<p><strong>ನವದೆಹಲಿ:</strong> ಜಮ್ಮು–ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್ನ ಮತ್ತೆರಡು ಗುಂಪುಗಳು ಪ್ರತ್ಯೇಕತಾವಾದವನ್ನು ತ್ಯಜಿಸಿ, ಪ್ರಧಾನಿ ನರೇಂದ್ರ ಮೋದಿ ನಿರ್ಮಾಣದ ಹೊಸ ಭಾರತದಲ್ಲಿ ನಂಬಿಕೆ ಇರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. </p>.<p>ಮೋದಿ ಅವರ ಆಡಳಿತದಲ್ಲಿ ಪ್ರತ್ಯೇಕತಾವಾದವು ಕೊನೆಯುಸಿರೆಳೆಯುತ್ತಿವೆ ಮತ್ತು ಕಾಶ್ಮೀರದಾದ್ಯಂತ ಒಗ್ಗಟ್ಟಿಗೆ ಜಯ ಸಿಗುತ್ತಿದೆ ಎಂದು ಶಾ ಹೇಳಿದರು. </p>.<p>‘ಜಮ್ಮು ಮತ್ತು ಕಾಶ್ಮೀರ ತೆಹ್ರೀಕಿ ಇಸ್ತೆಕ್ಲಾಲ್ ಮತ್ತು ಜಮ್ಮು ಮತ್ತು ಕಾಶ್ಮೀರ ತೆಹ್ರೀಕ್–ಇ–ಇಸ್ತಿಕಾಮತ್ ಸಂಘಟನೆಗಳು ಪ್ರತ್ಯೇಕತಾವಾದದಿಂದ ಹೊರಬಂದಿವೆ. ಜೊತೆಗೆ ಮೋದಿ ಅವರ ಹೊಸ ಭಾರತದ ಮೇಲೆ ನಂಬಿಕೆ ಇಟ್ಟಿವೆ’ ಎಂದು ಶಾ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. </p>.<p>‘ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂಮೆಂಟ್’ (ಜೆಕೆಪಿಎಂ) ಮತ್ತು ‘ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಟಿಕ್ ಪೊಲಿಟಿಕಲ್ ಮೂಮೆಂಟ್’ (ಜೆಕೆಡಿಪಿಎಂ) ಸಂಘಟನೆಗಳು ಪ್ರತ್ಯೇಕತಾವಾದದೊಂದಿಗಿನ ಎಲ್ಲ ಸಂಬಂಧಗಳಿಂದ ಹೊರಬಂದಿರುವುದಾಗಿ ಮಂಗಳವಾರವಷ್ಟೇ ಘೋಷಣೆ ಮಾಡಿದ್ದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜಮ್ಮು–ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್ನ ಮತ್ತೆರಡು ಗುಂಪುಗಳು ಪ್ರತ್ಯೇಕತಾವಾದವನ್ನು ತ್ಯಜಿಸಿ, ಪ್ರಧಾನಿ ನರೇಂದ್ರ ಮೋದಿ ನಿರ್ಮಾಣದ ಹೊಸ ಭಾರತದಲ್ಲಿ ನಂಬಿಕೆ ಇರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. </p>.<p>ಮೋದಿ ಅವರ ಆಡಳಿತದಲ್ಲಿ ಪ್ರತ್ಯೇಕತಾವಾದವು ಕೊನೆಯುಸಿರೆಳೆಯುತ್ತಿವೆ ಮತ್ತು ಕಾಶ್ಮೀರದಾದ್ಯಂತ ಒಗ್ಗಟ್ಟಿಗೆ ಜಯ ಸಿಗುತ್ತಿದೆ ಎಂದು ಶಾ ಹೇಳಿದರು. </p>.<p>‘ಜಮ್ಮು ಮತ್ತು ಕಾಶ್ಮೀರ ತೆಹ್ರೀಕಿ ಇಸ್ತೆಕ್ಲಾಲ್ ಮತ್ತು ಜಮ್ಮು ಮತ್ತು ಕಾಶ್ಮೀರ ತೆಹ್ರೀಕ್–ಇ–ಇಸ್ತಿಕಾಮತ್ ಸಂಘಟನೆಗಳು ಪ್ರತ್ಯೇಕತಾವಾದದಿಂದ ಹೊರಬಂದಿವೆ. ಜೊತೆಗೆ ಮೋದಿ ಅವರ ಹೊಸ ಭಾರತದ ಮೇಲೆ ನಂಬಿಕೆ ಇಟ್ಟಿವೆ’ ಎಂದು ಶಾ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. </p>.<p>‘ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂಮೆಂಟ್’ (ಜೆಕೆಪಿಎಂ) ಮತ್ತು ‘ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಟಿಕ್ ಪೊಲಿಟಿಕಲ್ ಮೂಮೆಂಟ್’ (ಜೆಕೆಡಿಪಿಎಂ) ಸಂಘಟನೆಗಳು ಪ್ರತ್ಯೇಕತಾವಾದದೊಂದಿಗಿನ ಎಲ್ಲ ಸಂಬಂಧಗಳಿಂದ ಹೊರಬಂದಿರುವುದಾಗಿ ಮಂಗಳವಾರವಷ್ಟೇ ಘೋಷಣೆ ಮಾಡಿದ್ದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>