ಅಹಮದಾಬಾದ್ ನಿವಾಸಿಯಾಗಿದ್ದ ದರ್ಶನ್ ಅವರು ಪ್ರಥಮ ವರ್ಷದ ಬಿ.ಟೆಕ್ (ಕೆಮಿಕಲ್) ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರದ ಈ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ್ದ ಬಾಂಬೆ ಐಐಟಿ, ಜಾತಿ ತಾರತಮ್ಯದ ಆರೋಪವನ್ನು ತಿರಸ್ಕರಿಸಿತ್ತು. ಅಲ್ಲದೇ, ದರ್ಶನ್ ಅವರ ಸ್ನೇಹಿತರಿಂದ ಮಾಹಿತಿ ಪಡೆದಿದ್ದು, ಅವರ ಹೇಳಿಕೆಯು ಯಾವುದೇ ತಾರತಮ್ಯವಿಲ್ಲ ಎಂದು ಸೂಚಿಸಿದೆ ಎಂದೂ ಐಐಟಿ ಹೇಳಿತ್ತು. ಆದ್ದರಿಂದ, ಆಂತರಿಕ ಹಾಗೂ ಪೊಲೀಸ್ ತನಿಖೆಗೆ ಕಾಯುವಂತೆ ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿತ್ತು.