<p><strong>ನವದೆಹಲಿ</strong>: ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ₹ 7.25 ಕೋಟಿ ವೆಚ್ಚದಲ್ಲಿ, ಕೃಷ್ಣಮೂರ್ತಿ ವಿ.ಸುಬ್ರಹ್ಮಣಿಯನ್ ರಚಿಸಿರುವ ಕೃತಿಯ 2 ಲಕ್ಷ ಪ್ರತಿಗಳನ್ನು ಖರೀದಿಸಿದೆ. ಇದರ ಹಿಂದಿನ ಹಿತಾಸಕ್ತಿ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. </p>.<p>‘ಇಂಡಿಯಾ@100: ಎನ್ವಿಷನಿಂಗ್ ಟುಮಾರೊ‘ಸ್ ಎಕನಾಮಿಕ್ ಪವರ್ ಹೌಸ್’ ಶೀರ್ಷಿಕೆಯ 1,99,872 ಪ್ರತಿಗಳನ್ನು ಬ್ಯಾಂಕ್ ಖರೀದಿಸಿದೆ. ₹ 3.5 ಕೋಟಿಯನ್ನು ಮುಂಗಡವಾಗಿ ಪಾವತಿಸಿದೆ. ಉಳಿದ ಮೊತ್ತ ಪಾವತಿಸಿ ‘ಇತರೆ ವೆಚ್ಚ’ಗಳಡಿ ನಮೂದಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ ಎಂದು ಆರೋಪಿಸಿದೆ. </p>.<p>ಸುಬ್ರಹ್ಮಣಿಯನ್ ಅವರು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಒಂದೆರಡು ದಿನಗಳ ಹಿಂದಷ್ಟೇ ಅಂತರ ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನದಿಂದ ಪದಚ್ಯುತಗೊಂಡಿದ್ದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನೆತ್ ಅವರು, ‘ಬ್ಯಾಂಕ್ನ ದಾಖಲೆಗಳ ಪ್ರಕಾರ, ಕಳೆದ ವರ್ಷ ಜೂನ್–ಜುಲೈ ತಿಂಗಳಲ್ಲಿ 1.99 ಲಕ್ಷ ಪ್ರತಿಗಳ ಖರೀದಿಗೆ ಆದೇಶಿಸಲಾಗಿದೆ’ ಎಂದರು.</p>.<p>‘ಪ್ರಧಾನಿ ಮೋದಿ ಮತ್ತು ಬಿಜೆಪಿಯ ಹೊಗಳುಭಟ’ರಾಗಿದ್ದವರ ಈ ಕೃತಿಯ ಪ್ರತಿಗಳನ್ನು ಬ್ಯಾಂಕ್ನ ವಲಯ, ಪ್ರಾದೇಶಿಕ ಕಚೇರಿಗಳ ಮೂಲಕ ವಿದ್ಯಾರ್ಥಿಗಳು, ಖಾತೆದಾರರು, ಕಾಲೇಜುಗಳು, ಗ್ರಂಥಾಲಯಗಳಿಗೆ ವಿತರಿಸಲಾಗಿದೆ’ ಎಂದು ಶ್ರೀನೆತ್ ತಿಳಿಸಿದರು.</p>.<p>‘ಕೋವಿಡ್ ವೇಳೆ ಇದೇ ವ್ಯಕ್ತಿಯು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಆ ಅವಧಿಯಲ್ಲಿ ದೇಶ ಶೇ 24ರಷ್ಟು ಆರ್ಥಿಕ ಕುಸಿತ ಕಂಡಿತ್ತು. ಆಗ ಅವರು ಆರ್ಥಿಕ ಸಲಹೆ ನೀಡಿದ್ದಕ್ಕಿಂತಲೂ ಸರ್ಕಾರವನ್ನು ಹೊಗಳಿದ್ದೇ ಹೆಚ್ಚು’ ಎಂದು ಟೀಕಿಸಿದರು.</p>.<p>’ಬೃಹತ್ ಸಂಖ್ಯೆಯಲ್ಲಿ ಪ್ರತಿಗಳನ್ನು ಖರೀದಿಸಿರುವ ಬ್ಯಾಂಕ್ನ ನಡೆ ಕುರಿತು ತನಿಖೆಗೆ ಆಗ್ರಹಿಸಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ಸಮಗ್ರ ವಿವರ ನೀಡುತ್ತಾರೆ‘ ಎಂದು ಆಶಿಸಿದರು.</p>.<p>ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಅಧಿಕಾರವಧಿಯ ವಿಸ್ತರಣೆ ನಿರೀಕ್ಷೆಯಲ್ಲಿರುವ ಯೂನಿಯನ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಎ.ಮಣಿಮೇಖಲೈ ಅವರು, ಈ ವಹಿವಾಟಿನ ಮೂಲಕ ‘ತಮ್ಮ ಅವಧಿಯ ವಿಸ್ತರಣೆಗಾಗಿ ಪರೋಕ್ಷವಾಗಿ ಲಂಚ ನೀಡಿದ್ದಾರೆಯೇ’ ಎಂದು ಶ್ರೀನೆತ್ ಪ್ರಶ್ನಿಸಿದರು.</p>.<p>ಕೃತಿಗಳನ್ನು ಖರೀದಿಸುವ ಪೂರ್ವಭಾವಿಯಾಗಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಹಣಕಾಸು ಸೇವೆಗಳ ಇಲಾಖೆಯ ಅನುಮೋದನೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ₹ 7.25 ಕೋಟಿ ವೆಚ್ಚದಲ್ಲಿ, ಕೃಷ್ಣಮೂರ್ತಿ ವಿ.ಸುಬ್ರಹ್ಮಣಿಯನ್ ರಚಿಸಿರುವ ಕೃತಿಯ 2 ಲಕ್ಷ ಪ್ರತಿಗಳನ್ನು ಖರೀದಿಸಿದೆ. ಇದರ ಹಿಂದಿನ ಹಿತಾಸಕ್ತಿ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. </p>.<p>‘ಇಂಡಿಯಾ@100: ಎನ್ವಿಷನಿಂಗ್ ಟುಮಾರೊ‘ಸ್ ಎಕನಾಮಿಕ್ ಪವರ್ ಹೌಸ್’ ಶೀರ್ಷಿಕೆಯ 1,99,872 ಪ್ರತಿಗಳನ್ನು ಬ್ಯಾಂಕ್ ಖರೀದಿಸಿದೆ. ₹ 3.5 ಕೋಟಿಯನ್ನು ಮುಂಗಡವಾಗಿ ಪಾವತಿಸಿದೆ. ಉಳಿದ ಮೊತ್ತ ಪಾವತಿಸಿ ‘ಇತರೆ ವೆಚ್ಚ’ಗಳಡಿ ನಮೂದಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ ಎಂದು ಆರೋಪಿಸಿದೆ. </p>.<p>ಸುಬ್ರಹ್ಮಣಿಯನ್ ಅವರು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಒಂದೆರಡು ದಿನಗಳ ಹಿಂದಷ್ಟೇ ಅಂತರ ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನದಿಂದ ಪದಚ್ಯುತಗೊಂಡಿದ್ದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನೆತ್ ಅವರು, ‘ಬ್ಯಾಂಕ್ನ ದಾಖಲೆಗಳ ಪ್ರಕಾರ, ಕಳೆದ ವರ್ಷ ಜೂನ್–ಜುಲೈ ತಿಂಗಳಲ್ಲಿ 1.99 ಲಕ್ಷ ಪ್ರತಿಗಳ ಖರೀದಿಗೆ ಆದೇಶಿಸಲಾಗಿದೆ’ ಎಂದರು.</p>.<p>‘ಪ್ರಧಾನಿ ಮೋದಿ ಮತ್ತು ಬಿಜೆಪಿಯ ಹೊಗಳುಭಟ’ರಾಗಿದ್ದವರ ಈ ಕೃತಿಯ ಪ್ರತಿಗಳನ್ನು ಬ್ಯಾಂಕ್ನ ವಲಯ, ಪ್ರಾದೇಶಿಕ ಕಚೇರಿಗಳ ಮೂಲಕ ವಿದ್ಯಾರ್ಥಿಗಳು, ಖಾತೆದಾರರು, ಕಾಲೇಜುಗಳು, ಗ್ರಂಥಾಲಯಗಳಿಗೆ ವಿತರಿಸಲಾಗಿದೆ’ ಎಂದು ಶ್ರೀನೆತ್ ತಿಳಿಸಿದರು.</p>.<p>‘ಕೋವಿಡ್ ವೇಳೆ ಇದೇ ವ್ಯಕ್ತಿಯು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಆ ಅವಧಿಯಲ್ಲಿ ದೇಶ ಶೇ 24ರಷ್ಟು ಆರ್ಥಿಕ ಕುಸಿತ ಕಂಡಿತ್ತು. ಆಗ ಅವರು ಆರ್ಥಿಕ ಸಲಹೆ ನೀಡಿದ್ದಕ್ಕಿಂತಲೂ ಸರ್ಕಾರವನ್ನು ಹೊಗಳಿದ್ದೇ ಹೆಚ್ಚು’ ಎಂದು ಟೀಕಿಸಿದರು.</p>.<p>’ಬೃಹತ್ ಸಂಖ್ಯೆಯಲ್ಲಿ ಪ್ರತಿಗಳನ್ನು ಖರೀದಿಸಿರುವ ಬ್ಯಾಂಕ್ನ ನಡೆ ಕುರಿತು ತನಿಖೆಗೆ ಆಗ್ರಹಿಸಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ಸಮಗ್ರ ವಿವರ ನೀಡುತ್ತಾರೆ‘ ಎಂದು ಆಶಿಸಿದರು.</p>.<p>ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಅಧಿಕಾರವಧಿಯ ವಿಸ್ತರಣೆ ನಿರೀಕ್ಷೆಯಲ್ಲಿರುವ ಯೂನಿಯನ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಎ.ಮಣಿಮೇಖಲೈ ಅವರು, ಈ ವಹಿವಾಟಿನ ಮೂಲಕ ‘ತಮ್ಮ ಅವಧಿಯ ವಿಸ್ತರಣೆಗಾಗಿ ಪರೋಕ್ಷವಾಗಿ ಲಂಚ ನೀಡಿದ್ದಾರೆಯೇ’ ಎಂದು ಶ್ರೀನೆತ್ ಪ್ರಶ್ನಿಸಿದರು.</p>.<p>ಕೃತಿಗಳನ್ನು ಖರೀದಿಸುವ ಪೂರ್ವಭಾವಿಯಾಗಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಹಣಕಾಸು ಸೇವೆಗಳ ಇಲಾಖೆಯ ಅನುಮೋದನೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>