ಗುರುಗ್ರಾಮ: ಹರಿಯಾಣದ ನೂಹ್ ಗಲಭೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಿದ ‘ಸುದರ್ಶನ್ ನ್ಯೂಸ್’ನ ವ್ಯವಸ್ಥಾಪಕ ಸಂಪಾದಕ ಮುಕೇಶ್ ಕುಮಾರ್ ಅವರನ್ನು ಗುರುಗ್ರಾಮದ ಸೈಬರ್ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜುಲೈ 31ರಂದು ವಿಶ್ವ ಹಿಂದೂ ಪರಿಷತ್ನ ಮೆರವಣಿಗೆ ಮೇಲೆ ನಡೆದಿದ್ದ ದಾಳಿಯ ಬಳಿಕ ನೂಹ್ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ 6 ಮಂದಿ ಸಾವಿಗೀಡಾಗಿದ್ದರು.