<p><strong>ತಿರುಪತಿ:</strong> ‘ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಡೆತನದ ₹1,500 ಕೋಟಿ ಮೌಲ್ಯದ ಭೂಮಿಯನ್ನು ಒಬಿರಾಯ್ ಹೋಟೆಲ್ಸ್ಗೆ ಹಸ್ತಾಂತರಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪಿತೂರಿ ರೂಪಿಸಿದ್ದಾರೆ’ ಎಂದು ವೈಎಸ್ಆರ್ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ. </p>.<p>‘ಒಬಿರಾಯ್ ಹೋಟೆಲ್ಸ್ನ ಪ್ರಸ್ತಾವವನ್ನು ಈ ಹಿಂದೆ ತಿರಸ್ಕರಿಸಿದ್ದ ನಾಯ್ಡು, ಈಗ ಕಡಿಮೆ ಮೌಲ್ಯದ ಗ್ರಾಮೀಣ ಭೂಮಿಯನ್ನು ಪಡೆಯಲು ಪರ್ಯಾಯವಾಗಿ ಟಿಟಿಡಿಯ 20 ಎಕರೆ ಭೂಮಿಯನ್ನು ಒಬೆರಾಯ್ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ. ಇದರಿಂದ ₹1000 ಕೋಟಿ ನಷ್ಟವಾಗಲಿದೆ. ಪರ್ಯಾಯ ಭೂಮಿಯ ಸೋಗಿನಲ್ಲಿ ನಡೆಯುತ್ತಿರುವ ಈ ಪಿತೂರಿಗೆ ನಾಯ್ಡು ಅವರೇ ರೂವಾರಿ’ ಎಂದೂ ರೆಡ್ಡಿ ದೂರಿದ್ದಾರೆ. </p>.<p class="title">ಅಲ್ಲದೇ, ಟಿಡಿಪಿ ಸರ್ಕಾರವು ದೇವಾಲಯದ ಭೂಮಿಯನ್ನು ‘ಇನಾಂ ಭೂಮಿ’ ಎಂದು ಪರಿಗಣಿಸುವಂತೆ ಮಾಡಲು ಉದ್ದೇಶಪೂರ್ವಕವಾಗಿ ಅವುಗಳ ಮೌಲ್ಯಮಾಪನವನ್ನು ಕೈಬಿಟ್ಟಿದೆ. ಯೋಜನೆಗಳಿಗೆ ಸೂಕ್ತವಾಗುವಂತೆ ಹಲವು ಸಾರ್ವಜನಿಕ ಭೂಮಿ ಲಭ್ಯವಿದ್ದರೂ ದೇವಾಲಯದ ಭೂಮಿಗಳನ್ನೇ ಸರ್ಕಾರ ಏಕೆ ಆಯ್ಕೆ ಮಾಡುತ್ತಿದೆ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.</p>.<p>ಜತೆಗೆ ಇದು ಹಗಲು ದರೋಡೆ, ಪ್ರವಾಸೋದ್ಯಮದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ನಡೆಸಲಾಗುತ್ತಿರುವ ದಾಳಿ ಎಂದಿರುವ ಅವರು, ಸರ್ಕಾರ ತನ್ನ ಆದೇಶವನ್ನು ಹಿಂಪಡೆವಂತೆ ಭಕ್ತರು ಆಗ್ರಹಿಸಬೇಕು ಎಂದು ಕರೆ ನೀಡಿದ್ದಾರೆ.</p>.ತಿರುಪತಿ ದೇವಸ್ಥಾನಂ | ಹಿಂದೂಗಳಲ್ಲದ ನಾಲ್ವರು ನೌಕರರ ಅಮಾನತು ಮಾಡಿದ ಟಿಟಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ:</strong> ‘ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಡೆತನದ ₹1,500 ಕೋಟಿ ಮೌಲ್ಯದ ಭೂಮಿಯನ್ನು ಒಬಿರಾಯ್ ಹೋಟೆಲ್ಸ್ಗೆ ಹಸ್ತಾಂತರಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪಿತೂರಿ ರೂಪಿಸಿದ್ದಾರೆ’ ಎಂದು ವೈಎಸ್ಆರ್ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ. </p>.<p>‘ಒಬಿರಾಯ್ ಹೋಟೆಲ್ಸ್ನ ಪ್ರಸ್ತಾವವನ್ನು ಈ ಹಿಂದೆ ತಿರಸ್ಕರಿಸಿದ್ದ ನಾಯ್ಡು, ಈಗ ಕಡಿಮೆ ಮೌಲ್ಯದ ಗ್ರಾಮೀಣ ಭೂಮಿಯನ್ನು ಪಡೆಯಲು ಪರ್ಯಾಯವಾಗಿ ಟಿಟಿಡಿಯ 20 ಎಕರೆ ಭೂಮಿಯನ್ನು ಒಬೆರಾಯ್ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ. ಇದರಿಂದ ₹1000 ಕೋಟಿ ನಷ್ಟವಾಗಲಿದೆ. ಪರ್ಯಾಯ ಭೂಮಿಯ ಸೋಗಿನಲ್ಲಿ ನಡೆಯುತ್ತಿರುವ ಈ ಪಿತೂರಿಗೆ ನಾಯ್ಡು ಅವರೇ ರೂವಾರಿ’ ಎಂದೂ ರೆಡ್ಡಿ ದೂರಿದ್ದಾರೆ. </p>.<p class="title">ಅಲ್ಲದೇ, ಟಿಡಿಪಿ ಸರ್ಕಾರವು ದೇವಾಲಯದ ಭೂಮಿಯನ್ನು ‘ಇನಾಂ ಭೂಮಿ’ ಎಂದು ಪರಿಗಣಿಸುವಂತೆ ಮಾಡಲು ಉದ್ದೇಶಪೂರ್ವಕವಾಗಿ ಅವುಗಳ ಮೌಲ್ಯಮಾಪನವನ್ನು ಕೈಬಿಟ್ಟಿದೆ. ಯೋಜನೆಗಳಿಗೆ ಸೂಕ್ತವಾಗುವಂತೆ ಹಲವು ಸಾರ್ವಜನಿಕ ಭೂಮಿ ಲಭ್ಯವಿದ್ದರೂ ದೇವಾಲಯದ ಭೂಮಿಗಳನ್ನೇ ಸರ್ಕಾರ ಏಕೆ ಆಯ್ಕೆ ಮಾಡುತ್ತಿದೆ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.</p>.<p>ಜತೆಗೆ ಇದು ಹಗಲು ದರೋಡೆ, ಪ್ರವಾಸೋದ್ಯಮದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ನಡೆಸಲಾಗುತ್ತಿರುವ ದಾಳಿ ಎಂದಿರುವ ಅವರು, ಸರ್ಕಾರ ತನ್ನ ಆದೇಶವನ್ನು ಹಿಂಪಡೆವಂತೆ ಭಕ್ತರು ಆಗ್ರಹಿಸಬೇಕು ಎಂದು ಕರೆ ನೀಡಿದ್ದಾರೆ.</p>.ತಿರುಪತಿ ದೇವಸ್ಥಾನಂ | ಹಿಂದೂಗಳಲ್ಲದ ನಾಲ್ವರು ನೌಕರರ ಅಮಾನತು ಮಾಡಿದ ಟಿಟಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>