<p><strong>ನವದೆಹಲಿ:</strong> ಕೇಂದ್ರ ಸರ್ಕಾರವು ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ರಾಜ್ಯದಾದ್ಯಂತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್ಎಸ್ಪಿಎ) ಮತ್ತೆ ಆರು ತಿಂಗಳು ವಿಸ್ತರಿಸಿದೆ. </p><p>ನಾಗಾಲ್ಯಾಂಡ್ನ ಎಂಟು ಜಿಲ್ಲೆಗಳು ಸೇರಿದಂತೆ ಅರುಣಾಚಲ ಪ್ರದೇಶದ ತಿರಪ್, ಚಾಂಗ್ಲಾಂಗ್, ಲಾಂಗ್ಡಿಂಗ್ ಜಿಲ್ಲೆಗಳು ಮತ್ತು ನಮ್ಸೈ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಎಎಫ್ಎಸ್ಪಿಎ ಅನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ</p><p>ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನೆಗೆ ಶೋಧ ಕಾರ್ಯಾಚರಣೆ, ಬಂಧನ ಮತ್ತು ಕಂಡಲ್ಲಿ ಗುಂಡು ಹಾರಿಸಲು ವಿಶೇಷಾಧಿಕಾರ ಕಾಯ್ದೆಯಡಿ ಸಂಪೂರ್ಣ ಅಧಿಕಾರವಿದೆ.</p><p>ಸದ್ಯ ಮಣಿಪುರದ ಇಂಫಾಲ್, ಲ್ಯಾಂಫಾಲ್, ಸಿಂಗ್ಜಮೇಯಿ, ಪಟ್ಸೋಯ್, ವಾಂಗೋಯ್, ಪೊರೊಂಪತ್, ಹೀಂಗಾಂಗ್, ಇರಿಲ್ಬಂಗ್, ಥೌಬಲ್, ಬಿಷ್ಣುಪು, ನಂಬೋಲ್ ಮತ್ತು ಕಕ್ಚಿಂಗ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಎಫ್ಎಸ್ಪಿಎ ಜಾರಿಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಸಂಪಾದಕೀಯ | ಮಣಿಪುರ: ಶಾಂತಿ ಸ್ಥಾಪನೆಗೆ ಬೇಕಿದೆ ವಿಶ್ವಾಸ ಮೂಡಿಸುವ ಕೆಲಸ.ಮಣಿಪುರ: ಶಾಂತಿ ಸ್ಥಾಪನೆಗೆ ಸಮಿತಿ ರಚಿಸಿದ ಕೇಂದ್ರ.ಮಣಿಪುರ: ಶಾಂತಿ ಸ್ಥಾಪನೆಗೆ ಅಮಿತ್ ಶಾ ಮನವಿ.ಮಣಿಪುರ: ಶಾಂತಿ ಮರುಸ್ಥಾಪನೆಗೆ ಕೆಲಸ- ಲೋಕಸಭೆಯಲ್ಲಿ ಪ್ರಧಾನಿ ಭರವಸೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರ ಸರ್ಕಾರವು ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ರಾಜ್ಯದಾದ್ಯಂತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್ಎಸ್ಪಿಎ) ಮತ್ತೆ ಆರು ತಿಂಗಳು ವಿಸ್ತರಿಸಿದೆ. </p><p>ನಾಗಾಲ್ಯಾಂಡ್ನ ಎಂಟು ಜಿಲ್ಲೆಗಳು ಸೇರಿದಂತೆ ಅರುಣಾಚಲ ಪ್ರದೇಶದ ತಿರಪ್, ಚಾಂಗ್ಲಾಂಗ್, ಲಾಂಗ್ಡಿಂಗ್ ಜಿಲ್ಲೆಗಳು ಮತ್ತು ನಮ್ಸೈ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಎಎಫ್ಎಸ್ಪಿಎ ಅನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ</p><p>ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನೆಗೆ ಶೋಧ ಕಾರ್ಯಾಚರಣೆ, ಬಂಧನ ಮತ್ತು ಕಂಡಲ್ಲಿ ಗುಂಡು ಹಾರಿಸಲು ವಿಶೇಷಾಧಿಕಾರ ಕಾಯ್ದೆಯಡಿ ಸಂಪೂರ್ಣ ಅಧಿಕಾರವಿದೆ.</p><p>ಸದ್ಯ ಮಣಿಪುರದ ಇಂಫಾಲ್, ಲ್ಯಾಂಫಾಲ್, ಸಿಂಗ್ಜಮೇಯಿ, ಪಟ್ಸೋಯ್, ವಾಂಗೋಯ್, ಪೊರೊಂಪತ್, ಹೀಂಗಾಂಗ್, ಇರಿಲ್ಬಂಗ್, ಥೌಬಲ್, ಬಿಷ್ಣುಪು, ನಂಬೋಲ್ ಮತ್ತು ಕಕ್ಚಿಂಗ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಎಫ್ಎಸ್ಪಿಎ ಜಾರಿಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಸಂಪಾದಕೀಯ | ಮಣಿಪುರ: ಶಾಂತಿ ಸ್ಥಾಪನೆಗೆ ಬೇಕಿದೆ ವಿಶ್ವಾಸ ಮೂಡಿಸುವ ಕೆಲಸ.ಮಣಿಪುರ: ಶಾಂತಿ ಸ್ಥಾಪನೆಗೆ ಸಮಿತಿ ರಚಿಸಿದ ಕೇಂದ್ರ.ಮಣಿಪುರ: ಶಾಂತಿ ಸ್ಥಾಪನೆಗೆ ಅಮಿತ್ ಶಾ ಮನವಿ.ಮಣಿಪುರ: ಶಾಂತಿ ಮರುಸ್ಥಾಪನೆಗೆ ಕೆಲಸ- ಲೋಕಸಭೆಯಲ್ಲಿ ಪ್ರಧಾನಿ ಭರವಸೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>