<p><strong>ವಾಷಿಂಗ್ಟನ್: </strong>‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ‘ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ಹೋಗುತ್ತೇನೆ, ಅಲ್ಲೇ ಹೋರಾಡುತ್ತೇನೆ‘ ಎಂದು ಹೇಳಿದ್ದಾರೆ.</p>.<p>ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ ಅವರು, ಯಾವುದೇ ಘಟನೆಗಳನ್ನು ಉಲ್ಲೇಖಿಸದೇ ಈ ಹೇಳಿಕೆ ನೀಡಿದ್ದಾರೆ. ‘ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ. ಕೋಟ್ಯಂತರ ಜನರು ನನಗೆ ಮತ ಹಾಕಿದ್ದಾರೆ‘ ಎಂದು ಹೇಳಿಕೊಂಡಿದ್ದಾರೆ.</p>.<p>’ನಾವು ಎಲ್ಲವುದನ್ನೂ ಗೆದ್ದಿದ್ದಾಗಿದೆ. ಹೀಗಾಗಿ ಬಹುದೊಡ್ಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದೆವು. ಆದರೆ ದಿಢೀರನೆ ಎಲ್ಲವನ್ನೂ ನಿಲ್ಲಿಸಬೇಕಾಯಿತು‘ ಎಂದು ಹೇಳಿದರು.</p>.<p>‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ. ಇದೊಂದು ದೊಡ್ಡ ವಂಚನೆ. ಇದರಿಂದ ನಮ್ಮ ಜನಕ್ಕೆ ಮುಜುಗರ ಉಂಟಾಗುತ್ತಿದೆ‘ ಎಂದು ಹೇಳಿದ ಟ್ರಂಪ್, ತಮ್ಮ ಹೇಳಿಕೆಗಳಿಗೆ ಸೂಕ್ತವಾದ ಕಾರಣ ಮತ್ತು ಘಟನೆಗಳನ್ನು ತಿಳಿಸಲಿಲ್ಲ.</p>.<p>‘ಎಲ್ಲ ರಾಜ್ಯಗಳಲ್ಲಿ ಮತದಾನದ ಕೆಲಸ ಮುಗಿದ ನಂತರ, ನಾನು ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ. ಅಲ್ಲಿ ಚುನಾವಣೆ ಕುರಿತು ಹೋರಾಟ ಮಾಡುತ್ತೇನೆ‘ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ‘ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ಹೋಗುತ್ತೇನೆ, ಅಲ್ಲೇ ಹೋರಾಡುತ್ತೇನೆ‘ ಎಂದು ಹೇಳಿದ್ದಾರೆ.</p>.<p>ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ ಅವರು, ಯಾವುದೇ ಘಟನೆಗಳನ್ನು ಉಲ್ಲೇಖಿಸದೇ ಈ ಹೇಳಿಕೆ ನೀಡಿದ್ದಾರೆ. ‘ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ. ಕೋಟ್ಯಂತರ ಜನರು ನನಗೆ ಮತ ಹಾಕಿದ್ದಾರೆ‘ ಎಂದು ಹೇಳಿಕೊಂಡಿದ್ದಾರೆ.</p>.<p>’ನಾವು ಎಲ್ಲವುದನ್ನೂ ಗೆದ್ದಿದ್ದಾಗಿದೆ. ಹೀಗಾಗಿ ಬಹುದೊಡ್ಡ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದೆವು. ಆದರೆ ದಿಢೀರನೆ ಎಲ್ಲವನ್ನೂ ನಿಲ್ಲಿಸಬೇಕಾಯಿತು‘ ಎಂದು ಹೇಳಿದರು.</p>.<p>‘ಅಮೆರಿಕದ ಜನರನ್ನು ವಂಚಿಸಲಾಗುತ್ತಿದೆ. ಇದೊಂದು ದೊಡ್ಡ ವಂಚನೆ. ಇದರಿಂದ ನಮ್ಮ ಜನಕ್ಕೆ ಮುಜುಗರ ಉಂಟಾಗುತ್ತಿದೆ‘ ಎಂದು ಹೇಳಿದ ಟ್ರಂಪ್, ತಮ್ಮ ಹೇಳಿಕೆಗಳಿಗೆ ಸೂಕ್ತವಾದ ಕಾರಣ ಮತ್ತು ಘಟನೆಗಳನ್ನು ತಿಳಿಸಲಿಲ್ಲ.</p>.<p>‘ಎಲ್ಲ ರಾಜ್ಯಗಳಲ್ಲಿ ಮತದಾನದ ಕೆಲಸ ಮುಗಿದ ನಂತರ, ನಾನು ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ. ಅಲ್ಲಿ ಚುನಾವಣೆ ಕುರಿತು ಹೋರಾಟ ಮಾಡುತ್ತೇನೆ‘ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>