬಿಣದ ಪೈಪ್ ತೆಗೆದು, ಹಳಿಯನ್ನು ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರ ಪುನರಾಂಭಗೊಂಡಿದೆ.</p> .ರೈಲು ಹಳಿ ಪಕ್ಕ ಶವ ಪತ್ತೆ ಪ್ರಕರಣ: ಬಾಲಕಿ ಕುಟುಂಬಕ್ಕೆ ಕೊಟ್ಟಿದ್ದ ಪರಿಹಾರ ವಾಪಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಾಫರನಗರ:</strong> ದೆಹಲಿ–ಸಹರಾನ್ಪುರ ರೈಲು ಮಾರ್ಗದಲ್ಲಿ 10 ಅಡಿ ಉದ್ದದ ಕಬ್ಬಿಣದ ಪೈಪ್ ಪತ್ತೆಯಾಗಿದ್ದು, ಲೋಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಬಹುದೊಡ್ಡ ಅವಘಡವೊಂದು ತಪ್ಪಿದೆ. ಶಮ್ಲಿ ಜಿಲ್ಲೆಯ ಬಲ್ವಾ ಗ್ರಾಮದಲ್ಲಿ ಹಾದುಹೋಗಿರುವ ಪಟ್ಟಿಯ ಮೇಲೆ ಈ ಪೈಪ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ರೈಲು ಅಪಘಾತ: ಮೃತನ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ.<p>ಶನಿವಾರ ರಾತ್ರಿ ಘಟನೆ ನಡೆದಿದ್ದು, ಸಹರಾನ್ಪುರ–ದೆಹಲಿ ಪ್ರಯಾಣಿಕ ರೈಲಿನ ಲೋಕೊ ಪೈಲಟ್ ಹಳಿಯಲ್ಲಿ ಕಬ್ಬಿಣದ ಪೈಪ್ ಕಂಡ ಕೂಡಲೇ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಠಾಣಾಧಿಕಾರಿ ಚಂದರ್ವೀರ್ ಮಾಹಿತಿ ನೀಡಿದ್ದಾರೆ.</p><p>‘ಯಾರೋ ಕಿಡಿಗೇಡಿಗಳು ಭಾರಿ ಗ್ರಾತ್ರದ ಕಬ್ಬಿಣದ ಪೈಪ್ ಅನ್ನು ಹಳಿಯ ಮೇಲೆ ಇರಿಸಿದ್ದಾರೆ. ಲೋಕೊ ಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಬಹುದೊಡ್ಡ ಅನಾಹುತವೊಂದು ತಪ್ಪಿದೆ’ ಎಂದು ಅವರು ಹೇಳಿದ್ದಾರೆ.</p>.ರೈಲು ಟಿಕೆಟ್ ಮೇಲೆ ಯೋಧರಿಗೆ ನಮಿಸುವ ಪ್ರಧಾನಿ ಮೋದಿ ಚಿತ್ರ: ಕಾಂಗ್ರೆಸ್ ವಾಗ್ದಾಳಿ.<p>ಶಮ್ಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಮ್ಸೇವಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದ್ದು, ದುಷ್ಕರ್ಮಿಗಳ ಪತ್ತೆ ಬಲೆ ಬೀಸಲಾಗಿದೆ.</p><p>ಘಟನೆಯಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಕಬ್ಬಿಣದ ಪೈಪ್ ತೆಗೆದು, ಹಳಿಯನ್ನು ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರ ಪುನರಾಂಭಗೊಂಡಿದೆ.</p> .ರೈಲು ಹಳಿ ಪಕ್ಕ ಶವ ಪತ್ತೆ ಪ್ರಕರಣ: ಬಾಲಕಿ ಕುಟುಂಬಕ್ಕೆ ಕೊಟ್ಟಿದ್ದ ಪರಿಹಾರ ವಾಪಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>