<p><strong>ತಿರುಪತಿ</strong>: ‘ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಒಬೆರಾಯ್ ಹೋಟೆಲ್ಸ್ಗೆ ಹಸ್ತಾಂತರಿಸಲು ಎನ್ಡಿಎ ದೊಡ್ಡ ಪಿತೂರಿ ನಡೆಸಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ’ ಎಂದು ವೈಎಸ್ಆರ್ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ. </p>.<p>‘ಸ್ಥಿರಾಸ್ತಿ ಮಾರ್ಗಸೂಚಿ ದರದ ಪ್ರಕಾರ ₹460ಕೋಟಿಗೂ ಹೆಚ್ಚಿನ ಬೆಲೆಬಾಳುವ, ಮುಕ್ತ ಮಾರುಕಟ್ಟೆಯಲ್ಲಿ ₹3 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯ ಇರುವ, ಅಲಿಪಿರಿ ಸಮೀಪದ ಸುಮಾರು 20 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಯ ₹18 ಕೋಟಿ ಮೌಲ್ಯದ ಜಮೀನಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಟಿಟಿಡಿಯ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಒಬೆರಾಯ್ ಹೋಟೆಲ್ಸ್ ವಶಕ್ಕೆ ಒಪ್ಪಿಸಲು ಎನ್ಡಿಎ ಯೋಜನೆ ರೂಪಿಸಿದೆ’ ಎಂದು ಕರುಣಾಕರ ರೆಡ್ಡಿ ದೂರಿದ್ದಾರೆ. </p>.<p>‘ಎನ್ಡಿಎ ಅತ್ಯಂತ ವ್ಯವಸ್ಥಿತವಾಗಿ ವೆಂಕಟೇಶ್ವರ ಸ್ವಾಮಿಯ ಜಮೀನು ಕೊಳ್ಳೆ ಹೊಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಜಮೀನು ವಿನಿಮಯವು ಪಾರದರ್ಶಕವಾಗಿ ನಡೆದಿಲ್ಲ. ಸದ್ದಿಲ್ಲದೆ ನೋಂದಣಿ ನಡೆದಿದೆ. ಒಟ್ಟಾರೆ ಪ್ರಕ್ರಿಯೆ ಅನುಮಾನ ಮೂಡಿಸುವಂತಿದೆ. ಈಗಾಗಲೇ ಒಬೆರಾಯ್ ಸಮೂಹಕ್ಕೆ ಕಟ್ಟಡ ನಿಧಿ ರೂಪದಲ್ಲಿ ₹2 ಕೋಟಿ ಮತ್ತು ಮುದ್ರಾಂಕ ಮತ್ತು ಇತರೆ ಶುಲ್ಕವಾಗಿ ₹26 ಕೊಟಿ ಮನ್ನಾ ಮಾಡಲಾಗಿದೆ. ಈಗಾಗಲೇ ನಡೆದಿರುವ ಜಮೀನು ನೋಂದಣಿಯನ್ನು ರದ್ದುಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ</strong>: ‘ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಒಬೆರಾಯ್ ಹೋಟೆಲ್ಸ್ಗೆ ಹಸ್ತಾಂತರಿಸಲು ಎನ್ಡಿಎ ದೊಡ್ಡ ಪಿತೂರಿ ನಡೆಸಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ’ ಎಂದು ವೈಎಸ್ಆರ್ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ. </p>.<p>‘ಸ್ಥಿರಾಸ್ತಿ ಮಾರ್ಗಸೂಚಿ ದರದ ಪ್ರಕಾರ ₹460ಕೋಟಿಗೂ ಹೆಚ್ಚಿನ ಬೆಲೆಬಾಳುವ, ಮುಕ್ತ ಮಾರುಕಟ್ಟೆಯಲ್ಲಿ ₹3 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯ ಇರುವ, ಅಲಿಪಿರಿ ಸಮೀಪದ ಸುಮಾರು 20 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಯ ₹18 ಕೋಟಿ ಮೌಲ್ಯದ ಜಮೀನಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಟಿಟಿಡಿಯ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಒಬೆರಾಯ್ ಹೋಟೆಲ್ಸ್ ವಶಕ್ಕೆ ಒಪ್ಪಿಸಲು ಎನ್ಡಿಎ ಯೋಜನೆ ರೂಪಿಸಿದೆ’ ಎಂದು ಕರುಣಾಕರ ರೆಡ್ಡಿ ದೂರಿದ್ದಾರೆ. </p>.<p>‘ಎನ್ಡಿಎ ಅತ್ಯಂತ ವ್ಯವಸ್ಥಿತವಾಗಿ ವೆಂಕಟೇಶ್ವರ ಸ್ವಾಮಿಯ ಜಮೀನು ಕೊಳ್ಳೆ ಹೊಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಜಮೀನು ವಿನಿಮಯವು ಪಾರದರ್ಶಕವಾಗಿ ನಡೆದಿಲ್ಲ. ಸದ್ದಿಲ್ಲದೆ ನೋಂದಣಿ ನಡೆದಿದೆ. ಒಟ್ಟಾರೆ ಪ್ರಕ್ರಿಯೆ ಅನುಮಾನ ಮೂಡಿಸುವಂತಿದೆ. ಈಗಾಗಲೇ ಒಬೆರಾಯ್ ಸಮೂಹಕ್ಕೆ ಕಟ್ಟಡ ನಿಧಿ ರೂಪದಲ್ಲಿ ₹2 ಕೋಟಿ ಮತ್ತು ಮುದ್ರಾಂಕ ಮತ್ತು ಇತರೆ ಶುಲ್ಕವಾಗಿ ₹26 ಕೊಟಿ ಮನ್ನಾ ಮಾಡಲಾಗಿದೆ. ಈಗಾಗಲೇ ನಡೆದಿರುವ ಜಮೀನು ನೋಂದಣಿಯನ್ನು ರದ್ದುಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>