<p><strong>ಮುಂಬೈ;</strong> ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವ ಸೇನಾದಿಂದ ಬೆಂಬಲಿಸುವುದಕ್ಕೆ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ.</p>.<p>ಮುರ್ಮು ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಶಿವ ಸೇನಾದ 22 ಸಂಸದರಲ್ಲಿ (19 ಲೋಕಸಭೆ, 3 ರಾಜ್ಯಸಭೆ ಸದಸ್ಯರು) 16 ಸಂಸದರು ಠಾಕ್ರೆ ಅವರ ಮೇಲೆ ಒತ್ತಡ ಹೇರಿದ್ದರು.</p>.<p>ಇದಕ್ಕೆ ಠಾಕ್ರೆ ಅವರು ಇಂದುಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ವಾರವಷ್ಟೆ ಶಿವ ಸೇನಾದ 40 ಕ್ಕೂ ಅಧಿಕ ಶಾಸಕರು ಬಂಡಾಯ ಎದ್ದು ಠಾಕ್ರೆ ಸರ್ಕಾರವನ್ನು ಪದಚ್ಯುತಗೊಳಿಸಿದ್ದರು. ಏಕನಾಥ ಶಿಂಧೆ ಸಿಎಂ ಆಗಿದ್ದರು.</p>.<p>ಅದಕ್ಕೂ ಮೊದಲು ಲೋಕಸಭೆಯ ವಿರೋಧ ಪಕ್ಷಗಳು ಒಮ್ಮತದಿಂದ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಬೆಂಬಲಿಸಿದ್ದರು. ಇದಕ್ಕೆ ಶಿವ ಸೇನಾ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ಶಿವ ಸೇನೆ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಂತಾಗಿದೆ.</p>.<p>ಮುರ್ಮು ಅವರು ಒಬ್ಬ ಮಹಿಳೆ ಹಾಗೂ ಆದಿವಾಸಿ ಸಮುದಾಯಕ್ಕೆ ರಾಷ್ಟ್ರಪತಿ ಹುದ್ದೆ ಸಿಗುವುದು ಹೆಮ್ಮೆಯ ವಿಷಯ. ಶೇ 10 ರಷ್ಟು ಆದಿವಾಸಿ ಜನಾಂಗವನ್ನು ಹೊಂದಿರುವ ಮಹಾರಾಷ್ಟ್ರದಿಂದ ಅವರನ್ನು ನಾವು ಬೆಂಬಲಿಸಬೇಕು ಎಂಬ ಒತ್ತಾಸೆಯನ್ನು ಠಾಕ್ರೆ ಮೇಲೆ ಸೇನಾ ಸಂಸದರು ಹೇರಿದ್ದರು.</p>.<p>22 ಸಂಸದರಲ್ಲಿ 6 ಸಂಸದರು ಏಕನಾಥ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜುಲೈ 18 ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮುರ್ಮು ಅವರ ಆಯ್ಕೆ ನಿಚ್ಚಳವಾಗಿದೆ. ಅವರಿಗೆ ಜೆಡಿಎಸ್, ಟಿಡಿಪಿ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ.</p>.<p><a href="https://www.prajavani.net/entertainment/cinema/actress-priya-anand-clarifies-about-her-controversial-remark-on-nityanand-swami-953681.html" itemprop="url">ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ;</strong> ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವ ಸೇನಾದಿಂದ ಬೆಂಬಲಿಸುವುದಕ್ಕೆ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ.</p>.<p>ಮುರ್ಮು ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಶಿವ ಸೇನಾದ 22 ಸಂಸದರಲ್ಲಿ (19 ಲೋಕಸಭೆ, 3 ರಾಜ್ಯಸಭೆ ಸದಸ್ಯರು) 16 ಸಂಸದರು ಠಾಕ್ರೆ ಅವರ ಮೇಲೆ ಒತ್ತಡ ಹೇರಿದ್ದರು.</p>.<p>ಇದಕ್ಕೆ ಠಾಕ್ರೆ ಅವರು ಇಂದುಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ವಾರವಷ್ಟೆ ಶಿವ ಸೇನಾದ 40 ಕ್ಕೂ ಅಧಿಕ ಶಾಸಕರು ಬಂಡಾಯ ಎದ್ದು ಠಾಕ್ರೆ ಸರ್ಕಾರವನ್ನು ಪದಚ್ಯುತಗೊಳಿಸಿದ್ದರು. ಏಕನಾಥ ಶಿಂಧೆ ಸಿಎಂ ಆಗಿದ್ದರು.</p>.<p>ಅದಕ್ಕೂ ಮೊದಲು ಲೋಕಸಭೆಯ ವಿರೋಧ ಪಕ್ಷಗಳು ಒಮ್ಮತದಿಂದ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಬೆಂಬಲಿಸಿದ್ದರು. ಇದಕ್ಕೆ ಶಿವ ಸೇನಾ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ಶಿವ ಸೇನೆ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಂತಾಗಿದೆ.</p>.<p>ಮುರ್ಮು ಅವರು ಒಬ್ಬ ಮಹಿಳೆ ಹಾಗೂ ಆದಿವಾಸಿ ಸಮುದಾಯಕ್ಕೆ ರಾಷ್ಟ್ರಪತಿ ಹುದ್ದೆ ಸಿಗುವುದು ಹೆಮ್ಮೆಯ ವಿಷಯ. ಶೇ 10 ರಷ್ಟು ಆದಿವಾಸಿ ಜನಾಂಗವನ್ನು ಹೊಂದಿರುವ ಮಹಾರಾಷ್ಟ್ರದಿಂದ ಅವರನ್ನು ನಾವು ಬೆಂಬಲಿಸಬೇಕು ಎಂಬ ಒತ್ತಾಸೆಯನ್ನು ಠಾಕ್ರೆ ಮೇಲೆ ಸೇನಾ ಸಂಸದರು ಹೇರಿದ್ದರು.</p>.<p>22 ಸಂಸದರಲ್ಲಿ 6 ಸಂಸದರು ಏಕನಾಥ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜುಲೈ 18 ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮುರ್ಮು ಅವರ ಆಯ್ಕೆ ನಿಚ್ಚಳವಾಗಿದೆ. ಅವರಿಗೆ ಜೆಡಿಎಸ್, ಟಿಡಿಪಿ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ.</p>.<p><a href="https://www.prajavani.net/entertainment/cinema/actress-priya-anand-clarifies-about-her-controversial-remark-on-nityanand-swami-953681.html" itemprop="url">ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>