<p><strong>ನವದೆಹಲಿ, ಹೈದರಾಬಾದ್:</strong> ದೇಶದಲ್ಲಿ ಇದುವರೆಗೆ 84 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ಈ 84 ಮಂದಿ ಜತೆ ಸಂಪರ್ಕಕ್ಕೆ ಬಂದ 4000 ಮಂದಿ ಮೇಲೆ ನಿಗಾವಹಿಸಲಾಗಿದೆ.</p>.<p>‘ಉತ್ತರ ಪ್ರದೇಶದಲ್ಲಿ ಐವರು ಹಾಗೂ ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರಲ್ಲಿ ಕೋವಿಡ್-19 ದೃಢಪಟ್ಟಿತ್ತು. ಇವರಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿದ್ದರಿಂದ ಮನೆಗೆ ಕಳುಹಿಸಲಾಯಿತು’ ಎಂದು ತಿಳಿಸಿದ್ದಾರೆ.</p>.<p>ಇಟಲಿಯ ಮಿಲನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಏರ್ ಇಂಡಿಯಾದ ವಿಶೇಷ ವಿಮಾನವನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ವಿದೇಶದಿಂದ ಬಂದ ಸುಮಾರು 12 ಲಕ್ಷ ಪ್ರಯಾಣಿ ಕರನ್ನು ಕೊರೊನಾ ವೈರಸ್ ತಪಾ ಸಣೆಗೆ ಒಳಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೈದರಾಬಾದ್ನಲ್ಲಿ ತಿಳಿಸಿದ್ದಾರೆ.</p>.<p>ದೇಶದ 30 ವಿಮಾನ ನಿಲ್ದಾಣಗಳಲ್ಲಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ.</p>.<p><strong>ಪರಾರಿಯಾಗಿದ್ದ ಅಮೆರಿಕ ದಂಪತಿ ಪತ್ತೆ(ಆಲಪ್ಪುಳ, ಕೇರಳ):</strong> ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅಮೆರಿಕದ ದಂಪತಿ ಆಸ್ಪತ್ರೆಯಿಂದ ಪರಾರಿಯಾದ ಬಳಿಕ ಮತ್ತೆ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದೆ.</p>.<p>ಈ ದಂಪತಿಯನ್ನು ಶುಕ್ರವಾರ ತಡರಾತ್ರಿ ಪತ್ತೆ ಮಾಡಲಾಗಿದ್ದು, ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರತ್ಯೇಕವಾಗಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರ್ಚ್ 9ರಂದು ದೋಹಾ ಮೂಲಕ ಲಂಡನ್ನಿಂದ ಕೊಚ್ಚಿಗೆ ಬಂದಿದ್ದ ಈ ದಂಪತಿ, ಮರುದಿನ ಅಲಪ್ಪುಳಗೆ ತೆರಳಿದ್ದರು. ನಂತರ ತಿರುವನಂತಪುರದ ವರ್ಕಾಲಾಗೆ ತೆರಳಿ ಅಲಪ್ಪುಳಗೆ ಹಿಂತಿರುಗಿದ್ದರು.</p>.<p>ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಈ ದಂಪತಿಯನ್ನು ಪ್ರತ್ಯೇಕವಾದ ವಾರ್ಡ್ನಲ್ಲಿರಿಸಲಾಗಿತ್ತು. ಅದರೆ, ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ತೆರಳಿದ್ದರು.</p>.<p>ಇನ್ನೊಂದೆಡೆ, ಶುಕ್ರವಾರ ಕೋವಿಡ್ 19 ದೃಢಪಟ್ಟಿದ್ದ ಇಟಲಿಯ ಪ್ರವಾಸಿಗನ ಜತೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡುವ ಕಾರ್ಯವೂ ನಡೆದಿದೆ. ಈತ ಫೆಬ್ರುವರಿ 27ರಂದು ದೆಹಲಿಯಿಂದ ಬಂದಿದ್ದ.</p>.<p><strong>‘ಸುಪ್ರೀಂ’ನ ಆರು ಪೀಠಗಳು ಮಾತ್ರ ಕಾರ್ಯನಿರ್ವಹಣೆ</strong><br />*ಮಾರ್ಚ್ 16ರಿಂದ ಸುಪ್ರೀಂ ಕೋರ್ಟ್ನ 15 ಪೀಠಗಳಲ್ಲಿ 6 ಪೀಠಗಳು ಮಾತ್ರ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ. 6 ಪ್ರತ್ಯೇಕ ಪೀಠಗಳಲ್ಲಿ ತಲಾ ಇಬ್ಬರು ನ್ಯಾಯಮೂರ್ತಿಗಳಿಂದ ವಿಚಾರಣೆ</p>.<p>*ಗೋವಾದಲ್ಲಿ ಮಾರ್ಚ್ 31ರವರೆಗೆ ಪಬ್ಗಳು, ಕ್ಯಾಸಿನೊಗಳು, ಕ್ಲಬ್ಗಳು, ಜಿಮ್ಗಳು, ಸ್ಪಾಗಳು, ಬೋಟ್ ಕ್ರೂಸ್ಗಳನ್ನು ಮುಚ್ಚಲು ಸರ್ಕಾರದ ಆದೇಶ</p>.<p>*ಕೋವಿಡ್ 19ನಿಂದ ಮೃತಪಟ್ಟವರ ಪಾರ್ಥಿವ ಶರೀರ ಅಂತ್ಯಕ್ರಿಯೆಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ</p>.<p>*ಮಹಾರಾಷ್ಟ್ರದಲ್ಲಿ ಮತ್ತೆ ಐವರಲ್ಲಿ ಸೋಂಕು. ಇದರಿಂದಾಗಿ, ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿಕೆ</p>.<p>*ಪಶ್ಚಿಮ ಬಂಗಾಳ ವಿಧಾನಸಭೆಗೆ ಪತ್ರಕರ್ತರು ಮತ್ತು ಸಂದರ್ಶನಕಾರ ಪ್ರವೇಶಕ್ಕೆ ನಿರ್ಬಂಧ</p>.<p>*ಹಿಮಾಚಲ ಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳು, ಚಿತ್ರಮಂದಿರಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಆದೇಶ.</p>.<p>*ಮಾರ್ಚ್ 22ರವರೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಲ್ಲ ತರಗತಿಗಳು ರದ್ದು.</p>.<p>*ಅಮೆರಿಕ ರಾಯಭಾರ ಕಚೇರಿ ಮತ್ತು ಕಾನ್ಸಲೇಟ್ಗಳು ವೀಸಾ ಸಂದರ್ಶನವನ್ನು ಮಾರ್ಚ್ 16ರವರೆಗೆ ರದ್ದುಪಡಿಸಿವೆ.</p>.<p>*ಮಾರ್ಚ್ 16ರಿಂದ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ: ಬಾಂಬೆ ಹೈಕೋರ್ಟ್</p>.<p>*ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ: ಇಟಲಿಯಿಂದ ಹಿಂತಿರುಗಿದ್ದ ವ್ಯಕ್ತಿಗೆ ಸೋಂಕು, ಒಟ್ಟು</p>.<p>*ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಹೈದರಾಬಾದ್:</strong> ದೇಶದಲ್ಲಿ ಇದುವರೆಗೆ 84 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ಈ 84 ಮಂದಿ ಜತೆ ಸಂಪರ್ಕಕ್ಕೆ ಬಂದ 4000 ಮಂದಿ ಮೇಲೆ ನಿಗಾವಹಿಸಲಾಗಿದೆ.</p>.<p>‘ಉತ್ತರ ಪ್ರದೇಶದಲ್ಲಿ ಐವರು ಹಾಗೂ ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರಲ್ಲಿ ಕೋವಿಡ್-19 ದೃಢಪಟ್ಟಿತ್ತು. ಇವರಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿದ್ದರಿಂದ ಮನೆಗೆ ಕಳುಹಿಸಲಾಯಿತು’ ಎಂದು ತಿಳಿಸಿದ್ದಾರೆ.</p>.<p>ಇಟಲಿಯ ಮಿಲನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಏರ್ ಇಂಡಿಯಾದ ವಿಶೇಷ ವಿಮಾನವನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ವಿದೇಶದಿಂದ ಬಂದ ಸುಮಾರು 12 ಲಕ್ಷ ಪ್ರಯಾಣಿ ಕರನ್ನು ಕೊರೊನಾ ವೈರಸ್ ತಪಾ ಸಣೆಗೆ ಒಳಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೈದರಾಬಾದ್ನಲ್ಲಿ ತಿಳಿಸಿದ್ದಾರೆ.</p>.<p>ದೇಶದ 30 ವಿಮಾನ ನಿಲ್ದಾಣಗಳಲ್ಲಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ.</p>.<p><strong>ಪರಾರಿಯಾಗಿದ್ದ ಅಮೆರಿಕ ದಂಪತಿ ಪತ್ತೆ(ಆಲಪ್ಪುಳ, ಕೇರಳ):</strong> ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅಮೆರಿಕದ ದಂಪತಿ ಆಸ್ಪತ್ರೆಯಿಂದ ಪರಾರಿಯಾದ ಬಳಿಕ ಮತ್ತೆ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದೆ.</p>.<p>ಈ ದಂಪತಿಯನ್ನು ಶುಕ್ರವಾರ ತಡರಾತ್ರಿ ಪತ್ತೆ ಮಾಡಲಾಗಿದ್ದು, ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರತ್ಯೇಕವಾಗಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರ್ಚ್ 9ರಂದು ದೋಹಾ ಮೂಲಕ ಲಂಡನ್ನಿಂದ ಕೊಚ್ಚಿಗೆ ಬಂದಿದ್ದ ಈ ದಂಪತಿ, ಮರುದಿನ ಅಲಪ್ಪುಳಗೆ ತೆರಳಿದ್ದರು. ನಂತರ ತಿರುವನಂತಪುರದ ವರ್ಕಾಲಾಗೆ ತೆರಳಿ ಅಲಪ್ಪುಳಗೆ ಹಿಂತಿರುಗಿದ್ದರು.</p>.<p>ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಈ ದಂಪತಿಯನ್ನು ಪ್ರತ್ಯೇಕವಾದ ವಾರ್ಡ್ನಲ್ಲಿರಿಸಲಾಗಿತ್ತು. ಅದರೆ, ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ತೆರಳಿದ್ದರು.</p>.<p>ಇನ್ನೊಂದೆಡೆ, ಶುಕ್ರವಾರ ಕೋವಿಡ್ 19 ದೃಢಪಟ್ಟಿದ್ದ ಇಟಲಿಯ ಪ್ರವಾಸಿಗನ ಜತೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡುವ ಕಾರ್ಯವೂ ನಡೆದಿದೆ. ಈತ ಫೆಬ್ರುವರಿ 27ರಂದು ದೆಹಲಿಯಿಂದ ಬಂದಿದ್ದ.</p>.<p><strong>‘ಸುಪ್ರೀಂ’ನ ಆರು ಪೀಠಗಳು ಮಾತ್ರ ಕಾರ್ಯನಿರ್ವಹಣೆ</strong><br />*ಮಾರ್ಚ್ 16ರಿಂದ ಸುಪ್ರೀಂ ಕೋರ್ಟ್ನ 15 ಪೀಠಗಳಲ್ಲಿ 6 ಪೀಠಗಳು ಮಾತ್ರ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ. 6 ಪ್ರತ್ಯೇಕ ಪೀಠಗಳಲ್ಲಿ ತಲಾ ಇಬ್ಬರು ನ್ಯಾಯಮೂರ್ತಿಗಳಿಂದ ವಿಚಾರಣೆ</p>.<p>*ಗೋವಾದಲ್ಲಿ ಮಾರ್ಚ್ 31ರವರೆಗೆ ಪಬ್ಗಳು, ಕ್ಯಾಸಿನೊಗಳು, ಕ್ಲಬ್ಗಳು, ಜಿಮ್ಗಳು, ಸ್ಪಾಗಳು, ಬೋಟ್ ಕ್ರೂಸ್ಗಳನ್ನು ಮುಚ್ಚಲು ಸರ್ಕಾರದ ಆದೇಶ</p>.<p>*ಕೋವಿಡ್ 19ನಿಂದ ಮೃತಪಟ್ಟವರ ಪಾರ್ಥಿವ ಶರೀರ ಅಂತ್ಯಕ್ರಿಯೆಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ</p>.<p>*ಮಹಾರಾಷ್ಟ್ರದಲ್ಲಿ ಮತ್ತೆ ಐವರಲ್ಲಿ ಸೋಂಕು. ಇದರಿಂದಾಗಿ, ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿಕೆ</p>.<p>*ಪಶ್ಚಿಮ ಬಂಗಾಳ ವಿಧಾನಸಭೆಗೆ ಪತ್ರಕರ್ತರು ಮತ್ತು ಸಂದರ್ಶನಕಾರ ಪ್ರವೇಶಕ್ಕೆ ನಿರ್ಬಂಧ</p>.<p>*ಹಿಮಾಚಲ ಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳು, ಚಿತ್ರಮಂದಿರಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಆದೇಶ.</p>.<p>*ಮಾರ್ಚ್ 22ರವರೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಲ್ಲ ತರಗತಿಗಳು ರದ್ದು.</p>.<p>*ಅಮೆರಿಕ ರಾಯಭಾರ ಕಚೇರಿ ಮತ್ತು ಕಾನ್ಸಲೇಟ್ಗಳು ವೀಸಾ ಸಂದರ್ಶನವನ್ನು ಮಾರ್ಚ್ 16ರವರೆಗೆ ರದ್ದುಪಡಿಸಿವೆ.</p>.<p>*ಮಾರ್ಚ್ 16ರಿಂದ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ: ಬಾಂಬೆ ಹೈಕೋರ್ಟ್</p>.<p>*ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ: ಇಟಲಿಯಿಂದ ಹಿಂತಿರುಗಿದ್ದ ವ್ಯಕ್ತಿಗೆ ಸೋಂಕು, ಒಟ್ಟು</p>.<p>*ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>